Get Updates
Get notified of breaking news, exclusive insights, and must-see stories!

Karnataka Dam Water Level Today: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ಸಂಗ್ರಹ ಮಟ್ಟ ಎಷ್ಟಿದೆ?

ಬೆಂಗಳೂರು, ನವೆಂಬರ್ 15: ಕರ್ನಾಟಕದಾದ್ಯಂತ ಹಿಂಗಾರು ಮಳೆ ಸಕ್ರಿಯಗೊಂಡಿದೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ಓಡಾಟ ನಿರಂತರವಾಗಿದ್ದು, ದಕ್ಷಿಣ ಒಳನಾಡಿಗೆ ಅತ್ಯಧಿಕ ಮಳೆ ಅಗುತ್ತಿದೆ. ಕಳೆದ 15 ದಿನಗಳಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಆಗಿದೆ. ಒಳಹರಿವು ಹೆಚ್ಚಾಗಿದ್ದು, ತಕ್ಕ ಮಟ್ಟಿನ ನೀರನ್ನು ಸರ್ಕಾರ ನದಿಗಳಿಗೆ ಬೀಡುಗಡೆ ಮಾಡುತ್ತಿದೆ.

ಭಾರೀ ಮಳೆಗೆ ರಾಜ್ಯದ ಕೆಆರ್‌.ಎಸ್, ಹಾರಂಗಿ, ತುಂಗಭದ್ರಾ, ಕಬಿನಿ, ವಾಣಿ ವಿಲಾಸ ಸಾಗರ, ಲಿಂಗನಮಕ್ಕಿ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ಜಲಾಯನಯನ ಪ್ರದೇಶಗಳಲ್ಲಿ ಮಳೆಯ ವಾತವರಣ ಮುಂದುವರಿದಿದೆ. ಸದ್ಯ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.

Karnataka Dam Water Levels on November 15th Check Inflow-Outflow

ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಪಟ್ಟಿ

ಲಿಂಗನಮಕ್ಕಿ ಜಲಾಶಯ

ಒಟ್ಟು ನೀರಿನ ಸಾಮರ್ಥ್ಯ: 152.75 ಟಿಎಂಸಿ

ಇಂದಿನ ಪ್ರಮಾಣ : 138 ಟಿಎಂಸಿ

ಡ್ಯಾಂ ಒಳಹರಿವು : 2072 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 5593 ಕ್ಯೂಸೆಕ್ಸ್

ಹಾರಂಗಿ ಜಲಾಶಯದ ವಿವರ

ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ಪ್ರಮಾಣ : 5.70 ಟಿಎಂಸಿ

ಡ್ಯಾಂ ಒಳಹರಿವು : 115 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 2400 ಕ್ಯೂಸೆಕ್ಸ್

ಕೆಆರ್‌ಎಸ್ ಜಲಾಶಯದ ಮಾಹಿತಿ

ಒಟ್ಟು ನೀರಿನ ಸಾಮರ್ಥ್ಯ: 49.45 ಟಿಎಂಸಿ

ಇಂದಿನ ಪ್ರಮಾಣ : 49.45 ಟಿಎಂಸಿ

ಡ್ಯಾಂ ಒಳಹರಿವು : 5245 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 5035 ಕ್ಯೂಸೆಕ್ಸ್

ಹೇಮಾವತಿ ಜಲಾಶಯ ಇಂದಿನ ವಿವರ

ಒಟ್ಟು ನೀರಿನ ಸಾಮರ್ಥ್ಯ: 37.10ಟಿಎಂಸಿ

ಇಂದಿನ ಪ್ರಮಾಣ : 32.03 ಟಿಎಂಸಿ

ಡ್ಯಾಂ ಒಳಹರಿವು : 1999 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 4980 ಕ್ಯೂಸೆಕ್ಸ್

Karnataka Dam Water Levels on November 15th Check Inflow-Outflow

ಕಬಿನಿ ಡ್ಯಾಂ ನೀರಿನ ಮಟ್ಟ ಎಷ್ಟಿದೆ

ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಪ್ರಮಾಣ : 17.69 ಟಿಎಂಸಿ

ಡ್ಯಾಂ ಒಳಹರಿವು : 102 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 1700 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ

ಒಟ್ಟು ನೀರಿನ ಸಾಮರ್ಥ್ಯ: 123.08 ಟಿಎಂಸಿ

ಇಂದಿನ ಪ್ರಮಾಣ : 122.13 ಟಿಎಂಸಿ

ಡ್ಯಾಂ ಒಳಹರಿವು : 00 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 1726 ಕ್ಯೂಸೆಕ್ಸ್

ವಾಣಿ ವಿಲಾಸ ಸಾಗರ ಡ್ಯಾಂ ವಿವರ

ಒಟ್ಟು ನೀರಿನ ಸಾಮರ್ಥ್ಯ: 30.42 ಟಿಎಂಸಿ

ಇಂದಿನ ಪ್ರಮಾಣ : 28.78 ಟಿಎಂಸಿ

ಡ್ಯಾಂ ಒಳಹರಿವು : 924 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 135 ಕ್ಯೂಸೆಕ್ಸ್

ಕರ್ನಾಟಕದಲ್ಲಿ ಈ ಮೇಲಿನ ಜಲಾಶಯಗಳು ಸೇರಿದಂತೆ ವಿವಿದ ಡ್ಯಾಂಗಳ ಮೈದುಂಬಿ ಹರಿಯುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿನ ತುಂಗಭದ್ರಾ ಡ್ಯಾಂ ಗೇಟ್ ಒಡೆದುಹೋಗಿತ್ತು. ತದನಂತರ ರಿಪೇರಿ ಆಯಿತು. ಅದಾದ ಬಳಿಕ ಬಂದ ಮಳೆಯಿಂದಾಗಿ ಇಲ್ಲಿ ಸಹ ಉತ್ತಮ ನೀರಿನ ಸಂಗ್ರಹವಾಗುತ್ತಿದೆ. ಮುಂದಿನ ಹಲವು ದಿನಗಳ ಕಾಲ ಮಳೆ ಮುಂದುವರಿಕೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಭಾಗದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+