ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್-ಕುಮಾರಸ್ವಾಮಿ ಭೇಟಿ: ಕಾವೇರಿ ಸೇರಿ ಹಲವು ವಿಷಯ ಚರ್ಚೆ

By Manjunatha
|
Google Oneindia Kannada News

Recommended Video

ಸೋಮವಾರ ಎಚ್ ಡಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಿದ ಕಮಲ್ ಹಾಸನ್ | Oneindia Kannada

ಬೆಂಗಳೂರು, ಜೂನ್ 04: ಮಕ್ಕಳ್ ನಿಧಿ ಮಯಂ ಪಕ್ಷದ ಸಂಸ್ಥಾಪಕ, ತಮಿಳು ಸೂಪರ್ ಸ್ಟಾರ್‌ ಕಮಲ್‌ ಹಾಸನ್ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಆದ ಕಮಲ್‌ಹಸನ್ ಅವರು ಕಾವೇರಿ ವಿವಾದ ಸೇರಿದಂತೆ ಹಲವು ರಾಜಕೀಯ ವಿಚಾರಗಳನ್ನು ಪರಸ್ಪರ ಚರ್ಚೆ ಮಾಡಿದ್ದಾರೆ.

ಹೆಗಲ ಮೇಲೆ ಕೈ ಹಾಕಿದ ಸಿದ್ದುಗೆ ಕಮಲ್ ಕೊಟ್ಟ ಉತ್ತರವೇನು?ಹೆಗಲ ಮೇಲೆ ಕೈ ಹಾಕಿದ ಸಿದ್ದುಗೆ ಕಮಲ್ ಕೊಟ್ಟ ಉತ್ತರವೇನು?

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಮಲ್‌ ಹಾಸನ್ ಅವರು ಅತ್ಯುತ್ತಮ ಕಲಾವಿದ ಜೊತೆಗೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿರುವ ರಾಜಕಾರಣಿ ಎಂದು ಹೊಗಳಿದ್ದಾರೆ.

Karnataka CM Kumaraswamy, Tamil actor Kamal Hassan met today

ತಮಿಳುನಾಡು-ಕರ್ನಾಟಕ ಉತ್ತಮ ಬಾಂಧವ್ಯ ಹೊಂದಬೇಕು, ಕಾವೇರಿ ವಿವಾದ ಸೂಕ್ತ ರೀತಿಯಲ್ಲಿ ಬಗೆಹರಿಯಬೇಕು, ಎರಡೂ ರಾಜ್ಯಗಳ ನಡುವೆ ಬ್ರಾತೃತ್ವ ಭಾವ ಇರಬೇಕು ಎಂಬ ವಾದವನ್ನು ಕಮಲ್ ಹೊಂದಿದ್ದಾರೆ ಎಂದರು. ಕಾವೇರಿ ವಿವಾದ ಬಗೆಹರಿಸಲು ತಮಿಳುನಾಡು ಸರ್ಕಾರದೊಂದಿಗೆ ಮಾತನಾಡಲು ಸಿದ್ಧವಿರುವುದಾಗಿಯೂ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

ನಾನು ಕಾಂಗ್ರೆಸ್‌ ಮುಲಾಜಿನಲ್ಲಿರುವುದು ಸತ್ಯ: ಕುಮಾರಸ್ವಾಮಿ ನಾನು ಕಾಂಗ್ರೆಸ್‌ ಮುಲಾಜಿನಲ್ಲಿರುವುದು ಸತ್ಯ: ಕುಮಾರಸ್ವಾಮಿ

ಚರ್ಚೆಯ ವೇಳೆ ವಿವಾದಕ್ಕೆ ಈಡಾಗಿರುವ ರಜನೀಕಾಂತ್‌ ಅವರ 'ಕಾಲಾ' ಚಿತ್ರದ ಬಗ್ಗೆ ಮಾತನಾಡಿಲ್ಲ ಎಂದ ಅವರು, ಸಿನಿಮಾಕ್ಕಿಂತಲೂ ಗಂಭೀರವಾದ ಹಲವು ವಿಷಯಗಳನ್ನು ಇಬ್ಬರೂ ಚರ್ಚೆ ಮಾಡಿದೆವು ಎಂದರು.

English summary
Tamil actor and politician Kamal Hassan met Karnataka CM Kumaraswamy in Bengaluru today. Both discussed about cauvery issue and many other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X