ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಬೆಂಗಳೂರು, ಮಾರ್ಚ್ 5: ಕರ್ನಾಟಕ ಸರ್ಕಾರಕ್ಕೆ ಆದಾಯಕ್ಕೆ ತಂದು ಕೊಡುವ ಅಬಕಾರಿ ಇಲಾಖೆ ಪ್ರಸ್ತಾವನೆಗೆ ಮಣಿದು ನಿರೀಕ್ಷೆಯಂತೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಮಿಕ್ಕಂತೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಕಾರಣ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಅನುದಾನ ಈ ಬಾರಿ ಸಾವಿರಾರು ಕೋಟಿ ರುಗಳಷ್ಟು ಕಡಿಮೆಯಾಗಿದೆ. ಜಿಎಸ್ಟಿ ನಷ್ಟ ಭರಿಸಲು ಹಾಗೂ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.
Recommended Video
Live Updates: ನಾಳೆ ಬೆಳಗ್ಗೆ 10.30ಕ್ಕೆ ಬಜೆಟ್ ಅಧಿವೇಶನ ಮುಂದೂಡಿಕೆ
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಿದ ಕೇಂದ್ರ ಸರ್ಕಾರದ ಬಜೆಟ್, 7ನೇ ಬಾರಿಗೆ ಆಯವ್ಯಯ ಮಂಡಿಸಿದ ಯಡಿಯೂರಪ್ಪ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಸುಮಾರು 1 ಗಂಟೆ 46 ನಿಮಿಷಗಳ ಭಾಷಣದ ನಂತರ ಯಾವೆಲ್ಲ ವಸ್ತುಗಳು ಏರಿಕೆಯಾಗಿವೆ? ಯಾವೆಲ್ಲ ಕಡಿಮೆಯಾಗಿದೆ ಅಥವಾ ಹೆಚ್ಚಿನ ತೆರಿಗೆ ಬಿದ್ದಿದೆ ಎಂಬುದರ ವಿವರ ಇಲ್ಲಿದೆ.
ಯಾವುದು
ಏರಿಕೆ?
*
ಮದ್ಯದ
ಮೇಲಿನ
ಅಬಕಾರಿ
ಸುಂಕ
ಶೇ
6
ರಷ್ಟು
ಹೆಚ್ಚಳ.
*
ಅಬಕಾರಿ
ಸುಂಕ
18
ಸ್ಲ್ಯಾಬ್
ಗಳಿಗೆ
ಶೇ
15
ರಿಂದ
ಶೇ
34ಕ್ಕೆ
ಏರಿಕೆ
*
ಮದ್ಯ,
ತಂಬಾಕು
ಉತ್ಪನ್ನಗಳು,
ಸಿಗರೇಟು,
ಬೀಡಿ
ಬೆಲೆ
ಏರಿಕೆ
*
ಡೀಸೆಲ್
ಮೇಲಿನ
32
ರಿಂದ
35
ರಷ್ಟು
ಸೆಸ್
ಏರಿಕೆ,
ಡೀಸೆಲ್
ಪ್ರತಿ
ಲೀಟರ್
ಬೆಲೆ
1.60
ರು
ಏರಿಕೆ
*
ಪೆಟ್ರೋಲ್
ಮೇಲಿನ
ಅಬಕಾರಿ
ಸುಂಕ
ಶೇ
32ರಿಂದ
35ಕ್ಕೇರಿಕೆ
*
ಖಾಸಗಿ
ಸೇವಾ
ವಾಹನ
ತೆರಿಗೆ:
12ಕ್ಕಿಂತ
ಹೆಚ್ಚು
20
ಕ್ಕಿಂತ
ಕಡಿಮೆ
ಆಸನವುಳ್ಳ
ಪ್ರಯಾಣಿಕರ
ಒಪ್ಪಂದ
ವಾಹನದ
ತ್ರೈಮಾಸಿಕ
ಪ್ರತಿ
ಆಸನಕ್ಕೆ
900
ರು
ನಿಗದಿ.
*
1988ನೇ
ಮೋಟಾರು
ವಾಹನ
ಕಾದ್ಯೆ
ಕಲಂ
88(9)
ಅನ್ವಯ
ರಹದಾರಿ
ಪಡೆದು
ಚಾಲನೆಯಲ್ಲಿರುವ
ಹೊಸ
ಮಾದರಿ
ಸ್ಲೀಪರ್
ಕೋಚ್
ವಾಹನಗಳ
ನೋಂದಣಿ
ಸಮಯದಲ್ಲಿ
ತ್ರೈಮಾಸಿಕ
ತೆರಿಗೆ
ಪ್ರತಿ
ಸ್ಲೀಪರ್
ಗೆ
4,000
ರು
*
ವಿದ್ಯುತ್
ದರ
ಹೆಚ್ಚಳ
ಪ್ರತಿ
ಯೂನಿಟ್
ಮೇಲೆ
10ರಿಂದ
20
ಪೈಸೆ
ಏರಿಕೆ
ಮುಂದುವರಿಕೆ.
*
ವಿದ್ಯುತ್
ಮೇಲಿನ
ತೆರಿಗೆ
ಶೇ.6ರಿಂದ
ಶೇ.9ಕ್ಕೆ
ಏರಿಕೆ
ಮುಂದುವರಿಕೆ
ಯಾವುದು
ಇಳಿಕೆ?
*
ಮನೆ
ಖರೀದಿದಾರರಿಗೆ
ಶುಭ
ಸುದ್ದಿ,
ನೋಂದಣಿ
ಶುಲ್ಕ
ಕಡಿತ.
*
ಸಿರಿಧಾನ್ಯಗಳಾದ
ನವಣೆ,
ಸಾಮೆ,
ಅರಕ
ಹಾಗೂ
ಬರಗು
ಮೇಲಿನ
ಹಿಟ್ಟುಗಳಿಗೆ
ತೆರಿಗೆ
ವಿನಾಯ್ತಿ,
ರೈತರಿಗೆ
ಹೆಕ್ಟೇರಿಗೆ
10
ಸಾವಿರ
ರು
ಅನುದಾನ.
*
ದ್ವಿದಳ
ಧಾನ್ಯ,
ತೆಂಗಿನ
ಕಾಯಿ
ಸಿಪ್ಪೆಯ
ಮೇಲಿನ
ತೆರಿಗೆ
ವಿನಾಯಿತಿ
ಮುಂದುವರಿಕೆ.
ಸಿರಿ
ಧಾನ್ಯಗಳ
ಪಟ್ಟಿಗೆ
ಟೆಫ್,
ಚಿಯಾ
ಮತ್ತು
ಕ್ವಿನೋವಾ
ಸಿರಿಧಾನ್ಯಗಳ
ಸೇರ್ಪಡೆ.
*
ಒಂದು
ಲಕ್ಷ
ಮಹಿಳಾ
ಕಾರ್ಮಿಕರಿಗೆ
ಉಚಿತ
ಬಸ್
ಪಾಸ್.
*
ಅಡಿಕೆ
ಬೆಳೆಗಾರರಿಗೆ
2
ಲಕ್ಷ
ರುವರೆಗಿನ
ಸಾಲಕ್ಕೆ
ಶೇ
5
ರಷ್ಟು
ಬಡ್ಡಿ
ವಿನಾಯಿತಿ.
*
ಮಹಿಳಾ
ಮೀನುಗಾರರ
ಸಬಲೀಕರಣ
ಯೋಜನೆಯಡಿ
1000
ಮೀನುಗಾರ
ಮಹಿಳೆಯರಿಗೆ
ದ್ವಿಚಕ್ರ
ವಾಹನಗಳನ್ನು
ನೀಡಲು
5
ಕೋಟಿ
ರು
ಅನುದಾನ.
*
ಕೃಷಿ
ಪತ್ತಿನ
ಸಹಕಾರ
ಸಂಘ
ಗಳಿಂದ
ನೀಡಿದ
ಮಧ್ಯಮಾವಧಿ
ಹಾಗೂ
ದೀರ್ಘಾವಧಿ
ಕೃಷಿ
ಸುಸ್ತಿ
ಸಾಲಗಳ
ಮೇಲಿನ
ಬಡ್ಡಿ
ಮನ್ನಾ,
92
ಸಾವಿರ
ರೈತರಿಗೆ
ಪ್ರಯೋಜನ.