ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು
.
ಬೆಂಗಳೂರು ,ಮಾರ್ಚ್ 13 : ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2015-16ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಒಟ್ಟು ಹತ್ತನೇ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ಸಾಲಿನ ಬಜೆಟ್ ಮುಖ್ಯಾಂಶಗಳು ಇಂತಿವೆ.
* ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚನೆ.
* ನೀರಿನ ಸಮರ್ಥ ಬಳಕೆ ಮತ್ತು ಮಣ್ಣಿನಲ್ಲಿ ಲಘು ಪೋಷಕಾಂಶಗಳನ್ನು ಅಳವಡಿಕೆ ಉತ್ತೇಜನಕ್ಕೆ 'ಲಘು ನೀರಾವರಿ ನೀತಿ' ಜಾರಿಗೆ.
* ಐಸಿಆರ್ಐಎಸ್ಎಟಿ, ಐಸಿಎಆರ್ಡಿಎ ಮತ್ತು ಸಿಐಎಂಎಂವವೈಟಿ ಮುಂತಾದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ತಜ್ಞರ ನೆರವಿನೊಂದಿಗೆ 'ಉತ್ಕೃಷ್ಟ ಜ್ಞಾನ ಕೇಂದ್ರ'ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
* ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಪ್ರಾರಂಭದಲ್ಲಿ ಕೃಷಿ ವಿವಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸುವ 'ಕೃಷಿ ಅಭಿಯಾನ' ಕಾರ್ಯಕ್ರಮ ಜಾರಿಗೆ ತರಲಾಗುವುದು.
* ಹಾವೇರಿ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
* ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಯಾಂಪಸ್
* ರೈತರಿಗೆ ಅಲ್ಪಾವಧಿ ಸಾಲ ನೀಡಲು ರೂ 10 ಸಾವಿರ ಕೋಟಿ
* ಕೆಆರ್ಎಸ್ ಜಲಾಶಯದ ವೃಂದಾವನ ವಿಶ್ವದರ್ಜೆಗೆ ಏರಿಕೆ
* 5 ರೈತ ಉತ್ಪಾದಕ ಸಂಘ ರಚನೆ
* ಪಶು ಭಾಗ್ಯ ಎಂಬ ಹೊಸ ಯೋಜನೆ. ಹಸು, ಹಂದಿ, ಕೋಳಿ ಸಾಕಲು ಸಹಾಯ ಧನ.
* ಸಹಕಾರಿ ಬ್ಯಾಂಕುಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ 50 ಸಾವಿರದವರೆಗೆ ಸಾಲ
* ಅಂಗನವಾಡಿ ಕಾರ್ಯಕರ್ತೆಯರಿಗೆ ರೂ 250 ಸಹಾಯಧನ ಏರಿಕೆ
* ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ 110 ಕೋಟಿ
* ತಾಲೂಕಿಗೊಂದು 'ಹಸಿರು ಗ್ರಾಮ ' ಸ್ಥಾಪನೆ
*ಸಿಗರೇಟು, ಬೀಡಿ, ಗುಟುಕಾ ಮೇಲಿನ ಮೌಲ್ಯರ್ಧಿತ ತೆರಿಗೆ ಶೇ 17 ರಿಂದ ಶೇ 20ಕ್ಕೆ ಏರಿಕೆ.
* ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ 1 ರಷ್ಟು ಹೆಚ್ಚಳ
* 3 ವರ್ಷಗಳಲ್ಲಿ 1886 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ
* ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ 25 ಸ್ಕೈವಾಕರ್ಗಳ ನಿರ್ಮಾಣ
* ಯಶಸ್ವಿನಿ ಯೋಜನೆಗೆ 110 ಕೋಟಿ, ತೋಟಗಾರಿಕೆ ಇಲಾಖೆಗೆ 75 ಕೋಟಿ, ರೈತರಿಗೆ ಅಲ್ಪಾವಧಿ ಸಾಲ ನೀಡಲು 10 ಸಾವಿರ ಕೋಟಿ
* 2014-15 ರಲ್ಲಿ ಶೇ 5 ರಿಂದ ಶೇ 7ಕ್ಕೆ ಪ್ರಗತಿ
* ಡಾ. ಯು.ಆರ್. ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ
* ವಕ್ಫ್ ಆಸ್ತಿ ಅತಿಕ್ರಮಣ ತೆರವಿಗೆ 'ವಿಶೇಷ ಕ್ರಿಯಾ ಪಡೆ'
* ಉದ್ದೇಶಿತ ಕೊಳವೆ ಬಾವಿ ವಿಫಲವಾದರೆ ಸಾಲ ಮನ್ನಾ
*ಅಂತರಜಾತಿ ವಿವಾಹಕ್ಕೆ - ಲಕ್ಷ ಪ್ರೋತ್ಸಾಹಧನ
* ಶಾಲೆಗಳಲ್ಲಿ 'ಇ- ಲರ್ನಿಂಗ್' ಸೌಲಭ್ಯ
*
ದಾವಣಗೆರೆ
ಮತ್ತು
ಚಿತ್ರದುರ್ಗ
ಜಿಲ್ಲೆಗಳಿಗೆ
ಪ್ರತ್ಯೇಕ
ಹಾಲು
ಒಕ್ಕೂಟ
ರಚನೆ,
3
ವರ್ಷಗಳಲ್ಲಿ
ರಾಜ್ಯದಲ್ಲಿ
ಒಟ್ಟು
750
ಹಾಲು
ಉತ್ಪಾದಕರ
ಸಂಘ
ಸ್ಥಾಪನೆ
ಮಂಗಳೂರು
ವಿವಿಯಲ್ಲಿ
ರಾಣಿ
ಅಬ್ಬಕ್ಕ
ಪೀಠ
ಸ್ಥಾಪನೆಗೆ
2
ಸಾವಿರ
ಕೋಟಿ
*ಕುರಿ ಸುರಕ್ಷಾ ಯೋಜನೆಯಡಿ 5 ಸಾವಿರ ಪರಿಹಾರ
*ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸೆ ಘಟಕ
* ರೈತರಿಗೆ ಮೌಲ್ಯಧಾರಿತ ಸೇವೆ ಒದಗಿಸಲು 'ಆನ್ಲೈನ್ ಮಾರಾಟ ವ್ಯವಸ್ಥೆ' ಸುಧಾರಣೆ
*ವಿಜಯಪುರ, ಮೈಸೂರು ನಗರ ಅಭಿವೃದ್ಧಿಗೆ ತಲಾ 10 ಕೋಟಿ, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗೆ 406 ಕೋಟಿ ರೂ. ಮಂಗಳೂರು ಮತ್ತು ಗದಗದಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣ.
*ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಕೇಬಲ್ ಕಾರ್. ವಿದೇಶಿ ಪ್ರವಾಸಿಗರಿಗೆ ಏರ್ ಚಾರ್ಟರ್ ಫ್ಲೈಟ್. ಆನ್ ಲೈನ್ ಮೂಲಕ ಭೂಪರಿವರ್ತನೆ ಮಾಡಲು ಕ್ರಮ.
*ಕರ್ನಾಟಕ ಟೂರಿಸಂ ವಿಶನ್ ಗ್ರೂಪ್ ಶಿಫಾರಸಿಗೆ 50 ಕೋಟಿ ರೂ. ಬೆಂಗಳೂರಿನ ಹಲಸೂರು ಕೆರೆಯಲ್ಲಿ ಫ್ಲೋಟಿನ್ ಹೋಟೆಲ್. ನಳಂದಾ ಬೌದ್ಧ ಅಧ್ಯಯನ ಕೇಂದ್ರಕ್ಕೆ 5 ಕೋಟಿ ರೂಪಾಯಿ.
*ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 35 ಕೋಟಿ ರೂ. ಊಟಿ, ವಿಜಯಪುರ, ಜೋಗದಲ್ಲಿ ಕಾರ್ವಾನ್ ಯೋಜನೆ. ಕಲಬುರಗಿ ಮಹಾನಗರ ಪಾಲಿಕೆ ಅಭಿವೃದ್ಧಿಗೆ 50 ಕೋಟಿ ರೂ.
*ವಿಶ್ವಕರ್ಮ
ಸಮುದಾಯ
ಅಭಿವೃದ್ಧಿ
ನಿಗಮಕ್ಕೆ
10
ಕೋಟಿ
ರೂ.
ಅನುದಾನ.
ಹಿಂದುಳಿದ
ವರ್ಗ
ಅಭಿವೃದ್ಧಿಗೆ
1963
ಕೋಟಿ
ರೂ.
ಕಣಜ
ಅಭಿವೃದ್ದಿಗೆ
2
ಕೋಟಿ
ಅನುದಾನ.
ಬೆಂಗಳೂರಿನ
ವಿವಿಧೆಡೆ
ಕನ್ನಡ
ಕಲಿಕಾ
ಕೇಂದ್ರಗಳ
ಆರಂಭ.
*2015ನೇ ವರ್ಷವನ್ನು ದೇವರಾಜು ಅರಸು ಶತಮಾನೋತ್ಸವ ವರ್ಷವಾಗಿ ಆಚರಣೆ. ಬಾಲಕಿಯರ ಹಾಸ್ಟೆಲ್ ಗಳಲ್ಲಿ ಸಿಸಿ ಟಿವಿ ಅಳವಡಿಕೆ. ಪಿಎಚ್ ಡಿ ವಿದ್ಯಾರ್ಥಿಗಳಿಗೆ ಮಾಸಿಕ 5 ಸಾವಿರ ಪ್ರೋತ್ಸಾಹ ಧನ.
*ವಾರ್ತಾ ಇಲಾಖೆಗೆ 93 ಕೋಟಿ ರೂ. ಅನುದಾನ ನೀಡಲಾಗಿದೆ. ಸಾಲುಮರದ ತಿಮ್ಮಕ್ಕನ ಸಾಲು ನೆರಳು ಯೋಜನೆ ಜಾರಿ. 3 ಸಾವಿರ ಕಿ.ಮೀ. ರಸ್ತೆ ಅಕ್ಕಪಕ್ಕ ಗಿಡ ನೆಡಲಾಗುವುದು.
*ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ 3 ಕೋಟಿ ರೂ. ಮೀಸಲು. ಕನ್ನಡ ಚಿತ್ರರಂಗದ ಪರಿಚಯಕ್ಕೆ ಗಾನಯಾನ ಕಾರ್ಯಕ್ರಮ. ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರ.
*ಲಂಬಾಣಿ ತಾಂಡಾಗಳ ವಲಸೆ ತಪ್ಪಿಸಲು ಕ್ರಮ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಂಜಾರ್ ಭಾಷಾಭಿವೃದ್ಧಿ ಕೇಂದ್ರ.
*ಸರಳ ವಿವಾಹವಾಗುವ ದಂಪತಿಗಳಿಗೆ 50 ಸಾವಿರ ನಗದು. ಅಂತರ್ಜಾತಿ ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹ ಧನ.
*ಸರಳ ವಿವಾಹವಾಗುವ ದಂಪತಿಗಳಿಗೆ 50 ಸಾವಿರ ನಗದು. ಅಂತರ್ಜಾತಿ ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹ ಧನ.
*ಪ್ರತಿನಿತ್ಯ ಬೆಂಗಳೂರು ನಗರಿಗರಿಗೆ 500ದಶಲಕ್ಷ ಲೀಟರ್ ನೀರು ವಿತರಣೆ. ಕನ್ನಡ ಕಲಿಯುವ ಆಸಕ್ತಿ ಇರುವವರಿಗೆ ವಿಶೇಷ ಯೋಜನೆ.
*ನಿರ್ಮಲಾ ಮಾರುಕಟ್ಟೆ ಯೋಜನೆ ಜಾರಿ. ಭಾನುವಾರದ ಮಾರುಕಟ್ಟೆಗಳ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ. ಪಿಪಿಪಿ ಅಡಿಯಲ್ಲಿ 25 ಸ್ಕೈವಾಕ್ ನಿರ್ಮಾಣ.
*ಅಸ್ರ್ರಶ್ಯ ನಿವಾರಣೆಗೆ ಹೊಸ ಯೋಜನೆ. ರಾಜ್ಯದ ವಿವಿಧ ಕೆರೆಗಳಲ್ಲಿ 2 ಕೋಟಿ ಮೀನು ಮರಿ ಬಿತ್ತನರ. ಮತ್ಸಾಶ್ರಯ ಯೋಜನೆಯಡಿ 2855 ಮನೆ ವಿತರಣೆ. ಮುರುಘಾಮಠದಲ್ಲಿ 325 ಅಡಿ ಎತ್ತರದ ಕಂಚಿನ ಪ್ರತಿಮೆ.
*ಕನ್ನಡ ಸಾಹಿತ್ಯ ಪರಿಷತ್ ಗೆ 100 ವರ್ಷದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವನ್ನು ಕನ್ನಡ ವರ್ಷ ಎಂದು ಘೋಷಣೆ. ಮೇ 1ರಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ.
*ಬಾದಾಮಿ ಪಟ್ಟಣ ಅಭಿವೃದ್ಧಿಗೆ ನಾಲ್ಕು ವರ್ಷಗಳ ಗಡುವು. ಶಾಲೆಗಾಗಿ ನಾವು ನೀವು ಯೋಜನೆ ಪರಿಣಾಮಕಾರಿ ಅನುಷ್ಠಾನ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, 2 ಜೊತೆ ಸಾಕ್ಸ್ ನೀಡಲು 120 ಕೋಟಿ ರೂಪಾಯಿ ಮೀಸಲು
*ಅಂಗನವಾಡಿ ಸಹಾಯಕಿಯರ ಪ್ರೋತ್ಸಾಹ ಧನ 250 ರೂ. ಹೆಚ್ಚಳ, 13 ಪುರಸಭೆಗಳನ್ನು ನಗರಸಭೆಯನ್ನಾಗಿ ಮಾರ್ಪಾಡು.
*ಚನ್ನಗಿರಿ, ಮಾಯಾಕೊಂಡ ಕ್ಷೇತ್ರಗಳಲ್ಲಿ 77 ಕೆರೆ ತುಂಬಿಸಲು ಕ್ರಮ. ಪರಿಶಿಷ್ಟ ಪುರುಷರು ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ.
*ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್. ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆ. ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರ ಸ್ಥಾಪನೆ.
*ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ. ಅತಿಕ್ರಮಣಗೊಂಡ ವಕ್ಫ್ ಆಸ್ತಿ ತೆರವಿಗೆ ಕ್ರಮ. 20 ಸಾವಿರ ಜನರಿಗೆ ವಸತಿ ವಿತರಣೆ. ನಗರೋತ್ಥಾನ ಯೋಜನೆಯಡಿ 1 ಸಾವಿರ ಕೋಟಿ ರೂ. ಮೀಸಲು.
*15 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 1 ಸಾವಿರದಿಂದ 31ಕ್ಕೆ ಇಳಿದಿದೆ.
*ಬಡತನ ರೇಖೆಯಿಂದ ಮೇಲ್ಪಟ್ಟ ಕುಟುಂಬಗಳಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆ. ಮೂಲಸೌಕರ್ಯಕ್ಕೆ ಅನುದಾನ ನೀಡಲು ನಿರ್ಧಾರ.
*ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕೆ 110 ಕೋಟಿ ರೂ. ತಾಲೂಕಿಗೊಂದು ಹಸಿರು ಗ್ರಾಮ ಯೋಜನೆ ಜಾರಿ. ಮಡಿವಾಳ ಕೆರೆ ಜೀವವೈವಿಧ್ಯ ಉದ್ಯಾನವನ ಅಭಿವೃದ್ಧಿ.
*ಆಸಿಡ್ ದಾಳಿಗೆ ಒಳಗಾದ ಮಹಿಳೆಗೆ ಆರ್ಥಿಕ ಸಹಾಯ. ಹಸಿರು ಶಾಲಾವನಕ್ಕಾಗಿ 2.5 ಕೋಟಿ ರೂಪಾಯಿ ಮೀಸಲು. ಹಸಿರು ಗ್ರಾಮ ಯೋಜನೆಗೆ 3 ಕೋಟಿ ರೂ. ಮೀಸಲು
*ಮೈಸೂರು ವಿವಿಯಲ್ಲಿ ಡಾ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಸ್ವಚ್ಚತೆ ಕಾಪಾಡಲು ಕ್ರಮ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.
*ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಅನುದಾನ ಏರಿಕೆ. ಕೆಆರ್ಎಸ್ ಬೃಂದಾವನ ಉದ್ಯಾನವನ ವಿಶ್ವದರ್ಜೆಗೆ ಏರಿಸಲಾಗುವುದು.
*ಶಿಂಷಾ ಅಣೆಕಟ್ಟಿನ ಬಲದಂಡೆ ಕಾಲುವೆಗಳ ಅಭಿವೃದ್ಧಿ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಹನಿ ನೀರಾವರಿ ಯೋಜನೆ ಜಾರಿ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನುಷ್ಢಾನಕ್ಕೆ ಬದ್ಧ.
*ರೈತರಿಗೆ ಅಲ್ಪಾವಧಿ ಕೃಷಿ ಸಾಲ ನೀಡಲು 10 ಸಾವಿರ ಕೋಟಿ ರೂಪಾಯಿ ಮೀಸಲು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.
*ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ವಿಭಜನೆ. ಮಂಡ್ಯ, ಮುಧೋಳದಲ್ಲಿ ಬೆಲ್ಲದ ಸಾವಯವ ಪಾರ್ಕ್. ಯಶಸ್ವಿನಿ ಯೋಜನೆಗೆ 110 ಕೋಟಿ ಅನುದಾನ.
*ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಆಯ್ಕೆ. ಮೀನುಗಾರಿಕೆ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಮತ್ಸ್ಯ ಮೇಳ.
*ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಆಯ್ಕೆ. ಮೀನುಗಾರಿಕೆ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಮತ್ಸ್ಯ ಮೇಳ.
*ರೇಷ್ಮೆ ಬೆಳೆಗೆ ಪ್ರೋತ್ಸಾಹಿಸಲು ರೈತ ಉತ್ಪದನಾ ಕೇಂದ್ರ ಸ್ಥಾಪಿಸಲು ನಿರ್ಧಾರ. ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3 ಕೇಂದ್ರ ಸ್ಥಾಪನೆ ಕೃಷಿ ಉದ್ದೇಶಿತ ಕೊಳವೆಬಾವಿ ವಿಫಲವಾದ್ರೆ ಸಾಲಮನ್ನಾ.
*ತೆಂಗು ಉತ್ಪಾದಕರ ಅಭಿವೃದ್ಧಿಗೆ ಯೋಜನೆ. ಹಾವೇರಿ ತಾಲೂಕಿನ ದೇವಿ ಹೊಸೂರಿನಲ್ಲಿ ತೋಟಗಾರಿಕಾ ಕಾಲೇಜು. ಶಿವಮೊಗ್ಗದಲ್ಲಿ ಕೃಷಿ, ತೋಟಗಾರಿಕಾ ವಿಜ್ಞಾನಗಳ ಹೊಸ ಕ್ಯಾಂಪಸ್
*ಹಿಂದುಳಿದವರ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುತ್ತೇವೆ. ರಾಜ್ಯದಲ್ಲಿ ಪಶು ಭಾಗ್ಯ ಯೋಜನೆ ಜಾರಿ. ನೀರಾ ಇಳಿಸಲು ಸರ್ಕಾರದ ಅನುಮತಿ. ರಾಜ್ಯ ಬಜೆಟ್ ನಲ್ಲಿ ಹೊಸ ಯೋಜನೆಗಳ ಘೋಷಣೆ.
*56 ಹೋಬಳಿಗಳಲ್ಲಿ ಸಾವಯವ ಯೋಜನೆ ಜಾರಿ. 130 ಲಕ್ಷ ಟನ್ ಆಹಾರ ಧಾನ್ಯ ಉತ್ಪನ್ನ ಗುರಿ ಹೊಂದಲಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ.
*ರಾಜ್ಯದ 25 ಜಿಲ್ಲೆಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿ. ಶೇ.8.9ರಲ್ಲಿ ಪ್ರಸಕ್ತ ಸಾಲಿನ ಸೇವಾ ವಲಯದ ಬೆಳವಣಿಗೆ.
*ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸಂಗ್ರಹಾಲಯ. ದಲಿತ ನಾಯಕರ ಸ್ಮಾರಕ ನಿರ್ಮಾಣಕ್ಕೆ 3 ಕೋಟಿ. ಜೋಗ ಜಲಪಾತದಲ್ಲಿ ನೀರಿನ ಮರು ಬಳಕೆ. 4 ಗಿರಿಧಾಮದಲ್ಲಿ ಕೇಬಲ್ ಕಾರು ಯೋಜನೆ.
*ಸಾರಿಗೆ ಇಲಾಖೆಗೆ 1,208 ಕೋಟಿ ರೂ. ಶಿರಾಡಿ ಘಾಟ್ ರಸ್ತೆ ಅಭಿವೃದ್ದಿ 18 ತಿಂಗಳಲ್ಲಿ ಪೂರ್ಣ. ಗ್ರಾಮೀಣ ನೈರ್ಮಲ್ಯಕ್ಕೆ 500 ಕೋಟಿ ರೂ.ಪಶ್ಚಿಮ ಘಟ್ಟಗಳಲ್ಲಿ 50 ಟ್ರಕ್ಕಿಂಗ್ ಪಥ ಸ್ಥಾಪನೆ.
*ಮಾಹಿತಿ ತಂತ್ರಜ್ಞಾನ ಇಲಾಖೆಗೆ 202 ಕೋಟಿ, ಕಾನೂನು ಪದವೀಧರರಿಗೆ 2 ಸಾವಿರ ರೂಪಾಯಿ ಸ್ಟೈಫಂಡ್ ಹೆಚ್ಚಳ. ಪ್ರತಿ ಕಂದಾಯ ವಿಭಾಗಕ್ಕೊಂದು ಸಂಚಾರಿ ನ್ಯಾಯಾಲಯ.
*ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಐಸಿಯು, ಸಾಂಕ್ರಾಮಿಕ ರೋಗ ಪತ್ತೆಗೆ 5 ಕಡೆ ಲ್ಯಾಬೋರೇಟರಿ, ಹುಬ್ಬಳ್ಳಿ ಧಾರವಾಡದಲ್ಲಿ ಐಟಿ ಸಂಸ್ಥೆ ಸ್ಥಾಪನೆಗೆ 12 ಕೋಟಿ ವಂತಿಗೆ ಸಂಗ್ರಹ.
*ಶ್ರವಣಬೆಳಗೊಳದಲ್ಲಿ ಜೈನಶಾಸನ ಅಧ್ಯಯನ ಕೇಂದ್ರಕ್ಕೆ 1 ಕೋಟಿ ರೂ., ರಂಗಭೂಮಿ ಉತ್ತೇಜನಕ್ಕಾಗಿ ರಂಗಾಯಣಕ್ಕೆ 4 ಕೋಟಿ ರೂ. ಹಂತಹಂತವಾಗಿ ಇಡೀ ಬೆಂಗಳೂರಿಗೆ ವೈ ಫೈ.
*ಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ. ತಲಾ 1 ಕೋಟಿ ರೂಪಾಯಿಯಲ್ಲಿ ಡಾ.ಶಿವರಾಮ ಕಾರಂತ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮಂಜೇಶ್ವರ ಗೋವಿಂದ ಪೈ ನಿವಾಸ, ದ.ರಾ.ಬೇಂದ್ರೆ, ಶಿವರುದ್ರಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸ್ಮಾರಕ ನಿರ್ಮಾಣ. ಕೊಂಕಣಿ ಅಧ್ಯಯನ ಪೀಠಕ್ಕೆ 2 ಕೋಟಿ ರೂ.
*ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ. ಹಿರಿಮೆ ಗರಿಮೆ ಯೋಜನೆಯಡಿ ಹಳೇ ಶಿಕ್ಷಣ ಸಂಸ್ಥೆಗಳ ಉತ್ತೇಜನ.
*ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ಪೂರೈಕೆ. ಮಹಿಳೆಯರಿಗೆ ಶೇ.30ರಿಂದ ಶೇ.33ಕ್ಕೆ ಏರಿಕೆ.
*ಬೋವಿ ಸಮುದಾಯದ ಅಭಿವೃದ್ದಿಗೆ ನಿಗಮ ಸ್ಥಾಪನೆ. ಎಲ್ಲಾ ವಿವಿಗಳಲ್ಲಿ ಹೊರ ವಿವಿ ವಿದ್ಯಾರ್ಥಿಗಳಿಗಾಗಿ ಶೇ.15ರಷ್ಟು ಸೀಟು. ಉನ್ನತ ಶಿಕ್ಷಣ ಇಲಾಖೆಗೆ 3,896 ಕೋಟಿ.
*ನಂಜಯ್ಯನಮಠ ವರದಿ ಆಧಾರದ ಮೇಲೆ ರಾಜ್ಯದಲ್ಲಿ 439 ಹೊಸ ಗ್ರಾಮ ಪಂಚಾಯತ್ ಗಳ ರಚನೆ. ಜ್ಞಾನಪ್ರಸಾರ ಯೋಜನೆಯಡಿ ಉಪನ್ಯಾಸಕರ ಕೊರತೆ ನೀಗಿಸಲು ಕ್ರಮ. 100 ವರ್ಷ ಪೂರೈಸಿದ ಮೈಸೂರು ವಿವಿಗೆ ಶತಮಾನೋತ್ಸವ ಆಚರಿಸಲು 50 ಕೋಟಿ ರೂ.
*ಕರಾವಳಿಯಲ್ಲಿ ಚಂಡಮಾರುತ ಉಪಶಮನ ಯೋಜನೆಗೆ 120.60 ಕೋಟಿ ರೂ. ಅನುದಾನ. ಯಲಹಂಕದಲ್ಲಿ 350ಮೆಗಾ ವ್ಯಾಟ್ ವಾಯುವಿದ್ಯುತ್ ಘಟಕ ಸ್ಥಾಪನೆ. ಗ್ರಾಮೀಣಾ ಗೌರವ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣ.
*ನೀರಿನ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಸ್ಥಾಪನೆ. ಗದಗನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ. ಗ್ರಾಮೀಣಾಭಿವೃದ್ದಿ ಇಲಾಖೆಗೆ 9,728 ಕೋಟಿ ರೂ.ಅನುದಾನ. ಶುದ್ಧ ನೀರಿನ ಘಟಕ ಸ್ಥಾಪನೆಗೆ 200 ಕೋಟಿ ರೂ.
*100 ಹಿಂದುಳಿದ ವರ್ಗದ ನೂರು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು. ವಸತಿ ಇಲಾಖೆಗೆ 3,819 ಕೋಟಿ ರೂ. ಮೀಸಲು.
*ಕೃಷಿ
ಪಂಪ್
ಸೆಟ್,
ಕುಟೀರ
ಜ್ಯೋತಿ,
ಉಚಿತ
ವಿದ್ಯುತ್.
ಇಂಧನ
ಇಲಾಖೆಗೆ
12,878
ಕೋಟಿ
ರೂಪಾಯಿ
ಮೀಸಲು.
ಶ್ರೀರಂಗಪಟ್ಟಣದ
ಹಜರತ್
ಟಿಪ್ಪು
ಸ್ಮಾರಕ
ಅಭಿವೃದ್ಧಿ,
ಪೂರ್ಣವಾಗದ
ಶಾದಿಮಹಲ್
ಸಮುದಾಯ
ಭವನಕ್ಕೆ
60
ಕೋಟಿ
ಅನುದಾನ
ಮೀಸಲು.
*ಕೃಷಿ ಪಂಪ್ ಸೆಟ್, ಕುಟೀರ ಜ್ಯೋತಿಗೆ ಉಚಿತ ವಿದ್ಯುತ್. ಇಂಧನ ಇಲಾಖೆಗೆ 12,878 ಕೋಟಿ ರೂಪಾಯಿ ಮೀಸಲು. ಶ್ರೀರಂಗಪಟ್ಟಣದ ಹಜರತ್ ಟಿಪ್ಪು ಸ್ಮಾರಕ ಅಭಿವೃದ್ಧಿ, ಪೂರ್ಣವಾಗದ ಶಾದಿಮಹಲ್ ಸಮುದಾಯ ಭವನಕ್ಕೆ 60 ಕೋಟಿ ಅನುದಾನ ಮೀಸಲು.
*ಅಲ್ಪಸಂಖ್ಯಾತ ಕಲ್ಯಾಣ ಅಭಿವೃದ್ಧಿಗೆ 1 ಸಾವಿರ ಕೋಟಿ,ೊಂದು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆಗೆ ನಿರ್ಧಾರ. ನಗರಪಾಲಿಕೆ ವ್ಯಾಪ್ತಿಯಲ್ಲಿ ನಗರ ಜ್ಯೋತಿ ಯೋಜನೆ.
*ಸ್ವಯಂ ಚಾಲಿತ ವಿದ್ಯುತ್ ಪ್ರಯೋಗಾಲಯ ಸ್ಥಾಪನೆ. ಉಚಿತ ವಿದ್ಯುತ್ ಗೆ 7,498 ಕೋಟಿ ರೂ. ಮೀಸಲು. ಲೋಕೋಪಯೋಗಿ ಇಲಾಖೆಗೆ 7,463 ಕೋಟಿ ರೂ.
*ಹಿರಿಯ ನಾಗರಿಕರ ವಯಸ್ಸನ್ನು 65ರಿಂದ 60ಕ್ಕೆ ಇಳಿಕೆ. ರಾಜ್ಯದ ಮೂರು ಕಡೆ ಮೆಗಾ ಪಾರ್ಕ್ ನಿರ್ಮಾಣ. ಮೈಸೂರು ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ ಕ್ರಮ.
*ಸೀಮೆಎಣ್ಣೆ ಬತ್ತಿ ಸ್ಟವ್ ಮೇಲಿನ ತೆರಿಗೆ ಶೇ.14.5ರಿಂದ 5.5ಕ್ಕೆ ಇಳಿಕೆ,ಎಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ ತಲಾ 15 ರೂ.ಗಳಿಗೆ 3 ಕೆಜೆ ಅಕ್ಕಿ. 10ರೂಪಾಯಿಯಂತೆ 2ಕೆಜಿ ಗೋಧಿ.
*ಬಾಗಲಕೋಟೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ. ಕೇಬಲ್ ಗಳಿಗೆ ಶೇ.5ರಷ್ಟು ತೆರಿಗೆ ವಿನಾಯ್ತಿ, ಮೊಬೈಲ್ ಚಾರ್ಜರ್ ತೆರಿಗೆ ಇಳಿಕೆ, ಸಿಗರೇಟ್, ತಂಬಾಕು, ಗುಟ್ಕಾ ಮೇಲಿನ ತೆರಿಗೆ ಶೇ.17ರಿಂದ 20ಕ್ಕೆ ಏರಿಕೆ. ಡಿಸೇಲ್, ಪೆಟ್ರೋಲ್ ಮೇಲಿನ ಸೆಸ್ ಶೇ.1ರಷ್ಟು ಏರಿಕೆ.
*ಅಂತ್ಯ ಸಂಸ್ಕಾರ ಸಹಾಯ ನಿಧಿ 1 ಸಾವಿರ ರೂಪಾಯಿಂದ 5 ಸಾವಿರಕ್ಕೆ ಹೆಚ್ಚಳ. ಕೂಡಲ ಸಂಗಮದಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆ. ಭತ್ತ, ಅಕ್ಕಿ, ಗೋಧಿ, ರಾಗಿ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. 500 ರೂ.ಒಳಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ.
*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪೀಠ ಸ್ಥಾಪನೆಗೆ 10 ಕೋಟಿ ರೂ.ಮಲೆನಾಡು ಪ್ರದೇಶಾಭಿವೃದ್ಧಿಗೆ 40 ಕೋಟಿ ರೂ. ಹೈದರಾಬಾದ್ ಪ್ರದೇಶಾಭಿವೃದ್ಧಿ ಮಂಡಳಿಗೆ 1 ಸಾವಿರ ಕೋಟಿ.
*ಪೋಡಿಮುಕ್ತ ಗ್ರಾಮ ನಿರ್ಮಾಣ ಯೋಜನೆ. ಕರಾವಳಿಯಲ್ಲಿ ಚಂಡಮಾರುತ ತಡೆ ಯೋಜನೆ. ಹೊನ್ನಾಳಿಯಲ್ಲಿ ಸಂತ ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿ. 27,700 ಧಾರ್ಮಿಕ ಸಂಸ್ಥೆಗಳ ವಾರ್ಷಿಕ ತಸ್ತೀಕು 36,00 ರೂ. ಹೆಚ್ಚಳ. ದೇವಾಲಯಗಳಲ್ಲಿ ಪ್ಲಾಸ್ಟಿಕ್ ಮುಕ್ತ.
*ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಗೆ 600 ಕೋಟಿ ರೂಪಾಯಿ. 2015-16ನೇ ಸಾಲಿನಲ್ಲಿ 5 ಸಾವಿರ ಸೈಟ್ ಹಂಚಿಕೆ. ಆನ್ ಲೈನ್ ನಲ್ಲಿ ಮ್ಯೂಟೇಶನ್ ಪ್ರಕ್ರಿಯೆ. ಬೃಹತ್ ದೇವಾಲಯ ಪೂರ್ಣಾಭಿವೃದ್ದಿ ಯೋಜನೆ ಜಾರಿ. ಕೊಲ್ಲೂರು, ಕುಕ್ಕೆ, ಮೈಸೂರಿನ ಚಾಮುಂಡಿಬೆಟ್ಟ, ಗಾಣಗಾಪುರದ ದತ್ತಾತ್ರೇಯ ಸೇರಿ ಒಟ್ಟು 6 ದೇವಸ್ಥಾನಗಳು ಯೋಜನೆಯಡಿಯಲ್ಲಿದೆ.
*ಎಸಿ ಮತ್ತು ಡಿಸಿ ಕಚೇರಿಯ ಆದೇಶಗಳು ಇನ್ಮುಂದೆ ಆನ್ ಲೈನ್ ನಲ್ಲೇ ಲಭ್ಯ. 15 ಜಿಲ್ಲಾಧಿಕಾರಿಗಳು, 25 ಉಪವಿಭಾಗಾಧಿಕಾರಿಗಳ ಕಚೇರಿಗಳು, 25 ತಹಶೀಲ್ದಾರ ಕಚೇರಿಗಳಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿ.
*ಆನ್ ಲೈನ್ ನಲ್ಲಿ ವಸತಿ ಮತ್ತು ಅರ್ಹತಾ ಪ್ರಮಾಣ ಪತ್ರ. ಕ್ರೂಸ್ ಟೂರಿಸಂ ಮತ್ತು ಮರೈನ್ ಟೂರಿಸಂ ಯೋಜನೆ. ಫೋನ್ ಡಾಕ್ಟರ್ ಕಾರ್ಯಕ್ರಮ ಜಾರಿ. ಕಾರವಾರ, ಹಂಪಿಯಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಸ್ಥಾಪನೆ.
*ಆನ್ ಲೈನ್ ನಲ್ಲಿ ವಸತಿ ಮತ್ತು ಅರ್ಹತಾ ಪ್ರಮಾಣ ಪತ್ರ. ಕ್ರೂಸ್ ಟೂರಿಸಂ ಮತ್ತು ಮರೈನ್ ಟೂರಿಸಂ ಯೋಜನೆ. ಫೋನ್ ಡಾಕ್ಟರ್ ಕಾರ್ಯಕ್ರಮ ಜಾರಿ. ಕಾರವಾರ, ಹಂಪಿಯಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಸ್ಥಾಪನೆ.