Karnataka Elections: ಏಪ್ರಿಲ್‌ 24 ರ ನಂತರ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿ- ವರದಿ, ವಿವರ

ಬೆಂಗಳೂರು, ಏಪ್ರಿಲ್‌ 18: ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾದ ಏಪ್ರಿಲ್ 24 ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ. ಪ್ರಧಾನಿ ಅವರ ಪ್ರಚಾರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಬಿಜೆಪಿ ರೂಪಿಸುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ರ‌್ಯಾಲಿಗಳಿಗೆ ಪಕ್ಷವು ದಿನಾಂಕಗಳನ್ನು ಅಂತಿಮಗೊಳಿಸುತ್ತಿದೆ.

Karnataka BJP plans PM Narendra Modi’s campaign blitz after April 24

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಪ್ರಕಾರ, ಪಕ್ಷವು ಕನಿಷ್ಠ 20 ರಿಂದ 25 ಸಾರ್ವಜನಿಕ ರ ರ‌್ಯಾಲಿಗಳು, ಸಮಾವೇಶಗಳು ಮತ್ತು ರೋಡ್‌ ಶೋಗಳನ್ನು ಹಮ್ಮಿಕೊಳ್ಳಲಿದೆ. ಪ್ರಧಾನಿ ಮೋದಿ, ಶಾ ಮತ್ತು ಯೋಗಿ ಅವರನ್ನು ಒಳಗೊಂಡ ಈ ಕಾರ್ಯಕ್ರಮಗಳು ಕರ್ನಾಟಕದಾದ್ಯಂತ ನಡೆಯಲಿವೆ.

ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲು ಪ್ರಧಾನಿ ಮೋದಿ ಅವರು ಏಳು ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಆ ಸಮಯದಲ್ಲಿ ಭೇಟಿ ನೀಡದ ಎಲ್ಲಾ ಜಿಲ್ಲೆಗಳನ್ನು ಪ್ರಧಾನಿ ಮೋದಿ ಕವರ್ ಮಾಡುವ ಸಾಧ್ಯತೆಯಿದೆ ಎಂದು ಮಹೇಶ್‌ ತೆಂಗಿನಕಾಯಿ 'ಡೆಕ್ಕನ್‌ ಹೆರಾಲ್ಡ್‌'ಗೆ ಮಾಹಿತಿ ನೀಡಿದ್ದಾರೆ.

Karnataka BJP plans PM Narendra Modi’s campaign blitz after April 24

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ತಡರಾತ್ರಿ ಕಾರ್ಯತಂತ್ರ ಸಭೆಯು ನಡೆಯಿತು. ಪಕ್ಷವು ಅತಿ ಹೆಚ್ಚು ಬಂಡಾಯ ಮತ್ತು ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿರುವ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿ ಪ್ರಧಾನಿ ಮೋದಿಯವರ ಹೆಚ್ಚಿನ ರ್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿದೆ ಎಂದು ಮತ್ತೊಬ್ಬ ಹಿರಿಯ ನಾಯಕ ತಿಳಿಸಿದ್ದಾರೆ.

ಆ ಎರಡೂ ಪ್ರದೇಶಗಳಲ್ಲಿ ನಾವು ನೇರವಾಗಿ ಪ್ರಧಾನಿ ಮೋದಿ ಅವರ ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು. ಮೋದಿ ಅವರು ಭೇಟಿ ನೀಡದ ಬೇರೆಡೆಯಿಂದ ಪ್ರಾರಂಭಿಸಬಹುದು. ಪಕ್ಷವು ತೊರೆದುಹೋಗಿರುವ ನಾಯಕರ ಬಗ್ಗೆ ಚಿಂತಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ನಂತರ ಹಾವೇರಿ, ಬಾಗಲಕೋಟೆ, ಕೊಪ್ಪಳ ಮತ್ತು ಇತರ ಜಿಲ್ಲೆಗಳಿಗೆ ಭೇಟಿ ನೀಡುವ ಪ್ರಧಾನಿ ಅವರು ಮತ್ತೆ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಬಂದು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಾಹಿತಿ ನೀಡಿದೆ.

'ಈ ಪ್ರದೇಶಗಳಲ್ಲಿ ಬಂಡಾಯವನ್ನು ಸರಿದೂಗಿಸಲು ಮತ್ತು ಯುವ ಮತದಾರರನ್ನು ಸೆಳೆಯಲು ನಾವು ಪ್ರಧಾನಿ ಮೋದಿ ಮತ್ತು ಶಾ ಅವರು 2-3 ರ್ಯಾಲಿಗಳನ್ನು ಆಯೋಜಿಸಬಹುದು. ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹಿಂದುತ್ವ ಕೆಲಸ ಮಾಡುವಲ್ಲಿ ಯೋಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ, ಹಾರ್ಡ್‌ಕೋರ್ ಹಿಂದುತ್ವ ಕೆಲಸ ಮಾಡುವಲ್ಲಿ, ನಾವು ಯೋಗಿಯನ್ನು ನಿಯೋಜಿಸುವುದರ ಜೊತೆಗೆ ಅವರನ್ನು ಒಕ್ಕಲಿಗ ಬೆಲ್ಟ್‌ನಲ್ಲಿ ನಿಯೋಜಿಸುತ್ತೇವೆ' ಎಂದು ಮೂಲಗಳು ವಿವರಿಸಿವೆ.

ಪ್ರಬಲ ಲಿಂಗಾಯತ ಸಮುದಾಯದ ಪ್ರಭಾವಿ ಉಪಪಂಗಡವಾದ ಪಂಚಮಸಾಲಿಗಳಲ್ಲಿ ನಾಯಕರಾಗಿ ಹೊರಹೊಮ್ಮಿರುವ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಪ್ರಚಾರಕ್ಕೆ ನಿಯೋಜಿಸಲಾಗುವುದು. ಅವರೂ ಈ ಪ್ರದೇಶದಲ್ಲಿ ಹಿಂದುತ್ವದ ಮುಖವಾಗಿದ್ದಾರೆ.

ನಡ್ಡಾ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮಂಗಳವಾರದಿಂದ ಹುಬ್ಬಳ್ಳಿ ಮತ್ತು ಹಾವೇರಿಗೆ 2 ದಿನಗಳ ಭೇಟಿ ನೀಡಲಿದ್ದಾರೆ. ನಡ್ಡಾ ಅವರು ಮಂಗಳವಾರ ಮಧ್ಯಾಹ್ನ ಹುಬ್ಬಳ್ಳಿಗೆ ಬಂದಿಳಿಯಲಿದ್ದು, ಅಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ನಂತರ ಅವರು ಶಿಗ್ಗಾಂವ್‌ಗೆ ತೆರಳುತ್ತಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+