Karnataka Elections: ಬಿಜೆಪಿ ಠೇವಣಿ ಕಳೆದುಕೊಂಡ 31 ಕ್ಷೇತ್ರಗಳು
ಬೆಂಗಳೂರು, ಮೇ 18: ಕರ್ನಾಟಕದ ಹದಿನಾರನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಶನಿವಾರದಂದು (ಮೇ 20) ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.

ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಸರಕಾರದ ಕ್ಯಾಬಿನೆಟ್ ದರ್ಜೆಯ ಸಚಿವರೂ ಸೇರಿದಂತೆ ಹಲವು ಪ್ರಮುಖ ಮುಖಂಡರು ಸೋಲು ಅನುಭವಿಸಿದ್ದರು. ಒಂಬತ್ತು ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆಯುವುದಕ್ಕೂ ಸಾಧ್ಯವಾಗಿಲ್ಲ. ಇದರ ಜೊತೆಗೆ, 31 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದಾರೆ. ಆ ಕ್ಷೇತ್ರಗಳ ಪಟ್ಟಿ ಇಂತಿದೆ:
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಪಡೆದ ಮತ |
| 39 | ಗುರುಮಿಠಕಲ್ | ಲಲಿತ ಅನಪೂರ್ | 14488 |
| 50 | ಬೀದರ್ | ಈಶ್ವರ್ ಸಿಂಗ್ ಠಾಕೂರ್ | 17505 |
| 89 | ಹಗರಿಬೊಮ್ಮನಹಳ್ಳಿ (SC) | ಬಿ.ರಾಮಣ್ಣ | 26696 |
| 98 | ಚಳ್ಳಕೆರೆ | ಅನಿಲ್ ಕುಮಾರ್ | 22737 |
| 109 | ಚನ್ನಗಿರಿ | ಶಿವಕುಮಾರ್ | 21229 |
| 112 | ಭದ್ರಾವತಿ | ಮಂಗೋಟಿ ರುದ್ರೇಶ್ | 21014 |
| 134 | ಕೊರಟಗೆರೆ (SC) | ಅನಿಲ್ ಕುಮಾರ್ | 23804 |
| 137 | ಪಾವಗಡ (SC) | ಕೃಷ್ಣ ನಾಯಕ್ | 7098 |
| 138 | ಮಧುಗಿರಿ | ಎಲ್.ಸಿ.ನಾಗರಾಜ್ | 15461 |
| 139 | ಗೌರಿಬಿದನೂರು | ಡಾ.ಶಶಿಧರ್ | 8024 |
| 142 | ಶಿಡ್ಲಘಟ್ಟ | ರಾಮಚಂದ್ರ ಗೌಡ | 15349 |
| 143 | ಚಿಂತಾಮಣಿ | ವೇಣು ಗೋಪಾಲ್ | 21462 |
| 144 | ಶ್ರೀನಿವಾಸಪುರ | ಗುಂಜೂರು ಶ್ರೀನಿವಾಸ್ ರೆಡ್ಡಿ | 6524 |
| 145 | ಮುಳಬಾಗಿಲು (SC) | ಶೀಗೆಹಳ್ಳಿ ಸುಂದರ್ | 9036 |
| 147 | ಬಂಗಾರಪೇಟೆ (ST) | ಎಂ.ನಾರಾಯಣಸ್ವಾಮಿ | 8617 |
| 159 | ಪುಲಕೇಶಿನಗರ (SC) | ಮುರಳಿ | 10585 |
| 182 | ಮಾಗಡಿ | ಪ್ರಸಾದ್ ಗೌಡ | 20073 |
| 183 | ರಾಮನಗರ | ಗೌತಮ್ ಗೌಡ | 12821 |
| 184 | ಕನಕಪುರ | ಆರ್.ಅಶೋಕ್ | 19602 |
| 186 | ಮಳವಳ್ಳಿ (SC) | ಮುನಿರಾಜು | 24910 |
| 187 | ಮದ್ದೂರು | ಎಸ್.ಪಿ.ಸ್ವಾಮಿ | 28650 |
| 188 | ಮೇಲುಕೋಟೆ | ಇಂದ್ರೇಶ್ ಕುಮಾರ್ | 6378 |
| 191 | ನಾಗಮಂಗಲ | ಸುಧಾ ಶಿವರಾಮ್ | 7683 |
| 193 | ಶ್ರವಣಬೆಳಗೊಳ | ಚಿದಾನಂದ | 5585 |
| 194 | ಅರಸೀಕೆರೆ | ಜಿ.ವಿ.ಬಸವರಾಜು | 6456 |
| 197 | ಹೊಳೆನರಸೀಪುರ | ದೇವರಾಜೇಗೌಡ | 4764 |
| 198 | ಅರಕಲಗೂಡು | ಯೋಗ ರಮೇಶ್ | 19385 |
| 210 | ಪಿರಿಯಾಪಟ್ಟಣ | ಸಿ.ಎಚ್.ವಿಜಯಶಂಕರ್ | 7297 |
| 211 | ಕೃಷ್ಣರಾಜನಗರ | ವೆಂಕಟೇಶ್ ಹೊಸಳ್ಳಿ | 2337 |
| 212 | ಹುಣಸೂರು | ದೇವರಹಳ್ಳಿ ಸೋಮಶೇಖರ್ | 6215 |
| 220 | ಟಿ.ನರಸೀಪುರ | ರೇವಣ್ಣ | 20252 |












Click it and Unblock the Notifications