Karnataka Election 2023 LIVE News Updates: ನಾಮಪತ್ರ ಹಿಂಪಡೆಯಲು ಇದ್ದ ಗಡುವು ಅಂತ್ಯ, ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪೂಜೆ
ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದ ಬೆಂಗಳೂರಿನ ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಎಸ್ಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದಿದ್ದರೂ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬೇಸರಗೊಂಡ ಅವರು ಕಾಂಗ್ರೆಸ್ ತೊರೆದು ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ 3ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಹೆಸರು ಇರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶ್ರೀನಿವಾಸಮೂರ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮಾಡಲಾಗಿದೆ. ಇಂದು ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
'ಒನ್ ಇಂಡಿಯಾ ಕನ್ನಡ' ಜಾಲತಾಣವು ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿ ನೀಡಲು ನಿತ್ಯವು ಹೊಸ ಲೈವ್ ಬ್ಲಾಗ್ ಆರಂಭಿಸಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು.
ಹಾವೇರಿ: ಪ್ರಚಾರದ ವೇಳೆ ಪೊಲೀಸರ ವಿರುದ್ಧ ಸಿಎಂ ಗರಂ

ಜೆಡಿಎಸ್ಗೆ ಮತಹಾಕಿದರೆ ಕಾಂಗ್ರೆಸ್ ಜತೆ ಅಧಿಕಾರಕ್ಕೆ: ಶಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವೀರಶೈವ ಲಿಂಗಾಯತ, ಒಕ್ಕಲಿಗ ಮತ್ತು ಎಸ್.ಸಿ ಹಾಗೂ ಎಸ್.ಟಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಕಾಂಗ್ರೆಸ್ ಜೊತೆಗೆ ಅಧಿಕಾರಕ್ಕೆ ಬರುತ್ತಾರೆ.
— BJP Karnataka (@BJP4Karnataka) April 24, 2023
ಬಿಜೆಪಿಗೆ ಬಹುಮತ ನೀಡಿ, ಕಮಲವನ್ನು ಗೆಲ್ಲಿಸಿ
- ಶ್ರೀ @AmitShah pic.twitter.com/J3vJCOVOQ3
ಏಕಕಾಲಕ್ಕೆ ಬಿಜೆಪಿ 'ಮತಪ್ರಚಾರ ಅಭಿಯಾನ'
In @BJP4India, power is not passed from mother to son, father to children or husbands to wives.
— BJP Karnataka (@BJP4Karnataka) April 24, 2023
Instead, our priority is to maintain a strong connection with our karyakartas & people. In light of this, we're launching #BJPMahaPracharaAbhiyana on the 25th & 26th of April.
1/6 pic.twitter.com/dbAYw6vnpD
ಪರಿವಾರ ರಾಜಕಾರಣಕ್ಕೆ ವಿರೋಧ: ಶಾ

ನನಗೂ ಸಿಎಂ ಆಗುವ ಆಸೆ ಇದೆ: ಸಿ.ಟಿ ರವಿ
ಶೆಟ್ಟರ್ ಅವಮಾನದ ಹಿಂದೆ ಇದ್ದ ಪೇಶ್ವೆ ಯಾರು?
ಹುಬ್ಬಳ್ಳಿ: ಅಮಿತ್ ಶಾ ಸುದ್ದಿಗೋಷ್ಠಿ
ನೇರ ಪ್ರಸಾರ: ಮಾನ್ಯ ಗೃಹ ಸಚಿವರಾದ ಶ್ರೀ @AmitShah ಅವರೊಂದಿಗೆ ಹುಬ್ಬಳ್ಳಿಯ ಪತ್ರಿಕಾ ಗೋಷ್ಠಿಯಲ್ಲಿ ಭಾಗಿ #BJPYeBharavase https://t.co/Jm3fiXXjwg
— Pralhad Joshi (@JoshiPralhad) April 24, 2023
ಸಿದ್ದರಾಮಯ್ಯರಿಂದ ಲಿಂಗಾಯತರಿಗೆ ಅವಮಾನ: ಸಿಸಿ ಪಾಟೀಲ್
ಕಾಫಿನಾಡಲ್ಲಿ ಎಐಸಿಸಿ ಅಧ್ಯಕ್ಷರ ಗುಡುಗು
ಬ್ರಿಟೀಷರ ಕಾಲದಲ್ಲೇ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿದ್ದರು.
— Karnataka Congress (@INCKarnataka) April 24, 2023
ಈಗ ಬಿಜೆಪಿ ಅದನ್ನು 12 ಗಂಟೆಗೆ ಹೆಚ್ಚಿಸಿದೆ. ಇದು ಕಾರ್ಮಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ?
ಎಲ್ಐಸಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಂತ ಸಂಸ್ಥೆಗಳಿಂದ ಜನರ ಹಣ ಕಿತ್ತು ಶ್ರೀಮಂತರಿಗೆ ನೀಡಲಾಗುತ್ತಿದೆ.
-@kharge pic.twitter.com/JyMzm9W14h
ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದ 'ರಾಗಾ'
ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi ಅವರು ಬೆಳಗಾವಿಯ ರಾಮದುರ್ಗದಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಂವಾದ ನಡೆಸಿ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಸಿ, ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಬೆನ್ನಿಗೆ ನಿಲ್ಲಲಿದೆ ಎಂಬ ಭರವಸೆ ನೀಡಿದರು.#CongressBaralidePragatiTaralide pic.twitter.com/6E93Qpmywz
— Karnataka Congress (@INCKarnataka) April 24, 2023
ಅಮಿತ್ ಶಾ ರೋಡ್ ಶೋನಲ್ಲಿ ಕಂಡು ಬಂದ ದೃಶ್ಯ
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ನ ನಿದ್ದೆಗೆಡಿಸಿವೆ. ಬಿಜೆಪಿಗೆ ಕರುನಾಡಿನ ಜನರ ಪ್ರೀತಿ, ಭರವಸೆ, ಒಗ್ಗಟ್ಟೇ ಶಕ್ತಿ ಎನ್ನುವುದಕ್ಕೆ ಸಾಕ್ಷಿಯಾಯಿತು ಇಂದು ಸಕಲೇಶಪುರದಲ್ಲಿ ಕೇಂದ್ರ ಗೃಹ & ಸಹಕಾರ ಸಚಿವರಾದ ಶ್ರೀ @AmitShah ಅವರ ನೇತೃತ್ವದಲ್ಲಿ ನಡೆದ ರೋಡ್ ಶೋ#BJPWinningKarnataka #BJPYeBharavase
— BJP Karnataka (@BJP4Karnataka) April 24, 2023
1/2 pic.twitter.com/GvRL6zZbnI
ಎಎಪಿ ದೆಹಲಿ ನಾಯಕ ಏ.25ಕ್ಕೆ ಆಗಮನ

ಜೆಪಿ ನಡ್ಡಾ-ಅಮಿತ್ ಶಾ ರೋಡ್ ಶೋ
Today is the Last Date for withdrawal of candidature in 224 Assembly Constituencies of Karnataka #AssemblyElections2023.#ElectionCommissionOfIndia #ECI #KarnatakaElections2023 pic.twitter.com/xcsMcrqFR9
— Election Commission of India #SVEEP (@ECISVEEP) April 24, 2023
ಲಿಂಗಾಯತ ಸಿಎಂ ಬಾಂಬ್ಗೆ ಸಿದ್ದು ಸ್ಪಷ್ಟನೆ
ಮಂಗಳೂರಲ್ಲಿ ಜೆಡಿಎಸ್ಗೆ ಮುಖಭಂಗ

ಗೋಕಾಕ್: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬಿಎಸ್ವೈ ಮನವೊಲಿಕೆಗೂ ಒಪ್ಪದ ಅರುಣ್ ಕುಮಾರ್ ಪುತ್ತಿಲ
ಕೊಲ್ಲೂರಲ್ಲಿ ಡಿಕೆಶಿ ಸಿಎಂ ಪ್ರಾರ್ಥನೆ
ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ: ಯಡಿಯೂರಪ್ಪ

ಕುಮಟಾ ಕಾಂಗ್ರೆಸ್ ಬಂಡಾಯ ಶಮನ: ನಾಮಪತ್ರ ಹಿಂಪಡೆದ ಶಾರದಾ ಶೆಟ್ಟಿ

ಹಳೆ ಪ್ಲೇಯರ್ ರಿಟೈರ್ಡ್ ಆಗಿ ಅಂದ್ರೆ ಶೆಟ್ಟರ್ ಬೇರೆ ಟೀಮ್ಗೆ ಹೋದ್ರು-ಜೋಶಿ













Click it and Unblock the Notifications