ಗೌಡ್ರೆ, ನಿಮ್ ಕೈಯಲ್ಲಿ ಏನೂ ಮಾಡೋಕಾಗಲ್ವಾ?
ಪ್ರ : ಹಾಗಿದ್ರೆ ನಿಮ್ಮ ಕೈಯಲ್ಲಿ ಏನೂ ಮಾಡೋಕಾಗಲ್ಲ ಅಂತೀರಾ?
ನಾ. ಗೌಡ : ಏನೂ ಮಾಡೋಕಾಗಲ್ಲ ಅಂತಲ್ಲ. ಆದರೆ, ನಾವು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೇ ಹೋರಾಟ ಮಾಡಬೇಕು. ಕನ್ನಡಿಗರ ಮೇಲೆ ಕನ್ನಡಿಗರೇ ಹೋರಾಟ ಮಾಡಬೇಕು. ನೋಡಿ, ನಷ್ಟ ಯಾರಿಗೆ? ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೇ ನಷ್ಟ. ಕಡಿವಾಣ ಹಾಕದಿದ್ದರಿಂದ ತಮಿಳು ಚಿತ್ರಗಳು ನೂರು ದಿನ ಓಡುವಂತಾಗಿದೆ. ಬೇರೆ ಚಿತ್ರಗಳಿಗೆ ಕಡಿವಾಣ ಹಾಕಿ. ಆಗ ಮಾತ್ರ ಕನ್ನಡಿಗರು ಕನ್ನಡ ಚಿತ್ರ ಬಂದು ನೋಡುತ್ತಾರೆ. ಕೆಟ್ಟ ಚಿತ್ರಗಳನ್ನು ಬಲವಂತವಾಗಿ ನೋಡಬೇಕಂತಲ್ಲ, ಒಳ್ಳೆಯ ಚಿತ್ರವಿದ್ದರೆ ಖಂಡಿತ ನೋಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ಅಂಥ ವ್ಯಕ್ತಿಯೊಬ್ಬ ಇಲ್ಲ. ಉರಿಯುವ ಮನೆಯಲ್ಲಿ ಗಳ ಹಿರಿಯುವಂಥವರೇ ಅನೇಕರಿದ್ದಾರೆ.
ಪ್ರ : ಚಿತ್ರರಂಗದಲ್ಲಿ ಡಬ್ಬಿಂಗ್ ಬೇಕಾ, ಬೇಡವಾ? ಇದಕ್ಕೆ ನಿಮ್ಮ ನಿಲುವೇನು?
ನಾ. ಗೌಡ : ಅಂಥ ಯಾವುದೇ ತೀರ್ಮಾನ ನಾವು ತೆಗೆದುಕೊಂಡಿಲ್ಲ. ಕನ್ನಡದ ಭಾಷೆ ಬೆಳವಣಿಗೆಗೆ, ಕನ್ನಡದ ಲಾಭಕ್ಕೆ, ಕನ್ನಡ ವಿಶ್ವವ್ಯಾಪಿಯಾಗಲು ಯಾವುದು ಸೂಕ್ತವೋ ಅದರ ಪರವಾಗಿ ನಾವಿರುತ್ತೇವೆ.

ಪ್ರ : ನಿಮ್ಮ ಕನ್ನಡಪರ ಹೋರಾಟ ರಾಜಕೀಯ ಮೆಟ್ಟಿಲ ಬಳಿ ಬಂದು ನಿಂತಿದೆ. ನಿಮ್ಮ ರಾಜಕೀಯ ಕನಸುಗಳೇನು? ಮುಖ್ಯಮಂತ್ರಿಯಾಗುವುದಾ?
ನಾ. ಗೌಡ : ಪ್ರಾದೇಶಿಕವಾದ ಪಕ್ಷ ಕಟ್ಟುವ ಅಗತ್ಯವಿದೆ. ಅವುಗಳಿಗೆ ಆದ್ಯತೆ ಸಿಗುತ್ತದೆ. ದಲಿತಪರ, ರೈತಪರ, ಕನ್ನಡಪರ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಆದರೆ, ನನಗೆ ಇನ್ನೂ ಅಂಥ ಸಾಧ್ಯತೆಗಳ ಬಗ್ಗೆ ನಂಬಿಕೆ ಹುಟ್ಟಿಲ್ಲ. ಅಂಥ ನಂಬಿಕೆ ಬಂದರೆ ಖಂಡಿತ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತೇನೆ.
ಪ್ರ : ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಸಂದೇಶ?
ನಾ. ಗೌಡ : ಕನ್ನಡಿಗರು ವಿಶ್ವವ್ಯಾಪಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗುವಂತಾಗಬೇಕು. ಕನ್ನಡಿಗರು ಬೇರೆಯವರಿಗೆ ಕನ್ನಡ ಮಾತಾಡಿ ಅನ್ನುವ ಮೊದಲು ಕನ್ನಡಿಗರು ಕನ್ನಡವನ್ನು ಹೆಚ್ಚು ಪ್ರೀತಿಸುವಂಥದ್ದು, ಮಾತಾಡುವಂಥದ್ದು ಆಗಬೇಕು. ಕನ್ನಡಿಗರಿಗೆ ಹೃದಯವೈಶಾಲ್ಯತೆ ಇರಬೇಕು ನಿಜ. ಆದರೆ, ಅವರ ಭಾಷೆ ಕಲಿತು ಉದ್ಧಾರವಾಗುತ್ತೇನೆ ಎಂಬ ಮೂಢತೆಯಿಂದ ಕನ್ನಡಿಗರು ಹೊರಬರಬೇಕು. ಎಲ್ಲ ಕ್ಷೇತ್ರಗಳಲ್ಲಿ ಕನ್ನಡಿಗರು ಸಾರ್ವಭೌಮರಾಗಿರಬೇಕು ನನ್ನ ಗುರಿ. ಅದಕ್ಕಾಗಿ ಕನ್ನಡಿಗರು ಒಗ್ಗೂಡಬೇಕು, ಕನ್ನಡದನಿ ಒಂದಾಗಬೇಕು.
ಪ್ರ : ಕೊನೆಯದಾಗಿ, ಕನ್ನಡಪರ ಹೋರಾಟ ಮಾಡುತ್ತಿರುವ ಕನ್ನಡ ರಕ್ಷಣಾ ವೇದಿಕೆಯನ್ನೇ ಯಾಕೆ ಎಚ್ಚರಿಸುವಂತಾಗಬೇಕು?
ನಾ. ಗೌಡ : ಹೌದು, ಖಂಡಿತ ಎಚ್ಚರಿಸಬೇಕು. ನಮ್ಮನ್ನೂ ಒಂದೊಂದು ಸಾರಿ ಎಚ್ಚರಿಸಬೇಕಾಗುತ್ತದೆ. ಸಮಸ್ಯೆಗಳ ನಡುವಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲದಲ್ಲಿದ್ದಾಗ ನಮ್ಮನ್ನೂ ಮಾಧ್ಯಮದವರು ಎಚ್ಚರಿಸಬೇಕಾಗುತ್ತದೆ. ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಅನುಮಾನದಿಂದ ನೋಡುವಂತಾದಾಗ, ಏನೇ ಸಮಸ್ಯೆ ಬಂದರೂ ಏಕದೃಷ್ಟಿಯಿಂದ ಚಿಂತನೆ ನಡೆಸುವ ಬದಲು, ಇತರರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುವುದು ಸೂಕ್ತ. ಆದರೆ, ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ ಅಂತಲ್ಲ. ಧಾರ್ಮಿಕ ಸ್ವಾಮೀಜಿ ಏನೋ ಮಾಡಿದ ಅಂತ ಬೀದಿಗಿಳಿಯುವುದೂ ಸರಿಯಲ್ಲ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications