ದೈವಬಲವಿದ್ದರೆ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ಶ್ರೀಗಳೇ
ರಾಣೆಬೆನ್ನೂರು, ಅ 28: ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆ ಹಲವು ಆಯಾಮಗಳಲ್ಲಿ ಟೀಕೆಯನ್ನು ಎದುರಿಸುವಂತಾಗಿದೆ. ವೈಷ್ಣವರೆಂದು ಜಂಬ ಕೊಚ್ಚಿಕೊಳ್ಳುವ ನಿಮಗೆ ದೈವಬಲವಿದೆಯೇ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ನೀವು ಯಾರು? ಬನ್ನಿ ನಿಮಗೇ ನಾವು ಶೈವ ದೀಕ್ಷೆಯನ್ನು ನೀಡುತ್ತೇವೆ. ಅಂದು ನಿಮ್ಮ ಸಮುದಾಯದವರ ಅವಹೇಳನದಿಂದ ಬೇಸತ್ತು ದೇವಾಲಯದ ಹೊರಗಡೆಯಿಂದ ಕನಕದಾಸರು ಶ್ರೀಕೃಷ್ಣನ ದರ್ಶನ ಮಾಡಿದರು. ಕನಕನ ಭಕ್ತಿಗೆ ಮೆಚ್ಚಿದ ಪರಮಾತ್ಮ ನಿಮಗೆ ಬೆನ್ನು ಹಾಕಿ ಕನಕನ ಕಡೆ ತಿರುಗಿದ.
ನಿಮಗೆ ದೈವಬಲ ಇದ್ದರೆ ಕನಕನ ಕಡೆ ಮುಖ ಮಾಡಿದ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ನೋಡೋಣ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ವಿವಿಧ ಕುರುಬ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ (ಅ 27) ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಾ ಮಾತನಾಡುತ್ತಿದ್ದ ಕಾಗಿನೆಲೆ ಶ್ರೀಗಳು, ನಿಮಗೆ ಗೊತ್ತಿಲ್ಲದ ವಿಚಾರವನ್ನು ಮತ್ತು ಪದ್ದತಿಯನ್ನು ಮೊದಲು ತಿಳಿದು ಕೊಳ್ಳಲು ಪ್ರಯತ್ನಿಸಿ ಎಂದು ಪೇಜಾವರ ಶ್ರೀಗಳಿಗೆ ಸಲಹೆ ನೀಡಿದ್ದಾರೆ.
ಪೇಜಾವರರೇ ನೀವು ಸಾವಿಗೆ ಸಮೀಪವಾಗಿದ್ದೀರಿ....

ಹಾಲುಮತದವರು
ಹಾಲುಮತದವರು ಗರ್ಭದಲ್ಲೇ ದೀಕ್ಷೆ ಪಡೆದಿರುತ್ತಾರೆ. ನಮಗೆ ವೈಷ್ಣವ ಪದ್ದತಿಯನ್ನು ಹೇರಲು ಪ್ರಯತ್ನ ಮಾಡಬೇಡಿ. ಸಮಾಜದಲ್ಲಿ ಸಾಮರಸ್ಯದ ಬಾಳಿಗೆ ಆದ್ಯತೆ ಕೊಡಿ - ನಿರಂಜನಾನಂದಪುರಿ ಸ್ವಾಮೀಜಿ.

ನೀವು ಸಾವಿಗೆ ಸಮೀಪವಾಗಿದ್ದೀರಿ
ಪೇಜಾವರರೇ ನಿಮಗೀಗ 75 ವರ್ಷ ವಯಸ್ಸು, ಬಹಳಷ್ಟು ಸಾಧನೆಯನ್ನೂ ಮಾಡಿದ್ದೀರಿ. ನೀವು ಸಾವಿಗೆ ಸಮೀಪವಾಗಿದ್ದೀರಿ, ಕೆಟ್ಟ ಕೆಲಸ ಮಾಡಲು ಹೋಗಬೇಡಿ. ಇದ್ದಷ್ಟು ದಿನ ಒಳ್ಳೆಯದನ್ನು ಮಾಡಿ - ನಿರಂಜನಾನಂದಪುರಿ ಸ್ವಾಮೀಜಿ.

ದೇಶಭಕ್ತಿ ದೀಕ್ಷೆ ಮುಖ್ಯ
ಎಲ್ಲಾ ದೀಕ್ಷೆಗಿಂತ ಮಿಗಿಲಾಗಿದ್ದು ದೇಶಭಕ್ತಿ. ವೈಷ್ಣವ, ಶೈವ ಎನ್ನುವುದಕ್ಕಿಂತ ದೇಶದ ಐಕ್ಯತೆ ಮುಖ್ಯ. ಜಾತಿ ಭೇದ ಭಾವವನ್ನು ಅಳಿಸಿ ಹಾಕಿ ದೇಶದ ಪ್ರಗತಿಗೆ ಪಣ ತೊಡೋಣ - ಮಾಜಿ ರಾಜ್ಯಪಾಲ ರಾಮ ಜೋಯಿಸ್.

ಜನಪ್ರಿಯತೆ
ನಿಮಗೆ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಆಸೆಯೇ? ಹಾಗಿದ್ದರೆ ಸಮಾಜ ಸುಧಾರಣೆಯ ವಿಷಯಕ್ಕೆ ಮುಂದಾಗಿ. ಸುಮ್ಮನೆ ವೈಷ್ಣವ, ಶೈವ ಎಂದು ಸಮಾಜದಲ್ಲಿ ವಿಷಬೀಜ ಬಿತ್ತ ಬೇಡಿ - ನಿರಂಜನಾನಂದಪುರಿ ಸ್ವಾಮೀಜಿ.

ಎರಡೂ ಮುಖ್ಯ
ನಮ್ಮ ಸಮುದಾಯದವರಿಗೆ ವೈಷ್ಣವ ದೀಕ್ಷೆ ನೀಡುವ ಕಷ್ಟವನ್ನು ಪೇಜಾವರರು ತೆಗೆದು ಕೊಳ್ಳಬೇಕಾಗಿಲ್ಲ. ನಮಗೆ ಕಾಗಿನೆಲೆ ಮತ್ತು ಉಡುಪಿ ಮಠಗಳು ಎರಡೂ ಒಂದೇ - ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications