ದೈವಬಲವಿದ್ದರೆ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ಶ್ರೀಗಳೇ
ರಾಣೆಬೆನ್ನೂರು, ಅ 28: ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆ ಹಲವು ಆಯಾಮಗಳಲ್ಲಿ ಟೀಕೆಯನ್ನು ಎದುರಿಸುವಂತಾಗಿದೆ. ವೈಷ್ಣವರೆಂದು ಜಂಬ ಕೊಚ್ಚಿಕೊಳ್ಳುವ ನಿಮಗೆ ದೈವಬಲವಿದೆಯೇ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ನೀವು ಯಾರು? ಬನ್ನಿ ನಿಮಗೇ ನಾವು ಶೈವ ದೀಕ್ಷೆಯನ್ನು ನೀಡುತ್ತೇವೆ. ಅಂದು ನಿಮ್ಮ ಸಮುದಾಯದವರ ಅವಹೇಳನದಿಂದ ಬೇಸತ್ತು ದೇವಾಲಯದ ಹೊರಗಡೆಯಿಂದ ಕನಕದಾಸರು ಶ್ರೀಕೃಷ್ಣನ ದರ್ಶನ ಮಾಡಿದರು. ಕನಕನ ಭಕ್ತಿಗೆ ಮೆಚ್ಚಿದ ಪರಮಾತ್ಮ ನಿಮಗೆ ಬೆನ್ನು ಹಾಕಿ ಕನಕನ ಕಡೆ ತಿರುಗಿದ.
ನಿಮಗೆ ದೈವಬಲ ಇದ್ದರೆ ಕನಕನ ಕಡೆ ಮುಖ ಮಾಡಿದ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ನೋಡೋಣ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ವಿವಿಧ ಕುರುಬ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ (ಅ 27) ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಾ ಮಾತನಾಡುತ್ತಿದ್ದ ಕಾಗಿನೆಲೆ ಶ್ರೀಗಳು, ನಿಮಗೆ ಗೊತ್ತಿಲ್ಲದ ವಿಚಾರವನ್ನು ಮತ್ತು ಪದ್ದತಿಯನ್ನು ಮೊದಲು ತಿಳಿದು ಕೊಳ್ಳಲು ಪ್ರಯತ್ನಿಸಿ ಎಂದು ಪೇಜಾವರ ಶ್ರೀಗಳಿಗೆ ಸಲಹೆ ನೀಡಿದ್ದಾರೆ.
ಪೇಜಾವರರೇ ನೀವು ಸಾವಿಗೆ ಸಮೀಪವಾಗಿದ್ದೀರಿ....

ಹಾಲುಮತದವರು
ಹಾಲುಮತದವರು ಗರ್ಭದಲ್ಲೇ ದೀಕ್ಷೆ ಪಡೆದಿರುತ್ತಾರೆ. ನಮಗೆ ವೈಷ್ಣವ ಪದ್ದತಿಯನ್ನು ಹೇರಲು ಪ್ರಯತ್ನ ಮಾಡಬೇಡಿ. ಸಮಾಜದಲ್ಲಿ ಸಾಮರಸ್ಯದ ಬಾಳಿಗೆ ಆದ್ಯತೆ ಕೊಡಿ - ನಿರಂಜನಾನಂದಪುರಿ ಸ್ವಾಮೀಜಿ.

ನೀವು ಸಾವಿಗೆ ಸಮೀಪವಾಗಿದ್ದೀರಿ
ಪೇಜಾವರರೇ ನಿಮಗೀಗ 75 ವರ್ಷ ವಯಸ್ಸು, ಬಹಳಷ್ಟು ಸಾಧನೆಯನ್ನೂ ಮಾಡಿದ್ದೀರಿ. ನೀವು ಸಾವಿಗೆ ಸಮೀಪವಾಗಿದ್ದೀರಿ, ಕೆಟ್ಟ ಕೆಲಸ ಮಾಡಲು ಹೋಗಬೇಡಿ. ಇದ್ದಷ್ಟು ದಿನ ಒಳ್ಳೆಯದನ್ನು ಮಾಡಿ - ನಿರಂಜನಾನಂದಪುರಿ ಸ್ವಾಮೀಜಿ.

ದೇಶಭಕ್ತಿ ದೀಕ್ಷೆ ಮುಖ್ಯ
ಎಲ್ಲಾ ದೀಕ್ಷೆಗಿಂತ ಮಿಗಿಲಾಗಿದ್ದು ದೇಶಭಕ್ತಿ. ವೈಷ್ಣವ, ಶೈವ ಎನ್ನುವುದಕ್ಕಿಂತ ದೇಶದ ಐಕ್ಯತೆ ಮುಖ್ಯ. ಜಾತಿ ಭೇದ ಭಾವವನ್ನು ಅಳಿಸಿ ಹಾಕಿ ದೇಶದ ಪ್ರಗತಿಗೆ ಪಣ ತೊಡೋಣ - ಮಾಜಿ ರಾಜ್ಯಪಾಲ ರಾಮ ಜೋಯಿಸ್.

ಜನಪ್ರಿಯತೆ
ನಿಮಗೆ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಆಸೆಯೇ? ಹಾಗಿದ್ದರೆ ಸಮಾಜ ಸುಧಾರಣೆಯ ವಿಷಯಕ್ಕೆ ಮುಂದಾಗಿ. ಸುಮ್ಮನೆ ವೈಷ್ಣವ, ಶೈವ ಎಂದು ಸಮಾಜದಲ್ಲಿ ವಿಷಬೀಜ ಬಿತ್ತ ಬೇಡಿ - ನಿರಂಜನಾನಂದಪುರಿ ಸ್ವಾಮೀಜಿ.

ಎರಡೂ ಮುಖ್ಯ
ನಮ್ಮ ಸಮುದಾಯದವರಿಗೆ ವೈಷ್ಣವ ದೀಕ್ಷೆ ನೀಡುವ ಕಷ್ಟವನ್ನು ಪೇಜಾವರರು ತೆಗೆದು ಕೊಳ್ಳಬೇಕಾಗಿಲ್ಲ. ನಮಗೆ ಕಾಗಿನೆಲೆ ಮತ್ತು ಉಡುಪಿ ಮಠಗಳು ಎರಡೂ ಒಂದೇ - ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications