ಜೆಡಿಎಸ್ನಿಂದ ಗುರುವಾರ ರಾಜಭವನಕ್ಕೆ ಬೀಗ!
ಬೆಂಗಳೂರು, ಏಪ್ರಿಲ್ 06 : ರಾಜ್ಯಪಾಲ ವಜುಭಾಯಿ ವಾಲಾ ಅವರ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಜೆಡಿಎಸ್ ಯುವ ಘಟಕ ರಾಜಭವನಕ್ಕೆ ಬೀಗ ಹಾಕಿ ಪ್ರತಿಭಟನೆ ಮಾಡಲಿದೆ. ಸೋಮವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡದೆ ರಾಜ್ಯಪಾಲರು ವಾಪಸ್ ಕಳಿಸಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ
ಏಪ್ರಿಲ್
7ರಂದು
ರಾಜ್ಯಪಾಲರ
ವಿರುದ್ಧ
ಪ್ರತಿಭಟನೆ
ನಡೆಯಲಿದೆ.
ಮೌರ್ಯ
ಹೋಟೆಲ್
ಮುಂಭಾಗದ
ಗಾಂಧಿ
ಪ್ರತಿಮೆ
ಬಳಿ
ಬೆಳಗ್ಗೆ
11
ಗಂಟೆಗೆ
ಪ್ರತಿಭಟನೆ
ನಡೆಯಲಿದೆ
ಎಂದು
ಪಕ್ಷದ
ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
[ಚಿತ್ರಗಳು
:
ಜೆಡಿಎಸ್
ಪ್ರತಿಭಟನೆ]
ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ರತನ್ಸಿಂಗ್, ಪಕ್ಷದ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಕೆ.ಗೋಪಾಲಯ್ಯ, ಜಮೀರ್ ಅಹಮದ್ ಖಾನ್, ಆರ್.ಅಖಂಡ ಶ್ರೀನಿವಾಸಮೂರ್ತಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]
ಪ್ರತಿಭಟನೆ ಏಕೆ? : ಏ.4ರ ಸೋಮವಾರ ಜೆಡಿಎಸ್ ಕರ್ನಾಟಕ ಸರ್ಕಾರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು. ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಸಿ) ರಚನೆ ಮಾಡಿರುವ ನಿರ್ಧಾರವನ್ನು ವಾಪಸ್ ಪಡೆಬೇಕೆಂದು ಒತ್ತಾಯಿಸಲಾಯಿತು.
ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಇತರ ನಾಯಕರ ಜೊತೆ ರಾಜಭವನಕ್ಕೆ ಮನವಿ ಸಲ್ಲಿಸಲು ತೆರಳಿದ್ದರು. ದೇವೇಗೌಡರು ರಾಜಭವನಕ್ಕೆ ಬಂದಾಗ ರಾಜ್ಯಪಾಲ ವಜುಭಾಯಿ ವಾಲಾ ಅವರು ಗೌಡರನ್ನು 45 ನಿಮಿಷಗಳ ಕಾಲ ಕಾಯಿಸಿದರು.
ರಾಜ್ಯಪಾಲರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ದೇವೇಗೌಡರಿಗೆ ತಿಳಿಸಿದ್ದರು. ಕೊನೆಗೂ ರಾಜ್ಯಪಾಲರನ್ನು ಭೇಟಿಯಾಗಲು ಸಾಧ್ಯವಾಗದೆ ಗೌಡರು ವಾಪಸ್ ಬಂದಿದ್ದರು. ಪಕ್ಷದ ಶಾಸಕರನ್ನೂ ರಾಜಭವನದ ಒಳಗೆ ಬಿಟ್ಟಿರಲಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.