ವಿಕಾಸ ಪರ್ವ: 128 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
Karnataka
oi-Manjunatha
By Manjunatha
|
ಬೆಂಗಳೂರು, ಫೆಬ್ರವರಿ 17:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಜೆಡಿಎಸ್ ಪಕ್ಷವು ಇಂದು ಯಲಹಂಕದ ನಿಟ್ಟೆ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ 'ವಿಕಾಸ ಪರ್ವ'ವನ್ನು ಆಯೋಜಿಸಿತ್ತು. ಇದೇ ಕಾರ್ಯಕ್ರಮದಲ್ಲಿ 128 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಬಿಎಸ್ಪಿ ಮತ್ತು ಎನ್ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವು ಮಾಯಾವತಿಯವರನ್ನು ಸಮಾವೇಶಕ್ಕೆ ಕರೆತಂದಿದ್ದು, ದಲಿತ ಮತಗಳನ್ನು ತನ್ನತ್ತ ಸೆಳೆದುಕೊಳ್ಳಲೂ ಸಹ ಈ ಸಮಾವೇಶವನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.
ಬೃಹತ್ ಮಟ್ಟದಲ್ಲಿ 'ವಿಕಾಸ ಪರ್ವ' ಸಮಾವೇಶಕ್ಕೆ ರಾಜ್ಯದೆಲ್ಲೆಡೆಯಿಂದ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದು, ಸಮಾವೇಶದಲ್ಲಿ ಸುಮಾರು 3 ಲಕ್ಷ ಜನ ಸೇರಿರುವ ಅಂದಾಜಿದೆ.
Feb 17, 2018 7:59 PM
128 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್, ಅಭ್ಯರ್ಥಿಗಳಿಗೆ ಪ್ರಮಾಣ ಬೋಧಿಸಿದ ಎಚ್.ಡಿ.ದೇವೇಗೌಡ
Feb 17, 2018 7:56 PM
ಬಹುಜನ ಪಕ್ಷಗಳ ಅಭ್ಯರ್ಥಿಗಳಿಗೆ ಜೆಡಿಎಸ್ ಪಕ್ಷದ ಕಾರ್ಯಕ್ರತರು ಸಹಾಯ ಮಾಡಿ ಎಂದು ಮನವಿ ಮಾಡಿದ ಕುಮಾರಸ್ವಾಮಿ
Feb 17, 2018 7:50 PM
ನನಗೆ ಈ ಬಾರಿ ಅಧಿಕಾರ ಕೊಡಿ ಎಂದು ಅಕ್ಷರಶಃ ಅಂಗಲಾಚಿದ ಕುಮಾರಸ್ವಾಮಿ
Feb 17, 2018 7:49 PM
70 ದಿನಗಳಲ್ಲಿ ನಿಮ್ಮ ಕ್ಷೇತ್ರದ ಪ್ರತಿ ಮನೆಗೆ ಭೇಟಿ ಮಾಡಿ, ಅವರ ಕಷ್ಟ ಸುಖದಲ್ಲಿ ಭಾಗಿ ಆಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಕುಮಾರಸ್ವಾಮಿ. ಕಾರ್ಯಕರ್ತರು ಕರೆದಲ್ಲಿಗೆ ನಾನು ಬರುತ್ತೇನೆ ಎಂದ ಎಚ್ಡಿಕೆ
Feb 17, 2018 7:45 PM
ನಮಗೆ ಗುಜರಾತ್ ಮಾದರಿ ಅಲ್ಲ, ಅಲ್ಲಿ ನಡೆದಂತ ಹಿಂಸೆ, ಮಹಿಳೆಯರ ಸಾವು ನಮಗೆ ಮಾದರಿ ಆಗುವುದು ಬೇಡ, ಇಡೀ ದೇಶ ನಮ್ಮ ರಾಜ್ಯದತ್ತ ತಿರುಗಿ ನೋಡುವ ಹಾಗೆ ಅಭಿವೃದ್ಧಿ ಮಾಡಬೇಕೆಂಬ ಆಸೆ ಇದೆ: ಎಚ್ಡಿಕೆ
Feb 17, 2018 7:43 PM
ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು, ಪ್ರತಿ ಜಿಲ್ಲೆಯ ರೈತರನ್ನು ವಿಧಾನಸೌಧಕ್ಕೆ ಕರೆಸಿ ಸಭೆ ಮಾಡುತ್ತೇನೆ, ಅಷ್ಟೆ ಅಲ್ಲ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಕಲ್ಯಾಣಕ್ಕೆ ಶ್ರಮಿಸುತ್ತೇನೆ: ಕುಮಾರಸ್ವಾಮಿ
Feb 17, 2018 7:42 PM
ಕೇವಲ ರೈತರ ಅಭಿವೃದ್ಧಿ ಮಾತ್ರವನ್ನೇ ಕುಮಾರಸ್ವಾಮಿ ಮಾಡುತ್ತಾನೆ ಎಂದು ಕೊಳ್ಳಬೇಡಿ, ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿ ನನ್ನ ಗುರಿ: ಕುಮಾರಸ್ವಾಮಿ
Feb 17, 2018 7:40 PM
ಜಲಿಯನ್ ವಾಲಾಬಾಗ್ ಗಿಂತಲೂ ಕಡೆಯಾಗಿ ಮಹದಾಯಿ ಹೋರಾಟಗಾರರ ಮೇಲೆ ಕಾಂಗ್ರೆಸ್ ಸರ್ಕಾರ ಪೊಲೀಸರ ಕೈಲಿ ಲಾಠಿ ಬೀಸಿಸಿದರು: ಕುಮಾರಸ್ವಾಮಿ
Feb 17, 2018 7:36 PM
ಸರ್ಕಾರಿ ನೌಕರರಿಗೆ 5ನೇ ವೇತನ ಆಯೋಗ ಜಾರಿ ಮಾಡಿದ್ದೆ, ಈಗ ಸಿಎಂ ಅವರು 6 ನೇ ವೇತನ ಆಯೋಗ ಜಾರಿಗೆ ವಿಳಂಬ ಮಾಡುತ್ತಿದ್ದಾರೆ, ಇಬ್ಬರಲ್ಲಿ ಯಾರು ಬೇಕು ಆಯ್ಕೆ ಮಾಡಿಕೊಳ್ಳಿ: ಕುಮಾರಸ್ವಾಮಿ
Feb 17, 2018 7:32 PM
ಸಿದ್ದರಾಮಯ್ಯ ಸರ್ಕಾರದಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಅವರ ಕುಟುಂಬಕ್ಕೂ ರಕ್ಷಣೆ ಇಲ್ಲ: ಸಿದ್ದರಾಮಯ್ಯ
Feb 17, 2018 7:31 PM
ರಾಜ್ಯ ಇನ್ನೂ ಹಸಿವು ಮುಕ್ತವಾಗಿಲ್ಲ, ಅಧಿಕಾರದ ಮದದಲ್ಲಿ ಸಿಎಂ ಅವರು ರಾಜ್ಯದ ಸಮಸ್ಯೆ ಮರೆತಿದ್ದೀರಿ: ಕುಮಾರಸ್ವಾಮಿ
Feb 17, 2018 7:29 PM
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್ಲಾ ನದಿಗಳ ನೀರು ಹಂಚಿಕೆ ವಿವಾದಕ್ಕೂ ಪರಿಹಾರ: ಕುಮಾರಸ್ವಾಮಿ
Feb 17, 2018 7:27 PM
ನನ್ನ ಪಕ್ಷ ಉಳಿಸುವ ಜವಾಬ್ದಾರಿ ಇತ್ತು ಹಾಗಾಗಿ, ಬಿಜೆಪಿ ಪಕ್ಷದೊಂದಿಗೆ ನಾನು ಸರ್ಕಾರ ರಚಿಸಿದೆ: ಕುಮಾರಸ್ವಾಮಿ
Feb 17, 2018 7:26 PM
ರಾಜ್ಯದ ಜನ ಎಲ್ಲಾ ಪಕ್ಷಗಳ ಆಡಳಿತವನ್ನೂ ನೋಡಿದ್ದೀರಿ, ಆದರೆ ಈ ಬಾರಿ ನನಗೆ ಅವಕಾಶ ಕೊಡಿ: ಕುಮಾರಸ್ವಾಮಿ
Feb 17, 2018 7:25 PM
ಜೆಡಿಎಸ್ ಪಕ್ಷಕ್ಕೆ ಹತ್ತು ವರ್ಷದಿಂದ ಅಧಿಕಾರವಿಲ್ಲ, ಆದರೂ ಪಕ್ಷ ಉಳಿಯಲು ನಿಮ್ಮ ಪ್ರೀತಿಯೇ ಕಾರಣ, ನೀವು ನನಗೆ ಪ್ರೀತಿಯ ಅಭಿಷೇಕ ಮಾಡಿದ್ದೀರಿ: ಕುಮಾರಸ್ವಾಮಿ
Feb 17, 2018 7:24 PM
'ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ' ಎಂದಿದ್ದ ಸಿಎಂ ಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಏನು ದೇವೇಗೌಡರನ್ನು ಕೊಂಡಿದ್ದಾರೆಯೇ, ಅಥವಾ ದತ್ತು ತೆಗೆದುಕೊಂಡಿದ್ದಾರಾ: ಕುಮಾರಸ್ವಾಮಿ
Feb 17, 2018 7:18 PM
ದೇವೇಗೌಡ, ಕುಮಾರಸ್ವಾಮಿ ಸೇರಿ ನಾಟಕ ಆಡಿದರು ಎಂದು ಆಗ ಕೆಲವರು ಮಾತನಾಡಿದರು, ಆದರೆ ಅದೆಲ್ಲಾ ಸುಳ್ಳು, ರಾಜಕೀಯ ಪ್ರಲೋಭನೆಗೆ ಒಳಗಾಗಿ ನಾನು ಮುಖ್ಯಮಂತ್ರಿ ಆದೆ, ನನ್ನ ತಂದೆಯ ಮಾತಿನಿಂದಲ್ಲ: ಕುಮಾರಸ್ವಾಮಿ
Feb 17, 2018 7:17 PM
ನಾನು ಮುಖ್ಯಮಂತ್ರಿ ಆಗಲು ಹೊರಟ ದಿನ ನನ್ನ ತಂದೆ ದೇವೇಗೌಡ ಅವರು ನನ್ನ ನಿರ್ಧಾರವನ್ನು ತಿಳಿದು ಮೂರ್ಛೆ ತಪ್ಪಿ ಬಿದ್ದುಬಿಟ್ಟರು, ಅವರನ್ನು ನನ್ನ ಭಾವ ಮಂಜುನಾಥ ಆಸ್ಪತ್ರೆಗೆ ಸೇರಿಸಿದ್ದರು: ಕುಮಾರಸ್ವಾಮಿ
Feb 17, 2018 7:16 PM
'ರಾಜಕೀಯ ಮೇಲಾಟದಲ್ಲಿ ನಾನು ಮುಖ್ಯಮಂತ್ರಿ ಆಗಿ ಬಿಟ್ಟೆ, ಅಂದು ನನ್ನ ತಂದೆಗೆ ನಾನು ನೋವನ್ನು ಕೊಟ್ಟೆ' ಎಂದು ಭಾವುಕರಾದ ಕುಮಾರಸ್ವಾಮಿ
Feb 17, 2018 7:14 PM
ನನ್ನ ಮುಖ್ಯಮಂತ್ರಿ ಮಾಡಬೇಕಿರುವುದು ನನಗಾಗಿ ಅಲ್ಲ, ಬಡ ಕುಟುಂಬಕ್ಕಾಗಿ ನಾನು ಜೀವನ ಮುಡಿಪಿಟ್ಟಿದ್ದೇನೆ, ಅವರಿಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ: ಕುಮಾರಸ್ವಾಮಿ
Feb 17, 2018 7:13 PM
ನನ್ನ ಹೃದಯ ಶಸ್ತ್ರಚಿಕಿತ್ಸೆ ನಡೆದಾಗ ಎಲ್ಲಾ ಧರ್ಮದ ಜನರು ನನಗಾಗಿ ಪ್ರಾರ್ಥಿಸಿದ್ದಾರೆ, ಅವರೆಲ್ಲರಿಗೂ ನಾನು ಋಣಿ: ಕುಮಾರಸ್ವಾಮಿ
Feb 17, 2018 7:11 PM
ನಾನು ಎರಡನೇ ಜನ್ಮ ಎತ್ತಿದ್ದೇನೆ, ಎಲ್ಲರಿಗೂ ಒಂದು ಜನ್ಮ ಆದರೆ ನನಗೆ ಎರಡು ಜನ್ಮ, ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆದರೂ ನಿಮ್ಮ ಮುಂದಿದ್ದೇನೆ, ನಾನು ಬದುಕಿ ಬಂದದಕ್ಕೆ ನಿಮ್ಮ ಪ್ರೀತಿ, ಅಭಿಮಾನಗಳೇ ಕಾರಣ: ಎಚ್ಡಿ ಕುಮಾರಸ್ವಾಮಿ
Feb 17, 2018 7:08 PM
ಮೊದಲ ಬಾರಿಗೆ ಬಿಎಸ್ಪಿಯು ಮತ್ತೊಂದು ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ, ಮಾಯಾವತಿ ಅವರಿಗೆ ಹೃದಯಪೂರ್ವಕ ಅಭಿನಂದನೆ: ಎಚ್ಡಿಕೆ
Feb 17, 2018 7:07 PM
ಕಾರ್ಯಕ್ರಮಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಯಕ್ರರ್ತರಿಗೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ
Feb 17, 2018 7:00 PM
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಷಣ ಆರಂಭ, ಭಾಷಣಕ್ಕೆ ಮುಂಚೆಯೇ ಭಾವುಕರಾದಂತೆ ಕಂಡು ಬರುತ್ತಿರುವ ಕುಮಾರಸ್ವಾಮಿ
Feb 17, 2018 6:59 PM
ವಿಕಾಸ ಪರ್ವ ಒಂದು ಐತಿಹಾಸಿಕ ಕಾರ್ಯಕ್ರಮ, ಇಂತಹಾ ಕಾರ್ಯಕ್ರಮ ಹಿಂದೆ ಆಗಿರಲೇ ಇಲ್ಲ ಎಂದ ದೇವೇಗೌಡ ಅವರು ಕಾರ್ಯಕ್ರಮ ದುಡಿದವರಿಗೆ ಹಾಗೂ ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಕೈ ಮುಗಿದು ಮಾತುಮುಗಿಸಿರು
Feb 17, 2018 6:57 PM
ಇಡೀ ರಾಜ್ಯದಲ್ಲಿ ಕುಮಾರಸ್ವಾಮಿ ಅಭಿಮಾನಿಗಳಿದ್ದಾರೆ, ಅವರ ಆ ಶಕ್ತಿಯನ್ನು ಕಾರ್ಯಕರ್ತರು ಬಳಸಿಕೊಳ್ಳಬೇಕು, ಎಲ್ಲಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಚಿತ್ರ ಇರಲೇಬೇಕು, ನನ್ನ ಫೊಟೊ ಇರದಿದ್ದರೂ ಸರಿ, ಕುಮಾರಸ್ವಾಮಿ ಪೊಟೊ ಇರಲೇಬೇಕು: ದೇವೇಗೌಡ
Feb 17, 2018 6:55 PM
ಚುನಾವಣೆ ಮುಗಿಯುವವರೆಗೆ ವಿಶ್ರಮಿಸುವುದಿಲ್ಲ, ರಾಜ್ಯದ ಸಂಪೂರ್ಣ ಪ್ರವಾಸ ಮಾಡುತ್ತೇನೆ: ದೇವೇಗೌಡ
Feb 17, 2018 6:54 PM
ಜೆಡಿಎಸ್ ಪಕ್ಷವನ್ನು ನಾಶ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದ ದೇವೇಗೌಡ, ಕಾರ್ಯಕರ್ತರಿಂದ ಭಾರಿ ಕರತಾಡನ
Feb 17, 2018 6:53 PM
ಈದ್ಗಾ ಮೈದಾನದ ಗಲಾಟೆ ಬಗೆಹರಿಸಿದೆ, ಈಗ ಎಲ್ಲಾದರೂ ಆ ವಿಷಯ ಮತ್ತೆ ಪ್ರಸ್ತಾಪ ಆಗುತ್ತಿದೆಯಾ, ಆದರೆ ಈ ರಾಷ್ಟ್ರೀಯ ಪಕ್ಷಗಳು ಕರಾವಳಿಯಲ್ಲಿ ಬೆಂಕಿ ಹಚ್ಚಿವೆ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುತ್ತಿವೆ: ದೇವೇಗೌಡ
Feb 17, 2018 6:52 PM
ಬಡವರ ಬಗ್ಗೆ ಮಾತನಾಡುವ ಈ ಸರ್ಕಾರ ಬಡವರಿಗೆ ಏನನ್ನೂ ಮಾಡಿಲ್ಲ, ಉ.ಕರ್ನಾಟಕದ ರೈತ ಸಂಪೂರ್ಣ ನೊಂದಿದ್ದಾನೆ: ದೇವೇಗೌಡ
Feb 17, 2018 6:52 PM
ಫೆಬ್ರವರಿ 20ರಂದು ಸುದ್ದಿಗೋಷ್ಠಿ ಕರೆದು ಕಾವೇರಿ ವಿವಾದ, ನ್ಯಾಯಾಧಿಕರಣ ತೀರ್ಪು ಮತ್ತಿತರ ವಿಷಯವನ್ನು ತೆರೆದಿಡುತ್ತೇನೆ: ದೇವೇಗೌಡ
Feb 17, 2018 6:51 PM
ಕುರುಡರು ಆನೆಯನ್ನು ವರ್ಣನೆ ಮಾಡಿದಂತೆ, ಸುಪ್ರಿಂ ಕೋರ್ಟ್ನ ತೀರ್ಪನ್ನು ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ಅದರ ಸಂಪೂರ್ಣ ವಿವರ ನಾನು ಕೊಡುತ್ತೇನೆ: ದೇವೇಗೌಡ
Feb 17, 2018 6:48 PM
2007 ರಲ್ಲಿ ಕಾವೇರಿ ತೀರ್ಪು ಬಂದಿದ್ದಾಗ ಅವರು ಮುಖ್ಯಮಂತ್ರಿ ಆಗಿದ್ದರು, ಅವರೇ ಆಗ ಸುಪ್ರಿಂಗೆ ಮೇಲ್ಮನವಿ ಸಲ್ಲಿಸಿದ್ದರು, ಕಾಂಗ್ರೆಸ್ ಇದಕ್ಕೆ ಸಹಕಾರ ಕೊಟ್ಟಿರಲಿಲ್ಲ: ದೇವೇಗೌಡ
Feb 17, 2018 6:45 PM
ಬಹುಜನ ಸಮಾಜವಾದಿ ಪಕ್ಷ ಜೆಡಿಎಸ್ ಜೊತೆ ಸೇರಿರುವುದು ಜೆಡಿಎಸ್ಗೆ ಆನೆ ಬಲ ಬಂದಿದೆ: ದೇವೇಗೌಡ
Feb 17, 2018 6:45 PM
ಬಿಎಸ್ಪಿ ಕೇವಲ ದಲಿತರಗಾಗಿ ಅಲ್ಲ, ಬಡವರ, ತುಳಿತಕ್ಕೊಳಗಾಗಿರುವವರ ಪರ ಇರುವ ಪಕ್ಷ ಅದು, ಅಂಬೇಡ್ಕರ್ ಅವರ ಆಶಯವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಆ ಪಕ್ಷ ಕಾರ್ಯ ಮಾಡುತ್ತಿದೆ: ದೇವೇಗೌಡ
Feb 17, 2018 6:43 PM
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಭಾಷಣ ಆರಂಭ. ಬಿಎಸ್ಪಿ, ಜೆಡಿಎಸ್ ಮೈತ್ರಿ ಬಹಳಾ ವಿಶೇಷವಾದ ಸಂದರ್ಭ ಎಂದ ದೇವೇಗೌಡ
Feb 17, 2018 6:36 PM
ಜೆಡಿಎಸ್, ಬಿಎಸ್ಪಿ ಮೈತ್ರಿಗೆ ಜಯವಾಗಲಿ ಎಂದು ಭಾಷಣ ಮುಗಿಸಿದ ಮಾಯಾವತಿ. ದೇವೇಗೌಡ, ಮಾಯಾವತಿ, ಕುಮಾರಸ್ವಾಮಿ ಅವರು ಒಟ್ಟಾಗಿ ವೇದಿಕೆ ಮೇಲೆ ನಿಂತು ಜನರತ್ತ ಕೈಬೀಸಿ ಕೈಬೀಸಿ ಮೈತ್ರಿಯನ್ನು ಸೂಚ್ಯಗೊಳಿಸಿದರು
Feb 17, 2018 6:34 PM
ಜೆಡಿಎಸ್ ಮತ್ತು ಬಿಎಸ್ಪಿಯ ಮೈತ್ರಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವಂತೆ ಮಾಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಿ ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡಿ : ಮಾಯಾವತಿ
Feb 17, 2018 6:30 PM
ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಟ್ಟ ನಿರ್ಧಾರಗಳಿಂದ ರಾಜ್ಯದ ಅಭಿವೃದ್ಧಿ ಆಗಿಲ್ಲ, ಹಾಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ತಡೆಯಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆ: ಮಾಯಾವತಿ
Feb 17, 2018 6:29 PM
ಪ್ರಧಾನಿ ಮೋದಿ ಅವರ ಸರ್ಕಾರದಿಂದ ಬಡವರ ಮನೆಗೆ ಒಂದು ರೂಪಾಯಿ ಹಣವಾದರೂ ಬಂದಿದೆಯಾ?: ಮಾಯಾವತಿ
Feb 17, 2018 6:27 PM
ಈಗಿನ ಕೇಂದ್ರದ ಬಿಜೆಪಿ ಸರ್ಕಾರದ ಮೇಲೂ ವಾಗ್ದಾಳಿ ನಡೆಸಿದ ಮಾಯಾದೇವಿ, ಅಪನಗದೀಕರಣ, ಜಿಎಸ್ಟಿಯನ್ನು ತೆಗಳಿದ ಅವರು, ಉದ್ಯೋಗ ಕೊಡಿ ಎಂದರೆ ಮೋದಿ ಅವರು ಪಕೋಡಿ ಮಾರಿ ಎನ್ನುತ್ತಾರೆ ಎಂದರು
Feb 17, 2018 6:25 PM
ಬಿಎಸ್ಪಿ ಸಂಸ್ಥಾಪಕ ಕಾಂಷಿರಾಂ ಅವರು ತೀರಿಕೊಂಡಾಗ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ, ರಾಷ್ಟ್ರ ಶೋಕ ಕೂಡ ಘೋಷಣೆ ಮಾಡಿರಲಿಲ್ಲ, ಕಾಂಗ್ರೆಸ್ ಸದಾ ದಲಿತ ವಿರೋಧಿಯಾಗಿ ನಡೆದುಕೊಂಡಿದೆ: ಮಾಯಾವತಿ
Feb 17, 2018 6:19 PM
ಕಾಂಗ್ರೆಸ್ ಪಕ್ಷವು ಕುತಂತ್ರದಿಂದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಅಷ್ಟೆ ಅಲ್ಲ ಅವರು ಅಂಬೇಡ್ಕರ್ ಅವರಿಗೆ ಭಾರತರತ್ನ ಗೌರವನ್ನೂ ನೀಡದೆ ಅವಮಾನ ಮಾಡಿತ್ತು: ಮಾಯಾವತಿ
Feb 17, 2018 6:18 PM
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಜಾತಿವಾದಿ ಮನಸ್ಥಿತಿಯಿಂದ ಹೊರಬರುವವರೆಗೆ ಅವರ ವಿರುದ್ಧ ನಮ್ಮ ಹೊರಾಟ ನಿಲ್ಲದು, ಆ ಪಕ್ಷಗಳಿಂದ ಅಂಬೇಡ್ಕರ್ ಅವರಿಗೆ ಸರಿಯಾದ ಗೌರವ ಸಿಕ್ಕಿಲ್ಲ, ಈಗಲೂ ಸಿಗುತ್ತಿಲ್ಲ: ಮಾಯಾವತಿ
Feb 17, 2018 6:16 PM
ದಲಿತರು, ಮುಸ್ಲಿಂರು, ರೈತರು, ಕಾರ್ಮಿಕರ ಕಲ್ಯಾಣ ಆಗಬೇಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ- ಮಾಯಾವತಿ
Feb 17, 2018 6:14 PM
ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಭಾಷಣ ಪ್ರಾರಂಭ, ಹಿಂದಿಯಲ್ಲಿ ಭಾಷಣ ಆರಂಭಿಸಿದ ಮಾಯಾವತಿ
JDS party organized massive 'Vikasa Parva' rally in Yelhanka today. BSP Mayavathi is participating in the rally. JDS announced its alliance with BSP and NCP recently.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more