ಜಯಾ ಕೇಸ್ : ಇದೇ ವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ
ಬೆಂಗಳೂರು, ಜೂ. 01 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ವಾರದಲ್ಲಿಯೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರ
ನೇತೃತ್ವದಲ್ಲಿ
ವಿಧಾನಸೌಧದಲ್ಲಿ
ಸೋಮವಾರ
ನಡೆದ
ಸಚಿವ
ಸಂಪುಟ
ಸಭೆಯಲ್ಲಿ
ಮೇಲ್ಮನವಿ
ಸಲ್ಲಿಸುವ
ಕುರಿತು
ಅಂತಿಮ
ತೀರ್ಮಾನ
ಕೈಗೊಳ್ಳಲಾಗಿದೆ.
ಮೇಲ್ಮನವಿಯ
ಕರಡು
ಪ್ರತಿಯನ್ನು
ತಯಾರಿಸುವಂತೆ
ಕಾನೂನು
ಇಲಾಖೆಗೆ
ಸೂಚನೆ
ನೀಡಿಲಾಗಿದೆ.
[ಜಯಾ
ಕೇಸ್
:
ಮೇಲ್ಮನವಿ
ಸಲ್ಲಿಸಲಿದೆ
ಸರ್ಕಾರ]
ಕರ್ನಾಟಕ ಸರ್ಕಾರ ಸಲ್ಲಿಸುವ ಮೇಲ್ಮನವಿಯಲ್ಲಿ ಕರ್ನಾಟಕ ಹೈಕೋರ್ಟ್ ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿರುವ ತಪ್ಪಿನ ಅಂಶಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ತೀರ್ಪಿನಲ್ಲಿ ನೀಡಲಾದ ಸಾಲದ ಲೆಕ್ಕದಲ್ಲಿ ತಪ್ಪಿರುವುದನ್ನು ಎಸ್ಪಿಪಿ ಬಿ.ವಿ.ಆಚಾರ್ಯ ಪತ್ತೆ ಹಚ್ಚಿದ್ದರು. [ಜಯಲಲಿತಾ ಪ್ರಕರಣ Timeline]
ಕಾನೂನು ತೊಡಕಿಲ್ಲ : ಜಯಲಲಿತಾ ಪ್ರಕರಣದ ತೀರ್ಪು ಹೊರಬಂದ ಬಳಿಕ ಮೇಲ್ಮನವಿ ಸಲ್ಲಿಸಲು ಕಾನೂನು ತೊಡಕಿದೆಯೇ? ಎಂಬ ಬಗ್ಗೆ ಚರ್ಚೆ ನಡೆದಿತ್ತು. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮೇಲ್ಮನವಿ ಸಲ್ಲಿಸಲು ವಿಶೇಶ ಅನುಮತಿಯ ಅಗತ್ಯವಿದೆಯೇ? ಎಂದು ಕಾನೂನು ತಜ್ಞರ ಬಳಿ ಅಭಿಪ್ರಾಯ ಕೇಳಲಾಗಿತ್ತು. ಆದರೆ, ಯಾವುದೇ ತೊಡಕಿಲ್ಲ ಎಂದು ತಿಳಿದುಬಂದಿದೆ. [ಸುಪ್ರೀಂಗೆ ಹೋಗಲು ಸರ್ಕಾರಕ್ಕೆ ಆಚಾರ್ಯ ಶಿಫಾರಸು]
ಆಚಾರ್ಯ ಅವರೇ ಎಸ್ಪಿಸಿ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಿದರೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲು ಸರ್ಕಾರ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯಬೇಕೆ? ಎಂದು ಕಾನೂನು ತಜ್ಞರ ಸಲಹೆ ಕೇಳಲಾಗಿತ್ತು.
ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದು, ಎಸ್ಪಿಸಿ ನೇಮಕಕ್ಕೆ ಮುಖ್ಯನ್ಯಾಯಮೂರ್ತಿಗಳ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಸುಪ್ರೀಂಕೋರ್ಟ್ನಲ್ಲಿಯೂ ಕರ್ನಾಟಕ ಸರ್ಕಾರದ ಪರವಾಗಿ ಬಿ.ವಿ.ಆಚಾರ್ಯ ಅವರು ವಾದ ಮಂಡನೆ ಮಾಡುವ ಸಾಧ್ಯತೆ ಇದೆ.