ಮೈತ್ರಿ ಸರ್ಕಾರ ಉರುಳಿಸಲು ಜನಾರ್ದನ ರೆಡ್ಡಿ ಬಂಡವಾಳ?
ಬೆಂಗಳೂರು, ಸೆಪ್ಟೆಂಬರ್ 13: ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಸಿಎಂ, ಶ್ರೀರಾಮುಲು ಉಪಮುಖ್ಯಮಂತ್ರಿ ಮಾಡಲು ಗಣಿ ದೊರೆ ಜನಾರ್ದನ ರೆಡ್ಡಿ ಅವರೇ ಬೆನ್ನೆಲುಬಾಗಿ ನಿಂತಿದ್ದು, ಮೈತ್ರಿ ಸರ್ಕಾರ ಉರುಳಿಸಲು ಅವರೇ ಬಂಡವಾಳ ಹೂಡಿದ್ದಾರೆ! ಎನ್ನಲಾಗಿದೆ.
ತಮ್ಮ ಪ್ರಿಯ ಶಿಷ್ಯ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಜನಾರ್ದನ ರೆಡ್ಡಿ ಅವರು, ಯಡಿಯೂರಪ್ಪ ಅವರ ಹಿಂದೆ ನಿಂತು ಮೈತ್ರಿ ಸರ್ಕಾರ ಉರುಳಿಸು ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದಿವೆ.
ಮೈತ್ರಿ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಮಾಡುತ್ತಿರುವ ಯತ್ನಗಳ ಹಿಂದೆ ಜನಾರ್ದನ ರೆಡ್ಡಿ ಅವರು ಇದ್ದಾರೆ ಎಂಬ ಗುಮಾನಿ ದಟ್ಟವಾಗಿ ಎದ್ದಿದೆ. ಯಡಿಯೂರಪ್ಪ ಅವರನ್ನು ಹಿಂದೆ ನಿಂತು ಮುನ್ನಡೆಸುತ್ತಿರುವುದೇ ಜನಾರ್ದನ ರೆಡ್ಡಿ ಎಂಬ ಮಾತುಗಳು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಯಡಿಯೂರಪ್ಪ ನೀಡಿದ್ದರು ಬೆಂಬಲ
ಯಡಿಯೂರಪ್ಪ ಅವರು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಜನಾರ್ಧನ ರೆಡ್ಡಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಮರಳಿ ತರಲು ಪ್ರಯತ್ನ ಮಾಡಿದ್ದರು. ರಾಮುಲು ಅವರಂತೂ ಜನಾರ್ಧನ ರೆಡ್ಡಿ ಅವರನ್ನು ವಿಧಾನಸೌಧದಲ್ಲಿ ಮತ್ತೆ ಕೂರಿಸಲು ಇನ್ನಿಲ್ಲದ ಯತ್ನ ಮಾಡುತ್ತಿದ್ದಾರೆ. ಸ್ವತಃ ರಾಜಕಾರಣಕ್ಕೆ ಮರಳುವ ಯತ್ನದಲ್ಲಿರುವ ರೆಡ್ಡಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಶಕ್ತಿಯುತ ಸ್ಥಾನದಲ್ಲಿ ಕೂರಿಸಲು ತೆರೆಹಿಂದೆ ನಿಂತು ಯತ್ನ ನಡೆಸುತ್ತಿದ್ದಾರೆ.

ಉ.ಕರ್ನಾಟಕ ಶಾಸಕರ ಮೇಲೆ ಪ್ರಭಾವ
ಶಾಸಕರ ಖರೀದಿ, ಉತ್ತರ ಕರ್ನಾಟಕ ಭಾಗದ ಶಾಸಕರ ಮೇಲೆ ಪ್ರಭಾವ ಇನ್ನುಳಿದ ಹಲವು ವಿಷಯಗಳಲ್ಲಿ ಜನಾರ್ಧನ ರೆಡ್ಡಿ ಅವರು ರಾಮುಲು ಹಾಗೂ ಯಡಿಯೂರಪ್ಪ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆ ಸಮಯದಲ್ಲಿ ಸಹ ತೆರೆಮರೆಯಲ್ಲಿದ್ದುಕೊಂಡೆ ಬಳ್ಳಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ರೆಡ್ಡಿ ಅವರ ಪ್ರಭಾವ ಕಾರಣವಾಗಿತ್ತು.

ಶಾಸಕರ ಖರೀದಿಗೆ ಹಣಕಾಸಿನ ನೆರವು?
ಶಾಸಕರ ಖರೀದಿಗೆ ಹಣಕಾಸಿನ ನೆರವನ್ನೂ ಜನಾರ್ಧನ ರೆಡ್ಡಿ ನೀಡುತ್ತಿದ್ದಾರೆ. ಎಂಬ ಗುಲ್ಲು ಹಬ್ಬಿದ್ದು, ರಾಜ್ಯ ರಾಜಕಾರಣ ರಾಜಕೀಯಕ್ಕೆ ಮರಳಿ ಬರಲು ಜನಾರ್ಧನ ರೆಡ್ಡಿ ಬಹಳ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲಕ್ಕೆ ರೆಡ್ಡಿ ಸಾಥ್
ಕಳೆದ ಬಾರಿ ಬಿಜೆಪಿ ಆಪರೇಷನ್ ಕಮಲ ಹೆಸರಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆದಾಗಲೂ ಸಹ ಇದೇ ಜನಾರ್ಧನ ರೆಡ್ಡಿ ಅವರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಬಿಜೆಪಿಯ ಬಹುತೇಕ ರಾಜಕೀಯ ಸಾಹಸಗಳಿಗೆ ರೆಡ್ಡಿ ಸಯೋದರರು ಬೆನ್ನೆಲುಬಾಗಿ ನಿಂತಿದ್ದರು. ಆದರೆ ಸಿಬಿಐ ದಾಳಿ ಬಳಿಕ ಜನಾರ್ಧನ ರೆಡ್ಡಿ ಅವರನ್ನು ರಾಜಕೀಯದಿಂದ ದೂರ ಇಡಲಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications