Get Updates
Get notified of breaking news, exclusive insights, and must-see stories!

ಮತ್ತೆ ಪರಿಷತ್ ಕಲಾಪ ಕರೆದಿರುವುದೇ ಕಾನೂನು ಬಾಹಿರ: ಸಿ.ಎಂ. ಇಬ್ರಾಹಿಂ

ಬೆಂಗಳೂರು, ಡಿ. 14: ಸರ್ಕಾರದ ಸೂಚನೆಯೆ ಮೇರೆಗೆ ನಾಳೆ (ಡಿ.15) ಮತ್ತೆ ವಿಧಾನ ಪರಿಷತ್ ಕಲಾಪ ಸಮಾವೇಶ ಗೊಳ್ಳಲಿದೆ. ಪ್ರಮುಖವಾಗಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚಿಸಲು ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನ ಪರಿಷತ್ ಕಲಾಪ ಆರಂಭವಾಗಲಿದೆ.

Recommended Video

      ಬೆಂಗಳೂರು: ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ಮೇಲ್ಮನೆ-ಅಕ್ಷರಶಃ ರಣಾಂಗಣವಾಗಿತ್ತು ವಿಧಾನಪರಿಷತ್ | Oneindia Kannada

      ಈ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು, ನಾಳೆ ಕರೆದಿರುವ ಪರಿಷತ್ ಕಲಾಪವನ್ನು ಕರೆದಿರುವುದೇ ಕಾನೂನು ಬಾಹಿರ ಎಂದಿದ್ದಾರೆ. ಸಂಪುಟದಲ್ಲಿ ನಿರ್ಣಯಿಸಿ ಅದನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ಅದರ ಮೇಲೆ ರಾಜ್ಯಪಾಲರು ಸದನ ಕರೆಯಬೇಕು. ಕಳೆದ 70 ವರ್ಷಗಳ ಇತಿಹಾಸದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಅವರಿಂದ ಪತ್ರ ಬರೆಯಿಸಿ ನಮ್ಮನ್ನು (ಪರಿಷತ್‌ ಸದಸ್ಯರನ್ನು) ಸದನಕ್ಕೆ ಕರೆದಿರುವುದೇ ಕಾನೂನು ಬಾಹಿರ. ಅದು ಒಪ್ಪುವಂಥದ್ದು ಅಲ್ಲ. ನಾಳೆ ಈ ಬಗ್ಗೆ ಒಂದು ತೀರ್ಮಾನವನ್ನು ನಾವು ಕೈಗೊಳ್ಳುತ್ತೇನೆ ಎಂದರು.

      It is illegal for the Legislative council to convene tomorrow CM Ibrahim

      ಇನ್ನು ಗೋ ಹತ್ಯೆ ವಿಧೇಯಕದ ಬಗ್ಗೆ ಮಾತನಾಡಿದ ಇಬ್ರಾಹಿಂ ಅವರು, ಗೋ ಹತ್ಯೆ ಮಾಡುವುದು ಬೇಡ ಅಂತಾ ನಾನೇ ಮುಸ್ಲಿಮರಿಗೆ ಹೇಳುತ್ತೇನೆ. ಆದರೆ ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ ಅದನ್ನು ಸಾಕುವವರು ಯಾರು? ಜರ್ಸಿ ಹಸು ಗಂಡು ಕರುವನ್ನು ಹಾಕಿದರೆ ಅದನ್ನು 13 ವರ್ಷ ಸಾಕುವವರು ಯಾರು? ಹೀಗಾಗಿ ಈ ವಿಧೇಯಕದ ಬಗ್ಗೆ ರೈತ ಸಂಘದವರೊಂದಿಗೆ ಕುಳಿತು ಸಿಎಂ ಯಡಿಯೂರಪ್ಪ ಅವರು ಮಾತನಾಡಲಿ ಎಂದು ಒತ್ತಾಯಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+