ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?
ಬೆಂಗಳೂರು, ಮೇ 28: ಖಡಕ್ ಅಧಿಕಾರಿ, 'ಸಿಂಗಂ' ಎಂದೇ ಖ್ಯಾತರಾದ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.
ತಮ್ಮನ್ನು ಪ್ರೀತಿಸಿದ, ಮೆಚ್ಚಿದ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ರಾಜೀನಾಮೆಯ ಉದ್ದೇಶ, ಮುಂದಿನ ನಡೆಯ ಬಗ್ಗೆ ಸಹ ವಿವರಿಸಿದ್ದಾರೆ.
'ನನ್ನ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳಿಗೆ
ನಿಮ್ಮೆಲ್ಲರಿಗೂ ಶುಭಾಶಯಗಳು. ನನ್ನ ರಾಜೀನಾಮೆ ಕುರಿತಾದ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಈ ಪತ್ರ ಬರೆಯುತ್ತಿದ್ದೇನೆ. ಇಂದು ಮೇ 28, 2019ರಂದು ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಕಚೇರಿ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕೆಲವು ಸಮಯ ಬೇಕಾಗಬಹುದು. ಸುತ್ತಮುತ್ತಲೂ ಹರಡಿರುವ ಎಲ್ಲ ಊಹಾಪೋಹಗಳಿಗೆ ನೇರವಾಗಿ ಉತ್ತರ ನೀಡಲು ಬಯಸಿದ್ದೇನೆ ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ.
ಆರು ತಿಂಗಳ ಸುದೀರ್ಘ ಚಿಂತನೆಯ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಸೇವೆಯಲ್ಲಿ 9 ವರ್ಷ ಕಳೆದಿದ್ದು, ನನ್ನ ಖಾಕಿ ಬದುಕಿನ ಪ್ರತಿ ಗಳಿಕೆಯಲ್ಲಿಯೂ ಜೀವಿಸಿದ್ದೇನೆ. ನನ್ನ ಎಲ್ಲ ಸಹೋದ್ಯೋಗಿಗಳ ಜತೆಗೆ ಕಳೆದ ಖಾಕಿಯ ಹೆಮ್ಮೆಯ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೊಲೀಸರ ಕೆಲಸ ದೇವರಿಗೆ ಸಮೀಪವಾದುದು ಎನ್ನುವುದು ನನ್ನ ನಂಬಿಕೆ. ಕೆಲವು ಮಿತಿಗಳ ನಡುವೆ ಇದು ಅತ್ಯಂತ ಒತ್ತಡ ಕೆಲಸ ಎನ್ನುವುದು ನಿಜ. ನನ್ನ ಜೀವನದ ಅಗತ್ಯ ಸಂದರ್ಭಗಳಲ್ಲಿ ನನ್ನೊಂದಿಗೆ ನಿಂತ ಜನರ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಇದಕ್ಕಾಗಿ ತುಸು ಬೇಸರವಾಗಿದ್ದಿದೆ. ಅನೇಕ ವೇಳೆ ನಾನು ಬಯಸಿದಾಗ ಅದನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಅವರು ಹೇಳಿದ್ದಾರೆ.
ತಮ್ಮ ರಾಜೀನಾಮೆ ಕುರಿತಂತೆ ಅಣ್ಣಾಮಲೈ ಬರೆದಿರುವ ಸುದೀರ್ಘ ಹಾಗೂ ಭಾವನಾತ್ಮಕ ಪತ್ರದ ಮುಂದುವರಿದ ಭಾಗದ ಸಾರಾಂಶ ಇಲ್ಲಿದೆ.

ಕಣ್ಣು ತೆರೆಸಿದ ಕೈಲಾಶ ಸರೋವರ
ಕಳೆದ ವರ್ಷ ಕೈಲಾಶ ಸರೋವರಕ್ಕೆ ನಾನು ನೀಡಿದ ಭೇಟಿ ನನ್ನ ಜೀವನದ ಆದ್ಯತೆಗಳನ್ನು ಉತ್ತಮಗೊಳಿಸಲು ನೆರವಾಗುವಂತೆ ಕಣ್ಣು ತೆರೆಸಿತು. ಮಧುಕರ್ ಶೆಟ್ಟಿ ಅವರ ಸಾವು ನನ್ನದೇ ಬದುಕನ್ನು ಮರು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು. ಎಲ್ಲ ಒಳ್ಳೆಯ ಸಂಗತಿಗಳೂ ಕೊನೆಗೊಳ್ಳಲೇಬೇಕು. ಹೀಗಾಗಿ ಖಾಕಿಯಲ್ಲಿ ನನ್ನ ದಿನಗಳು ಮುಗಿಯಿತು ಎಂದು ನಾನು ನಿರ್ಧರಿಸಿದ್ದೇನೆ.

ಮೊದಲೇ ರಾಜೀನಾಮೆಗೆ ನಿರ್ಧರಿಸಿದ್ದೆ
ಲೋಕಸಭೆ ಚುನಾವಣೆಗೆ ಮುನ್ನವೇ ನಾನು ಈ ಹುದ್ದೆಯನ್ನು ತ್ಯಜಿಸಲು ಬಯಸಿದ್ದೆ. ಆದರೆ, ಚುನಾವಣೆಗೆ ಸ್ವಲ್ಪ ದಿನ ಇರುವಾಗಲೇ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಅನನುಕೂಲ ಉಂಟುಮಾಡಲು ನಾನು ಬಯಸಿರಲಿಲ್ಲ. ನನ್ನ ರಾಜೀನಾಮೆ ನಿಮಗೆ ಒಂದು ವೇಳೆ ನೋವನ್ನುಂಟು ಮಾಡಿದ್ದರೆ ಅದಕ್ಕಾಗಿ ನನ್ನ ಕಳಕಳಿಯ ಕ್ಷಮೆ ಕೋರುತ್ತೇನೆ. ನಾನು ಇದನ್ನು ಈಗಲೇ ಮಾಡಬೇಕು ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ. ನನಗೆ ಇದು ಭಾವುಕತೆಯ ಸಮಯ. ಅದನ್ನು ಸಮಾಧಾನಗೊಳಿಸುವಲ್ಲಿ ನನ್ನ ಅತ್ಯುತ್ತಮ ಗೆಳತಿಯಾದ ನನ್ನ ಪತ್ನಿ ಸಹಾಯ ಮಾಡಿದ್ದಾರೆ.

ನಾನು ತೀರಾ ಚಿಕ್ಕ ಮನುಷ್ಯ
ರಾಜೀನಾಮೆ ಬಳಿಕ ನನ್ನ ನಡೆ ಮುಂದೆ ಏನು ಎಂಬ ಬಗ್ಗೆ ಊಹಿಸುತ್ತಿರುವ ಜನರಿಗೆ, ಭಾರಿ ಮಹತ್ವಾಕಾಂಕ್ಷೆಗಳನ್ನು ಹೊಂದಲು ನಾನು ತೀರಾ ಚಿಕ್ಕ ಮನುಷ್ಯ. ನಾನು ಸದ್ಯ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ ಮತ್ತು ಜೀವನದಲ್ಲಿ ಕಳೆದುಕೊಂಡಿದ್ದ ಆ ಚಿಕ್ಕ ಪುಟ್ಟ ಸಂಗತಿಗಳನ್ನು ಅನುಭವಿಸಲು ಉದ್ದೇಶಿಸಿದ್ದೇನೆ. ತನ್ನ ವೇಗದ ಬೆಳವಣಿಗೆಗೆ ನನ್ನ ಪ್ರತಿ ಸಮಯವನ್ನೂ ಪಡೆಯಲು ಅರ್ಹನಾಗಿರುವ ನನ್ನ ಮಗನಿಗೆ ಒಳ್ಳೆಯ ತಂದೆಯಾಗಿರಲು ಬಯಸಿದ್ದೇನೆ.

ಕುರಿಗಳು ಮಾತು ಕೇಳುತ್ತವೆಯೇ...
ಕೃಷಿ ಬದುಕಿನ ಮನೆಗೆ ಮರಳುತ್ತಿದ್ದೇನೆ. ನಾನೀನ ಪೊಲೀಸ್ ಅಲ್ಲದೆ ಇರುವುದರಿಂದ ನನ್ನ ಕುರಿಗಳು ಈಗಲೂ ನನ್ನ ಮಾತು ಕೇಳುತ್ತವೆಯೋ ಎಂಬುದನ್ನು ನೋಡಬೇಕಿದೆ. ಅಳಿದು ಹೋಗುವ ನನ್ನಂತಹವರಿಗೆ ಅವಕಾಶಗಳನ್ನು ಒದಗಿಸುವ ಬಗ್ಗೆ ಮಾತನಾಡುವಾಗ ನನಗೆ ಜೀವನವೇ ಬಹು ದೊಡ್ಡ ಅವಕಾಶವಾಗಿದೆ.

ಮಿಸ್ ಮಾಡಿಕೊಳ್ಳುತ್ತಿದ್ದೇನೆ
ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ನ್ಯಾಯದ ಹಾದಿಯಲ್ಲಿ ನನ್ನ ಜತೆ ನಡೆದ ಎಲ್ಲ ಅದ್ಭುತ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮಲ್ಲಿನ ಅನೇಕರು ನನ್ನಲ್ಲಿನ ಅಪರಿಪೂರ್ಣತೆಯನ್ನು ಸರಿಪಡಿಸಿ ಸ್ವೀಕಾರಾರ್ಹ ಆವೃತ್ತಿಯನ್ನಾಗಿ ಪರಿವರ್ತಿಸಿದ್ದೀರಿ. ನನಗೆ ಪ್ರತಿಯೊಂದನ್ನೂ ಕಲಿಸಿಕೊಟ್ಟ ನನ್ನ ಹಿರಿಯ ನಾಯಕರ ಮಾರ್ಗದರ್ಶನವನ್ನು ಮತ್ತು ನನಗಿಂತಲೂ ಹೆಚ್ಚು ಚಾಣಾಕ್ಷರು ಹಾಗೂ ತತ್ವಗಳನ್ನು ಹೊಂದಿದ ನನ್ನ ಕಿರಿಯ ಸಹೋದ್ಯೋಗಿಗಳ ಒಡನಾಟವನ್ನು ಕಳೆದುಕೊಳ್ಳುತ್ತಿದ್ದೇನೆ.
ನನ್ನ ಎಲ್ಲ ಕಾನ್ಸ್ಟೆಬಲ್ಗಳು ಮತ್ತು ಇತರೆ ಕಿರಿಯ ಶ್ರೇಣಿಯ ಸಿಬ್ಬಂದಿಯನ್ನು ಮಿಸ್ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಅವರಿಗಾಗಿ ಜೀವಿಸಿದ್ದೆ. ಅವರು ಹೆಚ್ಚು ಯೋಗ್ಯವಾದ ರೀತಿಯಲ್ಲಿ ಉತ್ತಮ ಬದುಕು ನಡೆಸುವಂತೆ ಮಾಡಲು ಪ್ರಯತ್ನಿಸಿದ್ದೆ.

ನಾನೊಬ್ಬ ಕೇವಲ ಮನುಷ್ಯ
ಗೌರವ ಮತ್ತು ಹೆಮ್ಮೆಯಿಂದ ನಿಮ್ಮೆಲ್ಲರ ಸೇವೆ ಸಲ್ಲಿಸಿದ್ದೇನೆ ಎಂಬ ಭರವಸೆ ಇದೆ. ನಿಮ್ಮಲ್ಲಿ ಯಾರಿಗೇ ಆದರೂ, ಯಾವುದೇ ಕ್ಷಣದಲ್ಲಿ ನೋವನ್ನುಂಟು ಮಾಡಿದ್ದರೆ, ನಾನೊಬ್ಬ ಕೇವಲ ಮನುಷ್ಯನಾಗಿರುವುದರಿಂದ ಕ್ಷಮೆ ಕೋರುತ್ತೇನೆ.
ನಿಮ್ಮೆಲ್ಲರನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಮುಖ್ಯವಾಗಿ ನಿಮ್ಮ ಪ್ರೀತಿಯನ್ನು. ಅದಂತೂ ಖಚಿತ.
ಅಪಾರ ಪ್ರೀತಿಯಿಂದ,
ಎಂದು ಅಣ್ಣಾಮಲೈ ಸಹಿ ಹಾಕಿದ್ದಾರೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications