ಜಯಾ ಕೇಸ್: ನೂತನ ಎಸ್ಪಿಪಿ ಬಿವಿ ಆಚಾರ್ಯ ಸಂದರ್ಶನ
ಬೆಂಗಳೂರು, ಏ. 29: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ನೇಮಕ ಮಾಡಿದೆ. ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಬಹುದು ಎಂದು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಹಿಂದೊಮ್ಮೆ ಜಯಲಲಿತಾ ಪ್ರಕರಣದಿಂದ ಹೊರಹೋಗಿದ್ದ ಆಚಾರ್ಯ ಅವರಿಗೆ ಮತ್ತೊಮ್ಮೆ ಜವಾಬ್ದಾರಿ ಒಲಿದು ಬಂದಿದೆ. ಅಭಿಯೋಜಕರಾಗಿ ನೇಮಕವಾದ ನಂತರ ಬಿ.ವಿ. ಆಚಾರ್ಯ ಒನ್ಇಂಡಿಯಾದೊಂದಿಗೆ ಮಾತನಾಡಿದ್ದು ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಮುಂದೆ ಪ್ರಕರಣ ಯಾವ ಹಂತದಲ್ಲಿ ಸಾಗಲಿದೆ? ಅದರಲ್ಲಿ ಆಚಾರ್ಯ ಪಾತ್ರವೇನು? ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.[ಜಯಲಲಿತಾ ಪ್ರಕರಣ : ಬಿವಿ ಆಚಾರ್ಯ ನೂತನ ಎಸ್ ಪಿಪಿ]

* ಹಿಂದೊಮ್ಮೆ ರಾಜೀನಾಮೆ ನೀಡಿದ್ದವರು ಮತ್ತೆ ಏಕೆ ಪ್ರಕರಣವನ್ನು ಕೈಗೆತ್ತುಕೊಂಡಿರಿ?
ರಾಜ್ಯ ಸರ್ಕಾರ ನನಗೆ ಅಭಿಯೋಜಕರಾಗಿ ಕೆಲಸ ಮಾಡುವಂತೆ ಮತ್ತೊಮ್ಮೆ ಕೇಳಿಕೊಂಡಿತು. ನನಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ತಿಳಿವಳಿಕೆಯಿದ್ದು ಕಡಿಮೆ ಸಮಯದಲ್ಲಿ ಎಲ್ಲ ವಿವರ ಕಲೆಹಾಕಲು ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿದುಕೊಂಡಿರಬೇಕು.
* ಪ್ರಕರಣದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಪ್ರಕರಣದಲ್ಲಿ ನನ್ನ ಪಾತ್ರ ನಿರ್ಬಂಧಿತವಾಗಿದೆ. ಸುಪ್ರೀಂ ಕೋರ್ಟ್ ಹೇಳಿದಂತೆ ಲಿಖಿತ ದಾಖಲೆಗಳನ್ನು ಸಲ್ಲಿಕೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನ್ಯಾಯಾಲಯದ ಆದೇಶದಂತೆ ಮುಂದಿನ ಹೆಜ್ಜೆ ಇಡಲಾಗುವುದು.[ಆಚಾರ್ಯ ಹಿಂದೆಯೂ ಮಾತನಾಡಿದ್ದರು]
* ಹೆಚ್ಚಿನ ಒತ್ತಡದಿಂದ ಹಿಂದೆ ರಾಜೀನಾಮೆ ನೀಡಿದ್ರಾ?
ಮೊದಲೇ ಹೇಳಿದಂತೆ ನನಗೆ ಇಲ್ಲಿ ಯಾವುದೇ ವಿಶೇಷ ಅಧಿಕಾರಗಳಿಲ್ಲ. ಅಂದ ಮೇಲೆ ಒತ್ತಡದ ಮಾತು ಎಲ್ಲಿಂದ ಬಂತು? ನ್ಯಾಯಾಲಯ ಮತ್ತು ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತೇನೆ. ಇದೇ ನನ್ನ ಜವಾಬ್ದಾರಿಯೂ ಆಗಿದೆ.
* ಯಾವಾಗ ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳಬಹುದು?
ಇದರ ಬಗ್ಗೆ ನಾನು ಯಾವ ಹೇಳಿಕೆ ನೀಡಲು ಬಯಸುವುದಿಲ್ಲ. ನ್ಯಾಯಾಲಯ ಪ್ರಕರಣದ ಕುರಿತಾಗಿ ಎಲ್ಲ ವಿಭಾಗಗಳಲ್ಲೂ ವಿಚಾರಣೆ ಮಾಡಿದೆ. ನಿಗದಿಯಂತೆಯಾದರೆ ಮೇ. 12ಕ್ಕೆ ಅಂತಿಮ ತೀರ್ಪು ಘೋಷಣೆಯಾಗಬಹುದು. ಆದರೆ ನ್ಯಾಯಾಲಯಕ್ಕೆ ತಿಂಗಳ ಕಾಲ ರಜೆ ಇದೆ.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
* ನ್ಯಾಯಾಧೀಶರು ಅಂತಿಮ ತೀರ್ಪು ಘೊಷಣೆಗೆ ಹಿಂದೇಟು ಹಾಕಿದರೆ?
ತೀರ್ಮಾನ ಘೋಷಣೆಗೆ ನ್ಯಾಯಾಧೀಶರು ಹಿಂದೇಟು ಹಾಕಿದರೆ, ಈ ಬಗ್ಗೆ ನ್ಯಾಯಾಲಯಕ್ಕೆ ಅವರೊಂದು ಲಿಖಿತ ಮನವಿ ಸಲ್ಲಿಕೆ ಮಾಡಬೇಕಾಗುತ್ತದೆ. ಅಲ್ಲದೇ ಸಮಯಾವಕಾಶ ಕೋರಿಕೆ ಸಲ್ಲಿಕೆ ಮಾಡಬೇಕಾಗುತ್ತದೆ.[ಜಯಾ ಕೇಸ್ ಬಗ್ಗೆ ಭವಾನಿ ಸಿಂಗ್ ಹೇಳಿದ್ದೇನು]
* ಪ್ರಕರಣದಿಂದ ಹೊರಗೆ ನಿಂತು ಏನನ್ನು ಹೇಳುತ್ತೀರಿ?
ಈ ಬಗ್ಗೆ ಏನೂ ಹೇಳಲಾರೆ. ನ್ಯಾಯಾಲಯದ ಸ್ಪಷ್ಟ ತೀರ್ಮಾನ ಹೊರಬರುವ ಮುನ್ನ ಕಮೆಂಟ್ ಮಾಡುವುದು ಸರಿಯಲ್ಲ. ನನ್ನ ಹೊಣೆಗಾರಿಕೆ ನಿಭಾಯಿಸಲು ನಾನು ಬದ್ಧನಾಗಿದ್ದೇನೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications