ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

|
Google Oneindia Kannada News

Recommended Video

ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ | Oneindia kannada

ಬೆಂಗಳೂರು, ಜನವರಿ 26: ಸರ್ಕಾರಕ್ಕೆ ಆಗಾಗ್ಗೆ ಆತಂಕ ತಂದೊಡ್ಡುತ್ತಿರುವ ಅತೃಪ್ತರ ಶಾಸಕರ ಕಾಟದಿಂದ ಪಾರಾಗಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಅತೃಪ್ತರ ಶಾಸಕರ ಮೇಲೆ ನಿಗಾ ವಹಿಸಲು ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಶಾಸಕರಿ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಅಂಗೀಕರಿಸಿದ್ದು, ಸುದ್ದಿ ಸತ್ಯ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಮುಖ್ಯಾಂಶ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಮುಖ್ಯಾಂಶ

ಸರ್ಕಾರದ ಸಂಸ್ಥೆಯನ್ನು ಪಕ್ಷದ ಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹವಾದರೂ ಸಹ ಈ ಮುಂಚೆಯೂ ಹಲವು ಮುಖ್ಯಮಂತ್ರಿಗಳು ಈ ರೀತಿಯಾಗಿ ಗುಪ್ತಚರ ಇಲಾಖೆಯನ್ನು ಅನಧಿಕೃತವಾಗಿ ಬಳಸಿಕೊಂಡಿದ್ದರು.

Intelligence Department will keep an eye on Karnataka dissident MLAs

ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಗುಪ್ತಚರ ಇಲಾಖೆಗೆ ತಿಳಿಸಲಾಗಿದ್ದು, ಅವರ ಓಡಾಟ, ಭೇಟಿ, ಇನ್ನಿತರೆ ಮಾಹಿತಿ ಸಿಎಂ ಅವರನ್ನು ಕಾಲ-ಕಾಲಕ್ಕೆ ತಲುಪಲಿವೆ.

ಶ್ರೀಗಳಿಗೆ ಭಾರತ ರತ್ನವಿಲ್ಲ, ಎಚ್.ಡಿ.ಕುಮಾರಸ್ವಾಮಿ ಟ್ವೀಟ್ಶ್ರೀಗಳಿಗೆ ಭಾರತ ರತ್ನವಿಲ್ಲ, ಎಚ್.ಡಿ.ಕುಮಾರಸ್ವಾಮಿ ಟ್ವೀಟ್

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರುಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರು

ಅತೃಪ್ತರ ನಡೆಗಳ ಬಗ್ಗೆ ಮಾಹಿತಿ

ಅತೃಪ್ತರ ನಡೆಗಳ ಬಗ್ಗೆ ಮಾಹಿತಿ

ಅತೃಪ್ತರ ಶಾಸಕರ ನಡೆಗಳ ಬಗ್ಗೆ ಮಾಹಿತಿ ಪಡೆದು ಅವರಿಂದ ಆಗಬಹುದಾದ ಡ್ಯಾಮೇಜ್ ಅನ್ನು ತಡೆಯಲುನ ಸಿಎಂ ಅವರು ಕಾಂಗ್ರೆಸ್ ಮುಖಂಡರ ಸಲಹೆ ಮೇರೆಗೆ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲ ಭಯದಿಂದ ಮುಕ್ತ

ಆಪರೇಷನ್ ಕಮಲ ಭಯದಿಂದ ಮುಕ್ತ

ಸರ್ಕಾರವು ಆಪರೇಷನ್ ಕಮಲದ ಭಯದಿಂದ ಮುಕ್ತವಾಗಿದ್ದು, ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಲು ಮುಂಬೈಗೆ ತೆರಳಿದ್ದ ಶಾಸಕರು ವಾಪಸ್ ಬಂದಿದ್ದು, ಪಕ್ಷ ಬಿಟ್ಟು ಹೋಗುವುದಿಲ್ಲವೆಂದು ಕೆಪಿಸಿಸಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಸರ್ಕಾರವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.

ಅತೃಪ್ತ ಶಾಸಕರ ಮೇಲೆ ನಿಗಾ

ಅತೃಪ್ತ ಶಾಸಕರ ಮೇಲೆ ನಿಗಾ

ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಅತೃಪ್ತ ಶಾಸಕರ ಮೇಲೆ ನಿಗಾ ಇಡಲೆಂದು ಗುಪ್ತಚರ ಇಲಾಖೆಯ ಸಹಾಯ ಪಡೆದುಕೊಂಡಿದೆ. ಈ ಕ್ರಮ ಎಷ್ಟರ ಮಟ್ಟಿಗೆ ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ

ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ

ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಸಹ ಗುಪ್ತಚರ ಇಲಾಖೆಯನ್ನು ಪಕ್ಷದ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪ ಬಂದಿತ್ತು. ಆದರೆ ಇಲಾಖೆ ಅದನ್ನು ನಿರಾಕರಿಸಿತ್ತು. ಇದಷ್ಟೆ ಅಲ್ಲ ಈ ಮುಂಚಿನ ಬಹುತೇಕ ಸರ್ಕಾರಗಳ ಸಮಯದಲ್ಲಿ ಗುಪ್ತಚರ ಇಲಾಖೆಯನ್ನು ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಂಡ ಆರೋಪಗಳು ಇವೆ.

English summary
CM Kumaraswamy instructed Intelligence department to keep an eye on dissident MLAs. Intelligence department will give reports about dissident MLAs moves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X