ರೈಲ್ವೆ ಷೇರುಗಳ ಮೌಲ್ಯ ಭಾರಿ ಕುಸಿತ, ಷೇರು ಮಾರುಕಟ್ಟೆಯಲ್ಲಿ ತಲ್ಲಣ!
ನರೇಂದ್ರ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಬಾರಿಸಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ಈ ಬಾರಿ ಆಘಾತದ ಮೇಲೆ ಆಘಾತ ಎದುರಿಸುವ ಸ್ಥಿತಿ ಬಂದಿದೆ. ಅದ್ರಲ್ಲೂ 3ನೇ ಬಾರಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಇಂದು ಮೊದಲ ಬಜೆಟ್ ಮಂಡನೆ ಆಗಿದೆ. ಬಜೆಟ್ ಮಂಡನೆ ಪರಿಣಾಮವಾಗಿ ಭಾರತದ ಷೇರು ಮಾರುಕಟ್ಟೆ ಭೀಕರ ಕುಸಿತ ಕಂಡು ಮತ್ತೆ ಚೇತರಿಸಿಕೊಂಡಿದೆ. ಆದರೆ ರೈಲ್ವೆ ಷೇರುಗಳ ಪರಿಸ್ಥಿತಿ ಏನಾಗಿದೆ ಗೊತ್ತಾ?
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಸಮಯದಲ್ಲಿ, ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಉಂಟಾಗುವುದು ಮಾಮೂಲು. ಇಂದು ಷೇರು ಮಾರುಕಟ್ಟೆ ಆರಂಭದಲ್ಲೇ ಭರ್ಜರಿ ಏರಿಕೆ ಕಂಡಿತ್ತು. ಆರಂಭದಲ್ಲಿ ಷೇರು ಮಾರುಕಟ್ಟೆ ಭಾರಿ ಏರಿಕೆ ಕಂಡು ಸಾರ್ವಕಾಲಿಕ ಎತ್ತರಕ್ಕೂ ಷೇರು ಮಾರುಕಟ್ಟೆ ತಲುಪಿತ್ತು. ಇಂದು ಷೇರುಪೇಟೆ ಆರಂಭ ಆದಾಗ, ಸೆನ್ಸೆಕ್ಸ್ ಸುಮಾರು 222 ಅಂಕ ಏರಿಕೆ ಕಂಡು ಬರೋಬ್ಬರಿ 80,724 ಅಂಕಗಳಿಗೆ ತಲುಪಿತ್ತು. ಹಾಗೇ ನಿಫ್ಟಿ-50 ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಸಾರ್ವಕಾಲಿಕ ಎತ್ತರಕ್ಕೆ ಅಂದರೆ 24,568 ಅಂಕ ಗಳಿಕೆ ಮಾಡಿತ್ತು. ಆದರೆ ಆ ನಂತರ ಆಗಿದ್ದೆಲ್ಲವೂ ಉಲ್ಟಾ!

ಬಜೆಟ್ ಮಂಡನೆ ವೇಳೆ ಕುಸಿತ!
ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮತ್ತೊಮ್ಮೆ ಹಣಕಾಸು ಖಾತೆ ಪಡೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು, ಬಜೆಟ್ ಮಂಡಿಸಿದರು. ಹೀಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಷೇರು ಮಾರುಕಟ್ಟೆ ಸಾವಿರಾರು ಅಂಕ ಕುಸಿತ ಕಂಡಿತ್ತು.
ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಅಂಕ ಕುಸಿತ ಕಂಡು, ಸಾಕಷ್ಟು ಭಯ ಹುಟ್ಟಿಸಿತ್ತು. ಆದರೆ ಆ ನಂತರ ಸೆನ್ಸೆಕ್ಸ್ & ನಿಫ್ಟಿ-50 ಚೇತರಿಕೆ ಕಂಡರೂ ರೈಲ್ವೆ ಷೇರುಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಇಂದು ಇಂಡಿಯನ್ ರೈಲ್ವೆ ಷೇರು (IRCTC) & ರೈಲ್ ವಿಕಾಸ್ ನಿಗಮ್ (RVNL) ಹಾಗೂ ಇಂಡಿಯನ್ ರೈಲ್ವೆ ಫೈನಾನ್ಸ್ (IRFC) ಷೇರುಗಳು ಎಷ್ಟು ಕುಸಿತ ಕಂಡವು ಗೊತ್ತೆ? ಮುಂದೆ ಓದಿ.
ರೈಲ್ವೆ ಷೇರುಗಳಲ್ಲಿ ಭಾರಿ ಕುಸಿತ
2024ರ ಫೆಬ್ರವರಿ ತಿಂಗಳಲ್ಲಿ ಚುನಾವಣೆಗೆ ಮೊದಲು ಬಜೆಟ್ ಮಂಡನೆ ಮಾಡಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದರು. ಸತತ ಬಜೆಟ್ ಮಂಡನೆ ಮಾಡುತ್ತಿರುವ ಕಾರಣಕ್ಕೆ ಇಂದು ಕೇಂದ್ರ ಸಚಿವರ ಮೇಲೆ ನಿರೀಕ್ಷೆಗಳ ಭಾರ ಇತ್ತು. ಹೀಗಿದ್ದಾಲೇ IRCTC ಷೇರುಗಳು ಸುಮಾರು 31.60 ಅಂಕ ಕುಸಿತ ಕಂಡು, ಶೇಕಡಾ 3 ರಷ್ಟು ಇಳಿಕೆ ಕಂಡಿವೆ. ಹಾಗೇ ರೈಲ್ ವಿಕಾಸ್ ನಿಗಮ್ ಷೇರುಗಳು ಶೇಕಡಾ 5 ರಷ್ಟು ಕುಸಿತ ಕಂಡು, 32.10 ಅಂಕ ಇಳಿಕೆ ಕಂಡಿವೆ. ಈ ನಡುವೆ IRFC ಷೇರುಗಳು ಕೂಡ ಶೇಕಡಾ 4.83 ರಷ್ಟು ಕುಸಿತ ಕಂಡು 9.88 ಅಂಕ ಇಳಿದಿವೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications