ಮಕ್ಕಳ ಬಳಿಗೆ ತಾರಾಲಯ: ಸಂಚಾರಿ ಪ್ಲಾನೆಟೋರಿಯಂಗೆ ಚಾಲನೆ
ಬೆಂಗಳೂರು, ಆಗಸ್ಟ್ 24: ದೇಶದ ಮೊದಲ ಸಂಚಾರಿ ತಾರಾಲಯ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು.
ಒಟ್ಟು 5 ಸಂಚಾರಿ ತಾರಾಲಯಗಳು ಗ್ರಾಮೀಣ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಲಿವೆ. ಮಕ್ಕಳ ಜ್ಞಾನಾರ್ಜನೆಗಾಗಿ ಈ ತಾರಾಲಯಗಳನ್ನು ತೆರೆಯಲಾಗಿದೆ. ಏಕಕಾಲಕ್ಕೆ 40 ವಿದ್ಯಾರ್ಥಿಗಳು ತಾರಾಲಯದಲ್ಲಿ ಬಾಹ್ಯಾಕಾಶ ವೀಕ್ಷಣೆ ಮಾಡಬಹುದಾಗಿದೆ.
ತಾರಾಲಯದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ವಿದ್ಯಾರ್ಥಿಗಳ ಕಲಿಕೆಯ ಕುತೂಹಲಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಕಂದಕ ತೊಡಕಾಗಬಾರದು. ಇಂದು ಉದ್ಘಾಟಿಸಲಿರುವ ಸಂಚಾರಿ ತಾರಾಲಯಗಳ ಹಿಂದೆ ಈ ಆಶಯವಿದೆ. ಗ್ರಾಮೀಣ ಭಾಗಗಳೂ ಸೇರಿದಂತೆ ರಾಜ್ಯಾದ್ಯಂತ ಸಂಚರಿಸಲಿರುವ ಈ ತಾರಾಲಯಗಳು ಸಮಾನ ಸೌಕರ್ಯಗಳ, ಸಮಾನ ಶಿಕ್ಷಣದೆಡೆಗಿನ ನಮ್ಮ ಬದ್ಧತೆಯ ದ್ಯೋತಕವಾಗಿವೆ," ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಯ ಕುತೂಹಲಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಕಂದರ ತೊಡಕಾಗಬಾರದು. ಇಂದು ಉದ್ಘಾಟಿಸಲಿರುವ ಸಂಚಾರಿ ತಾರಾಲಯಗಳ ಹಿಂದೆ ಈ ಆಶಯವಿದೆ 1/2 pic.twitter.com/AuN9YKWuYn
— CM of Karnataka (@CMofKarnataka) August 23, 2017