ಜಮಖಂಡಿಯಲ್ಲಿ ಶೀಘ್ರವೇ ಭಾರತದ ಮೊದಲ ಫ್ಲೆಕ್ಸ್ ಇಂಧನ ಕೇಂದ್ರ ಆರಂಭ
ಬಾಗಲಕೋಟೆ, ಅಕ್ಟೋಬರ್ 26: ಬೆಂಗಳೂರಿನಿಂದ ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾರತದ ಮೊದಲನೆಯ 'ಫ್ಲೆಕ್ಸ್ ಇಂಧನ' ಕೇಂದ್ರ ಆರಂಭವಾಗಲಿದೆ.
ಫ್ಲೆಕ್ಸ್ ಇಂಧನ ಅಥವಾ ಹೊಂದಿಕೊಳ್ಳುವ ಇಂಧನವು ಪರ್ಯಾಯ ಇಂಧನವಾಗಿದ್ದು, ಇದರಲ್ಲಿ ಗ್ಯಾಸೋಲಿನ್ ಅನ್ನು ಮೆಥನಾಲ್ ಅಥವಾ ಎಥೆನಾಲ್ನೊಂದಿಗೆ ಸಂಯೋಜಿಸಲಾಗುತ್ತದೆ. ಬಾಗಲಕೋಟೆಯಲ್ಲಿ ಬರಲಿರುವ ಫ್ಲೆಕ್ಸ್ ಇಂಧನ ಕೇಂದ್ರವು ಜೈವಿಕ ಸಿಎನ್ಜಿ, ಎಥೆನಾಲ್ ಮಿಶ್ರಿತ ಗ್ಯಾಸೋಲಿನ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.
ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಕುಟುಂಬಕ್ಕೆ ಸಂಬಂಧಿಸಿರುವ ಟ್ರೂಆಲ್ಟ್ ಎನರ್ಜಿ ಕಂಪನಿಯು ಈ ಕೇಂದ್ರವನ್ನು ಸ್ಥಾಪಿಸಲಿದೆ. ವಾಹನ ತಯಾರಕರು ಫ್ಲೆಕ್ಸ್ ಇಂಧನ ಎಂಜಿನ್ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಭಾರತದಾದ್ಯಂತ 250 ಫ್ಲೆಕ್ಸ್ ಇಂಧನ ಕೇಂದ್ರಗಳನ್ನು ಸ್ಥಾಪಿಸಲು ಟ್ರೂಆಲ್ಟ್ ಎನರ್ಜಿ ಬಯಸಿದೆ.
ಟ್ರೂಆಲ್ಟ್ ಎನರ್ಜಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಅವರು ಭವಿಷ್ಯಕ್ಕೆ ಸಜ್ಜುಗೊಳ್ಳಲು ಕಂಪನಿಯು ಇಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಜಮಖಂಡಿಯ ಫ್ಲೆಕ್ಸ್ ಇಂಧನ ಕೇಂದ್ರ ದೇಶದಲ್ಲೇ ಮೊದಲ ತಾಣವಾಗಿದ್ದು, ಶೀಘ್ರದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಮತ್ತು ಬೆಳಗಾವಿ ಜಿಲ್ಲೆಯಲ್ಲಿ 14 ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ವರ್ಷಕ್ಕೆ 1.5 ಲಕ್ಷ ರೂ ಉಳಿತಾಯ
ಆಟೋ ಮೊಬೈಲ್ ತಯಾರಕರು ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡಲು ಕಂಪನಿಯು ಕಾಯುತ್ತಿದ್ದಾರೆ. ಜಮಖಂಡಿಯಲ್ಲಿ ನಾವು ಎಥೆನಾಲ್ ಬಳಸುವ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿರುವ 18 ಟ್ರ್ಯಾಕ್ಟರ್ಗಳನ್ನು ಪಡೆದುಕೊಂಡಿದ್ದೇವೆ. ಇದರಿಂದಾಗಿ ರೈತರು ಇಂಧನ ವೆಚ್ಚಕ್ಕಾಗಿ ವರ್ಷಕ್ಕೆ 1.5 ಲಕ್ಷ ರೂಪಾಯಿಗಳನ್ನು ಉಳಿಸುತ್ತಿದ್ದಾರೆ ಎಂದು ವಿಜಯ್ ಹೇಳಿದರು.

ಟ್ರೂಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರ ಆರಂಭ
ವಾಹನ ತಯಾರಕರು ಫ್ಲೆಕ್ಸ್ ಇಂಧನ ಮೂಲಸೌಕರ್ಯಗಳ ಬಗ್ಗೆ ವಿಶ್ವಾಸ ಹೊಂದಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಸಾಕಷ್ಟು ಎಥೆನಾಲ್ ಅನ್ನು ತಲುಪಿಸಲು ಹೆಚ್ಚು ಸಮರ್ಥವಾಗಿವೆ ಮತ್ತು ನಾವು ಮೂಲಸೌಕರ್ಯವನ್ನು ಸಿದ್ಧಪಡಿಸುವ ಮೂಲಕ ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು. ಜಮಖಂಡಿಯಲ್ಲಿರುವ ಟ್ರೂಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರವು ಕಬ್ಬು ಆಧಾರಿತ ಜೈವಿಕ ಸಿಎನ್ಜಿ ಮತ್ತು ಎಥೆನಾಲ್ ಅನ್ನು ಹೊಂದಿರುತ್ತದೆ. ಇವಿ ಚಾರ್ಜಿಂಗ್ಗೆ ವಿದ್ಯುತ್ ಸರಬರಾಜು ಕೂಡ ಕಬ್ಬಿನಿಂದ ಬರಲಿದೆ.

ಎಥೆನಾಲ್ ಮಿಶ್ರಣದ ಗುರಿ ಹೆಚ್ಚಳ
2018 ರಲ್ಲಿ ಕೇಂದ್ರ ಸರ್ಕಾರವು ಜೈವಿಕ ಇಂಧನ ನೀತಿಯನ್ನು ಪರಿಚಯಿಸಿತು. ಆರಂಭದಲ್ಲಿ ಎಥೆನಾಲ್ ಮಿಶ್ರಣದ ಗುರಿಯು 10% ಆಗಿತ್ತು. ಗುರಿಯು ಈಗ 20% ಆಗಿದ್ದು, ಇದಕ್ಕಾಗಿ ಗಡುವನ್ನು ಹಿಂದಿನ 2030 ರಿಂದ 2025 ಕ್ಕೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2025ರ ವೇಳೆಗೆ 20% ಎಥೆನಾಲ್ ಅನ್ನು ಪೆಟ್ರೋಲ್ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದರೆ ಭಾರತವು 1 ಲಕ್ಷ ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದು ಹೇಳಿದರು.

ಎಥೆನಾಲ್ಗೆ ಬದಲಾಯಿಸಿದರೆ
ಪ್ರಸ್ತುತ, ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ನಾವು ನಮ್ಮ ವಿದೇಶೀ ವಿನಿಮಯ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಕಚ್ಚಾತೈಲವನ್ನು ನಿಲ್ಲಿಸಿ ಎಥೆನಾಲ್ಗೆ ಬದಲಾಯಿಸಿದರೆ ಅದು ರೈತರಿಗೆ ಅನುಕೂಲವಾಗುತ್ತದೆ. ಎಥೆನಾಲ್ ಲೀಟರ್ ಗೆ 63 ರೂ. ಒಂದು ಲೀಟರ್ ಪೆಟ್ರೋಲ್ಗೆ ಹೋಲಿಸಿದರೆ ಪೆಟ್ರೋಲ್ ಲೀಟರ್ಗೆ 120ರಿಂದ 125 ರೂ. ಇದೆ. ಎಥೆನಾಲ್ ಅರ್ಧ ಬೆಲೆಯಲ್ಲಿ 1.3 ಲೀಟರ್ಗಳೊಂದಿಗೆ ಅದೇ ಮೈಲೇಜ್ ನೀಡುತ್ತದೆ ಎಂದು ವಿಜಯ್ ಹೇಳಿದರು.
-
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications