ವಿಜ್ಞಾನಿಗಳಿಂದ ಗೌರಿಬಿದನೂರಿನಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ
ಬಂಜರು ಭೂಮಿಗಳನ್ನು ಹಸಿರಾಗಿಸಲು ಐಐಎಸ್ ಸಿ ವಿಜ್ಞಾನಿಗಳಿಂದ ಹೊಸ ತಂತ್ರಗಾರಿಕೆ. ಡ್ರೋನ್ ಮೂಲಕ ಬೀಜ ಬಿತ್ತನೆಯ ಹೊಸ ಪ್ರಯೋಗ. ಆರಂಭಿಕ ಹಂತದಲ್ಲಿ ಗೌರಿಬಿದನೂರಿನಲ್ಲಿ ಈ ಪ್ರಯೋಗ ಜಾರಿ.
ಬೆಂಗಳೂರು, ಜೂನ್ 24: ಬರಡು ನೆಲಗಳಲ್ಲಿ ಏಕ ಕಾಲಕ್ಕೆ ಅತಿ ಹೆಚ್ಚು ಬೀಜಗಳನ್ನು ಬಿತ್ತುವ ಮೂಲಕ, ಅರಣ್ಯ ಬೆಳೆಸುವ ಹೊಸ ಪ್ರಯೋಗಾತ್ಮಕ ಕೈಂಕರ್ಯಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ವಿಜ್ಞಾನಿಗಳು ಕೈ ಹಾಕಿದ್ದಾರೆ. ಈ ಯೋಜನೆಗೆ 'ಸೀಡ್ ಬಾಂಬಿಂಗ್' ಎಂದು ಹೆಸರಿಡಲಾಗಿದೆ.
ಐಐಎಸ್ ಸಿ, ರಾಜ್ಯ ಸರ್ಕಾರ ಹಾಗೂ ಎಚ್ ಎನ್ ಸೆಂಟರ್ (ವೈಜ್ಞಾನಿಕ ಕೇಂದ್ರ) ಗಳ ಪರಸ್ಪರ ಸಹಕಾರದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದರ ಪ್ರಾಥಮಿಕ ಹೆಜ್ಜೆಯಾಗಿ, ಗೌರಿಬಿದನೂರಿನಲ್ಲಿ ಡ್ರೋನ್ ಗಳ ಮೂಲಕ ನಿರ್ದಿಷ್ಟ ಪ್ರದೇಶದಲ್ಲಿ ಏಕಕಾಲದಲ್ಲಿ ಬೀಜ ನೆಡುವ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನವಾದ ಜೂನ್ 2ರಂದು ಹಮ್ಮಿಕೊಳ್ಳಲಾಗಿತ್ತು. ಆನಂತರ ಕೊಂಚ ಮಳೆ ಬಂದಿದ್ದರಿಂದ ಈ ಪ್ರಯೋಗಕ್ಕೆ ಹೊಸ ಯಶಸ್ಸು ತರುವ ನಿರೀಕ್ಷೆ ಹುಟ್ಟಿಸಿದೆ.
ಇನ್ನು, ಈ ಪ್ರದೇಶಕ್ಕೆ ಬೋರ್ ವೆಲ್ ಗಳ ಮೂಲಕ ನೀರು ಹಾಯಿಸಿದರೆ, ಆ ಬರಡು ನೆಲಗಳು ಕೆಲವೇ ತಿಂಗಳುಗಳಲ್ಲಿ ಹಸಿರಾಗಿ ಕೆಲವೇ ವರ್ಷಗಳಲ್ಲಿ ಪುಟ್ಟ ಅರಣ್ಯಗಳಾಗಿ ಮಾರ್ಪಾಟು ಹೊಂದುತ್ತವೆ. ಇದರಿಂದ ಆ ಪ್ರದೇಶಗಳಲ್ಲಿನ ಹವಾಮಾನ, ನೀರಿನ ವ್ಯವಸ್ಥೆಗೆ ಹೊಸ ಆಯಾಮ ಕೊಟ್ಟಂತಾಗುತ್ತದೆ ಎಂಬುದು ವಿಜ್ಞಾನಿಗಳ ತರ್ಕ.
ಈ ನ್ಯೂಸ್ ಮಿನಟ್ ಗೆ ನೀಡಿರುವ ಹೇಳಿಕೆಯಲ್ಲಿ, ವಿಜ್ಞಾನಿಗಳ ತಂಡದಲ್ಲೊಬ್ಬರಾದ ಪ್ರೊಫೆಸರ್ ರೆಡ್ಡಿಯವರು, ಗೌರಿ ಬಿದನೂರು ಬಳಿಯ ಬಂಜರು ನೆಲವು ನಿಜ ಅರ್ಥದಲ್ಲಿ ಫಲವತ್ತಾಗಿದೆ. ಆದರೆ, ನೀರಿನ ಕೊರತೆ ಇರುವ ಕಾರಣದಿಂದಾಗಿ ಅದು ಬರಡಾಗಿದೆ. ಈ ಪ್ರದೇಶದಲ್ಲಿ ನೀರು ಬೇಕೆಂದರೆ ಸುಮಾರು 1000 ಅಡಿಗಳಷ್ಟು ಭೂಮಿಯನ್ನು ಕೊರೆಯಬೇಕಿದೆ ಎಂದಿದ್ದಾರೆ.
ಹಾಗಾಗಿ, ಸೀಡ್ ಬಾಂಬಿಂಗ್ ಆದ ನಂತರ, ಬೋರ್ ವೆಲ್ ಗಳನ್ನು ಕೊರೆಯಿಸಿ ಈ ಪ್ರದೇಶಗಳಲ್ಲಿ ನೀರನ್ನು ಹರಿಯಿಸಿ, ಇಲ್ಲಿ ಅರಣ್ಯ ಬೆಳವಣಿಗೆಗೆ ಪ್ರಾಶಸ್ತ್ರ್ಯವಾದ ವಾತಾವರಣ ಕಲ್ಪಿಸಲಾಗುವುದು ಎಂದು ರೆಡ್ಡಿ ತಿಳಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications