ರಾಜ್ಯದಲ್ಲಿ ಕೊರೊನಾ ರೂಪಾಂತರಿಯಿಂದಲೇ 20 ಲಕ್ಷ ಪ್ರಕರಣಗಳು: IISC ಎಚ್ಚರಿಕೆ
ಬೆಂಗಳೂರು, ಆಗಸ್ಟ್ 09: ಕರ್ನಾಟಕದಲ್ಲಿ ಕೊರೊನಾ ರೂಪಾಂತರಿಯಿಂದ 20 ಲಕ್ಷ ಪ್ರಕರಣಗಳು ದಾಖಲಾಗಬಹುದು ಎಂದು ಐಐಎಸ್ಸಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಸಮಗ್ರ ಮುನ್ಸೂಚನೆಯನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ 972 ಸನ್ನಿವೇಶಗಳನ್ನು ವಿಶ್ಲೇಷಿಸುವ ಮೂಲಕ ಕರ್ನಾಟಕದಲ್ಲಿ ಕೋವಿಡ್ ಮೂರನೇ ತರಂಗವನ್ನು ಊಹಿಸಲು ಗಣಿತದ ಮಾದರಿಯನ್ನು ಬಳಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಳಿತ ಮುಂದುವರಿದಿದೆ. ರಾಜ್ಯದಲ್ಲಿ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡು ಬಂದಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.25ರಷ್ಟಿದೆ.
ರಾಜ್ಯದಲ್ಲಿ ಒಂದು ದಿನದಲ್ಲಿ 1598 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1914 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 20 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36793 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2918525ಕ್ಕೆ ಏರಿಕೆಯಾಗಿದೆ. ಒಟ್ಟು 2857776 ಸೋಂಕಿತರು ಗುಣಮುಖರಾಗಿದ್ದು. 23930 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ಹರಡುವಿಕೆ ಮತ್ತು ಕಳೆದುಹೋದ ದತ್ತಾಂಶದ ವಿಷಯದಲ್ಲಿ ಹಲವಾರು ಅನಿಶ್ಚಿತತೆಗಳ ಕಾರಣದಿಂದಾಗಿ, ನಾವು ಮೂರನೇ ಅಲೆ ಮೇಲೆ ಪ್ರಭಾವ ಬೀರುವ ಹಲವಾರು ಪ್ರಮುಖ ನಿಯತಾಂಕಗಳನ್ನು ಚಿತ್ರಿಸಿದ್ದೇವೆ ಮತ್ತು ವಿಭಿನ್ನ ಸನ್ನಿವೇಶಗಳನ್ನು ನಿರ್ಮಿಸಲು ಆ ನಿಯತಾಂಕಗಳನ್ನು ಬದಲಿಸಿದ್ದೇವೆ" ಎಂದು ಕಂಪ್ಯೂಟೇಶನಲ್ ವಿಭಾಗದ ಅಧ್ಯಕ್ಷ ಹಾಗು ಡೇಟಾ ಸೈನ್ಸಸ್ ಪ್ರೊ ಶಶಿಕುಮಾರ್ ಗಣೇಶನ್ ಹೇಳಿದರು.
ಈ ಮಾದರಿಯನ್ನು ಪ್ರೊ ಶಶಿಕುಮಾರ್ ಗಣೇಶನ್ ನೇತೃತ್ವದಲ್ಲಿ ಅವರ ಸಹೋದ್ಯೋಗಿಗಳಾದ ದೀಪಕ್ ಸುಬ್ರಮಣಿ, ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ.ಗಿರಿಧರ ಬಾಬು ಆರ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ.

ಲಸಿಕೆ ವಿತರಣಾ ದರ ಏರಿಕೆಯಾಗಬೇಕು
ಸೆಪ್ಟೆಂಬರ್ನಿಂದ ಅಕ್ಟೋಬರ್ ವೇಳೆಗೆ ಒಂದು ಹೊಸ ವೈರಸ್ ರೂಪಾಂತರವು ಹೊರಹೊಮ್ಮಿದರೆ ಮತ್ತು ಪ್ರಸ್ತುತ ಲಸಿಕೆ ದರವನ್ನು ಮುಂದುವರಿಸಿದರೆ ಸೋಂಕು ಪ್ರಕರಣಗಳ ಸಂಖ್ಯೆ ಬರೊಬ್ಬರಿ 20ಲಕ್ಷಗಳಾಗಿರುತ್ತದೆ. ಆಗ ರಾಜ್ಯ ಸರ್ಕಾರವು ಲಾಕ್ ಡೌನ್ ಸಹಿತ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಮರಳಿ ತರಬೇಕಾಗುತ್ತದೆ. ಅಂತೆಯೇ ರಾಜ್ಯದಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸದಿದ್ದರೆ, ರಾಜ್ಯವು ಇದೇ ಅವಧಿಯಸಲ್ಲಿ 7 ರಿಂದ 8 ಲಕ್ಷಗಳ ಸಕ್ರಿಯ ಕೇಸ್ ಲೋಡ್ ಅನ್ನು ನೋಡಬಹುದು ಎಂದು ಅಭಿಪ್ರಾಯಪಟ್ಟಿದೆ.

ಜವಾಬ್ದಾರಿಯುವ ನಡೆ
ಲಸಿಕೆ ವಿತರಣೆ ಒಂದೇ ವೇಗದಲ್ಲಿ ಮುಂದುವರಿದರೆ ಮತ್ತು ಒಂದು ಹೊಸ ರೂಪಾಂತರವು ಹೊರಹೊಮ್ಮಿದರೆ, ರಾಜ್ಯವು ಸಡಿಲವಾದ ಸಾಮಾಜಿಕ ಅಂತರ ಪಾಲನೆ ಮಾನದಂಡಗಳೊಂದಿಗೆ 1.44 ಲಕ್ಷದಿಂದ 2.07 ಲಕ್ಷ ಪ್ರಕರಣಗಳನ್ನು ನೋಡಬಹುದು. ಆದಾಗ್ಯೂ, ಸಾಮಾಜಿಕ ದೂರವು ಉತ್ತಮವಾಗಿದ್ದರೆ, ಅಕ್ಟೋಬರ್ 13 ರ ವೇಳೆಗೆ ಕೇವಲ 36,000 ಪ್ರಕರಣಗಳು ಮತ್ತು ಅಕ್ಟೋಬರ್ ಅಂತ್ಯದವರೆಗೆ ಸುಮಾರು 36,000 ರಿಂದ 48,000 ಪ್ರಕರಣಗಳು ಇರುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಧ್ಯಯನವು ಆಗಸ್ಟ್ನಲ್ಲಿ ಹೊಸ ರೂಪಾಂತರವು ಹೊರಹೊಮ್ಮಿದರೆ, ರಾಜ್ಯದಲ್ಲಿ ಆಗಸ್ಟ್ನಲ್ಲಿ 4.51 ಲಕ್ಷ ಪ್ರಕರಣಗಳು ಮತ್ತು ಆಗಸ್ಟ್ 22 ಮತ್ತು ಸೆಪ್ಟೆಂಬರ್ 10 ರ ನಡುವೆ ಸುಮಾರು 20 ಲಕ್ಷ ಪ್ರಕರಣಗಳನ್ನು ನೋಡಬಹುದು. ದುರ್ಬಲ ಜನಸಂಖ್ಯೆಯಲ್ಲಿ, ವಿಶೇಷವಾಗಿ 0 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕುಗಳು 12 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಜನಸಂಖ್ಯೆಯಲ್ಲಿ ಪ್ರತಿಕಾಯ ಕ್ಷೀಣಿಸುವ ಅವಧಿ
ಮಾದರಿಯನ್ನು ಏಳು ಪ್ರಮುಖ ನಿಯತಾಂಕಗಳಲ್ಲಿ ತಯಾರಿಸಲಾಗಿದ್ದು, ಪ್ರಕರಣದಿಂದ ಸೋಂಕಿನ ಅನುಪಾತ; ಜನಸಂಖ್ಯೆಯಲ್ಲಿ ಪ್ರತಿಕಾಯ ಕ್ಷೀಣಿಸುವ ಅವಧಿ, ಮತ್ತು ಅದು 1/3, 2/3 ಮತ್ತು ಪೂರ್ಣ ಜನಸಂಖ್ಯೆಯಲ್ಲಿ ಕ್ಷೀಣಿಸಿದರೆ ಅದರಿಂದಾಗುವ ವಿಭಿನ್ನ ಸನ್ನಿವೇಶಗಳು; ಜುಲೈ-ಅಂತ್ಯದಿಂದ ನವೆಂಬರ್ ವರೆಗೆ ವಿವಿಧ ತಿಂಗಳುಗಳಲ್ಲಿ ರೋಗನಿರೋಧಕ-ತಪ್ಪಿಸಿಕೊಂಡ ವೈರಲ್ ರೂಪಾಂತರಗಳ ಹೊರಹೊಮ್ಮುವಿಕೆ; ಹೊಸ ರೂಪಾಂತರಗಳಿಂದಾಗಿ ಮರು ಸೋಂಕು ಮತ್ತು ದಿನಕ್ಕೆ ಲಸಿಕೆ ದರಗಳು ಒಂದೇ ಆಗಿದ್ದರೆ ಮತ್ತು ಪ್ರಸ್ತುತ ಸನ್ನಿವೇಶದಿಂದ ಶೇಕಡಾ 50 ಮತ್ತು 100 ರಷ್ಟು ಹೆಚ್ಚಳ; ಮತ್ತು ಮುಖ್ಯವಾಗಿ ಕೋವಿಡ್ಗೆ ಸೂಕ್ತವಾದ ನಡವಳಿಕೆಯಂತಹ ಅಂಶಗಳ ಆಧಾರದ ಮೇಲೆ ಈ ನಿಯತಾಂಕಗಳಲ್ಲಿ ತಯಾರಿಸಲಾಗಿದೆ.
Recommended Video

ಮೂರನೇ ಅಲೆಯ ಸಾಧ್ಯತೆಗಳು
ಕೋವಿಡ್ ಸೂಕ್ತ ಮಾನದಂಡಗಳ ಕಡ್ಡಾಯ ಪಾಲನೆ ಮೂರನೆಯ ಅಲೆಯನ್ನು ತಗ್ಗಿಸಲು ಉತ್ತಮ ಸಾಮಾಜಿಕ ದೂರ, ಹೊಸ ರೂಪಾಂತರದ ಉಲ್ಬಣ ಮತ್ತು ಲಸಿಕೆ ಮುಖ್ಯ ಎಂದು ಅಧ್ಯಯನವು ಕಂಡುಹಿಡಿದಿದೆ. ಮುಂದಿನ 3 ರಿಂದ ಆರು ತಿಂಗಳುಗಳವರೆಗೆ ನಾವು ಜಾಗರೂಕರಾಗಿರಬೇಕು. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಟೆಸ್ಟಿಂಗ್ ಮುಖ್ಯವಾಗಿದೆ. ನಾವು ನವೆಂಬರ್ ವರೆಗೆ ಹೊಸ ರೂಪಾಂತರಗಳ ಹೊರಹೊಮ್ಮುವಿಕೆಯನ್ನು ತಪ್ಪಿಸಿದರೆ, ನಾವು ಕರ್ನಾಟಕದಲ್ಲಿ ಕೋವಿಜ್ ಸಾಂಕ್ರಾಮಿಕ ಉತ್ತುಂಗ ಸ್ಥಿತಿ ನೋಡುವುದಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಇದು ಅಸಾಧ್ಯ, ಹೊಸ ರೂಪಾಂತರದ ಹೊರಹೊಮ್ಮುವಿಕೆಯ ನಂತರ ಐದರಿಂದ ಆರು ವಾರಗಳಲ್ಲೇ ಕೋವಿಡ್ ಪರಿಸ್ಥಿತಿ ಉತ್ತುಂಗಕ್ಕೇರಲಿದೆ ಎಂದು ಅವರು ವಿವರಿಸಿದರು.
ಈ ಏಳು ನಿಯತಾಂಕಗಳನ್ನು ಇಟ್ಟುಕೊಂಡು ಮೂರು ಅಂಶಗಳನ್ನು ಪರಿಗಣಿಸಲಾಗಿದೆ. ರಾಜ್ಯದಲ್ಲಿ 3ನೇ ಅಲೆಯ ಸಾಧ್ಯತೆಗಳು, ಉತ್ತುಂಗದ ದಿನಾಂಕ ಮತ್ತು ಆ ಸಮಯದಲ್ಲಿ ವಯೋಮಾನದ ಕೇಸ್ ಲೋಡ್ ಎಂಬ ಮೂರು ಅಂಶಗಳನ್ನು ವಿವರಿಸಲಾಗಿದೆ. ಏಳರಿಂದ ಮೂರು ಪ್ರಮುಖ ನಿಯತಾಂಕಗಳನ್ನು ಗಮನಿಸಲಾಗಿದ್ದು, ಪ್ರಾಥಮಿಕವಾಗಿ ಕೋವಿಡ್-ಸೂಕ್ತವಾದ ನಡವಳಿಕೆಯು ಅತ್ಯಂತ ಮಹತ್ವದ್ದಾಗಿದೆ; ಎರಡನೆಯದು ಹೊಸ ರೂಪಾಂತರದ ಸಮಯ ಮತ್ತು ಮೂರನೆಯದು ಲಸಿಕೆ ದರ ಎಂದು ಡಾ ಶಶಿಕುಮಾರ್ ವಿವರಿಸಿದರು.












Click it and Unblock the Notifications