ಅಧಿಕಾರ ಅತೃಪ್ತಿ ಹೊರಹಾಕಿದ ಹಂಗಾಮಿ ಸಭಾಪತಿ ಹೊರಟ್ಟಿ
ಬೆಂಗಳೂರು, ಜು.6: ಸಭಾಪತಿ ಆಯ್ಕೆ ಚರ್ಚೆಗೆ ಖುದ್ದು ಹಂಗಾಮಿ ಸಭಾಪತಿಯೇ ನಾಂದಿ ಹಾಡಿದ್ದಾರೆ. ನಾನು ಏನೂ ಕೇಳುವುದಿಲ್ಲ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದಿದ್ದಾರೆ.
ಸಭಾಪತಿಯಾಗಿ ಬಸವರಾಜ ಹೊರಟ್ಟಿಯನ್ನು ನೇಮಿಸುವುದಾಗಿ ಜೆಡಿಎಸ್ ಆಶ್ವಾಸನೆ ನೀಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷದವರಿಗೇ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಮಾಜಿ ಸಚಿವ ಎಸ್ ಆರ್ ಪಾಟೀಲ್ಗೆ ಸಭಾಪತಿ ಸ್ಥಾನವನ್ನು ನೀಡಲು ಸಿದ್ದರಾಮಯ್ಯ ಲಾಬಿ ಮಾಡುತ್ತಿದ್ದಾರೆ.
ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನ ನೀಡುವುದಿಲ್ಲ ಬದಲಾಗಿ ಸಭಾಪತಿ ಸ್ಥಾನವನ್ನು ನೀಡುವುದಾಗಿ ಜೆಡಿಎಸ್ ಸಂಧಾನ ಮಾಡಿತ್ತು. ಈಗ ಜೆಡಿಎಸ್ನ ಹಿರಿಯ ನಾಯಕನಿಗೆ ಸಭಾಪತಿ ಹುದ್ದೆಯೂ ಇಲ್ಲ ಇತ್ತ ಸಚಿವ ಸ್ಥಾನವೂ ಕೂಡ ಇಲ್ಲದಂತಾಗಿದೆ. ಈ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಸಭಾಪತಿ ಹುದ್ದೆಯ ಕುರಿತು ಅವರಿಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಾನು ಏನೂ ಕೇಳುವುದಿಲ್ಲಹೈಕಮಾಂಡ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧವಾಗಿದ್ದೇನೆ, ಅಧಿವೇಶನದೊಳಗೆ ಸಭಾಪತಿ ಚುನಾವಣೆ ನಡೆಯಬೇಕು. ರಾಜ್ಯಪಾಲರು ದಿನಾಂಕ ನಿಗದಿ ಮಾಡಬೇಕು. ಸಭಾಪತಿಯಾಗಿ ಮುಂದುವರೆಯಲು ಆಸಕ್ತಿ ಇದೆ. ಎಸ್ ಆರ್ ಪಾಟೀಲರನ್ನು ಬೇಕಾದರೂ ಮಾಡಬಹುದು, ರಾಜಕಾರಣದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ, ನನಗೂ ರಾಜಕೀಯದಲ್ಲಿ ಬೇರೆ ಬೇರೆ ಆಸೆಯಿತ್ತು ಎಂದು ಹೇಳಿದರು.












Click it and Unblock the Notifications