ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ 130 ಕಿಮೀ ವೇಗವಾಗಿ ಚಲಿಸಲಿವೆ ಹೈ ಸ್ಪೀಡ್ ರೈಲುಗಳು- ನೈರುತ್ಯ ರೈಲ್ವೆಯ ಹೊಸ ಯೋಜನೆ ಏನು?

ಬೆಂಗಳೂರು, ಜನವರಿ 19: ಮಾರ್ಚ್ ಅಂತ್ಯಕ್ಕೆ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ನಂತರ ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರು ನಡುವೆ ಅರೆ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹೊಂದುವ ಬಗ್ಗೆ ಈಗಾಗಲೇ ಹೆಚ್ಚು ಚರ್ಚೆಗಳಾಗುತ್ತಿವೆ. ಆದರೆ, ನೈರುತ್ಯ ರೈಲ್ವೆ ಹೊಸ ಯೋಜನೆಗೆ ಮುಂದಾಗಿದೆ.

 130 ಕಿಮೀದಲ್ಲಿ ಚಲಿಸಲಿವೆ ರೈಲುಗಳು

130 ಕಿಮೀದಲ್ಲಿ ಚಲಿಸಲಿವೆ ರೈಲುಗಳು

ನೈಋತ್ಯ ರೈಲ್ವೆ ( SWR) ಈ ಮಾರ್ಗದಲ್ಲಿ ರೈಲುಗಳಿಗೆ ಗರಿಷ್ಠ ವೇಗವನ್ನು ನೀಡುವ ಬಗ್ಗೆ ಯೋಜನೆ ರೂಪಿಸಿದೆ. ಈಗ ಹಳಿಗಳ ವೇಗದ ಸಂಭಾವ್ಯ ಅಸ್ತಿತ್ವ ಪ್ರತಿ ಗಂಟೆಗೆ 110 ಕಿಮೀ ಇದೆ. ಇದನ್ನು ಪ್ರತಿ ಗಂಟೆಗೆ 130 ಕಿಮೀಗೆ ಹೆಚ್ಚಿಸಲು ರೈಲ್ವೆ ಮಂಡಳಿ ಯೋಜನೆ ರೂಪಿಸಿದೆ. ಈ ಯೋಜನೆಯು ಸಾಕಾರಗೊಂಡಲ್ಲಿ ಹುಬ್ಬಳಿ- ಧಾರವಾಡ ಹಾಗೂ ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಎರಡು ಮೂರು ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರ ಸಮಯ ಉಳಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 ಬೆಂಗಳೂರು-ಚೆನ್ನೈ ಮಾರ್ಗದಲ್ಲೂ ವೇಗ ಹೆಚ್ಚಳ

ಬೆಂಗಳೂರು-ಚೆನ್ನೈ ಮಾರ್ಗದಲ್ಲೂ ವೇಗ ಹೆಚ್ಚಳ

ಹೆಚ್ಚುವರಿಯಾಗಿ, SWR ತನ್ನ ಪ್ರಸ್ತಾವನೆಯನ್ನು ದಕ್ಷಿಣ ರೈಲ್ವೆ (SR), ಮತ್ತು ದಕ್ಷಿಣ-ಮಧ್ಯ ರೈಲ್ವೆ (SWR) ನೊಂದಿಗೆ ಹಂಚಿಕೊಂಡಿದೆ. ಈ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಪ್ರತಿ ಗಂಟೆಗೆ 160 ಕಿಮೀ ಗರಿಷ್ಠ ವೇಗದ ಮಿತಿಗೆ ಅನುಮತಿ ಕೋರಿದೆ. ಬೆಂಗಳೂರು-ಹೈದರಾಬಾದ್ ಮಾರ್ಗಗಳು. ಟ್ರ್ಯಾಕ್‌ಗಳ ವೇಗದ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಜೆಟ್ ಹಂಚಿಕೆಯನ್ನು ಕೋರಲಾಗಿದೆ.

 ಫೆಬ್ರವರಿಯಲ್ಲಿ ಕಾಮಗಾರಿಗಳು ಪೂರ್ಣ

ಫೆಬ್ರವರಿಯಲ್ಲಿ ಕಾಮಗಾರಿಗಳು ಪೂರ್ಣ

ಈ ಕುರಿತು ಮಾತನಾಡಿರುವ SWR ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್, 'ಹುಬ್ಬಳ್ಳಿ-ಬೆಂಗಳೂರು ನಡುವಿನ ದ್ವಿಗುಣ ಮಾರ್ಗಕ್ಕೆ ಸಂಬಂಧಿಸಿದ ಕಾಮಗಾರಿಗಳು ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿವೆ. ಈ ಮಾರ್ಗದಲ್ಲಿ 154 ಕಿಮೀ ಉದ್ದದ ವಿದ್ಯುದ್ದೀಕರಣ ಬಾಕಿ ಉಳಿದಿದೆ. ಮಾರ್ಚ್ ಅಂತ್ಯದೊಳಗೆ ಅದು ಪೂರ್ಣಗೊಳ್ಳುತ್ತದೆ. ಐದು ಪ್ರಸರಣ ಮಾರ್ಗಗಳ ಸಂಪರ್ಕಗಳನ್ನು ಒದಗಿಸಲು KPTCL ಗೆ ಕೇಳಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟೋನ್ ಕ್ರಷರ್‌ಗಳ ಮುಷ್ಕರದಿಂದಾಗಿ ಈ ಯೋಜನೆಯು ನಿಂತಿತ್ತು. ಇದನ್ನು ಪೂರ್ಣಗೊಳಿಸಲು ಮುಂದಿನ 100 ದಿನಗಳು ನಿರ್ಣಾಯಕವಾಗಿವೆ ಎಂದು ತಿಳಿಸಿದ್ದಾರೆ.

 ಧಾರವಾಡ- ಬೆಂಗಳೂರು ನಡುವೆ ವಂದೇ ಭಾರತ್‌ ರೈಲು

ಧಾರವಾಡ- ಬೆಂಗಳೂರು ನಡುವೆ ವಂದೇ ಭಾರತ್‌ ರೈಲು

ಈ ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದ ನಂತರ ಧಾರವಾಡ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸುವ ನಿರೀಕ್ಷೆಯಿದೆ. ಏಕೆಂದರೆ ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಸ್ಟ್ರೆಚ್ ಈಗಾಗಲೇ ದ್ವಿಗುಣಗೊಂಡಿದೆ ಮತ್ತು ವಿದ್ಯುದ್ದೀಕರಣಗೊಂಡಿದೆ. ಸಂಜೀವ್ ಕಿಶೋರ್ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಳಗಾವಿಯವರೆಗೆ ವಿಸ್ತರಿಸಬಹುದು. ಏಕೆಂದರೆ ಬೆಳಗಾವಿಯವರೆಗಿನ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣವು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

 ದಾವಣಗೆರೆ- ತುಮಕೂರು ಹೊಸ ರೈಲು ಮಾರ್ಗ

ದಾವಣಗೆರೆ- ತುಮಕೂರು ಹೊಸ ರೈಲು ಮಾರ್ಗ

ದಾವಣಗೆರೆ ಮತ್ತು ತುಮಕೂರು ನಡುವೆ ಹೊಸ ರೈಲು ಮಾರ್ಗವನ್ನು ನಿರ್ಮಿಸಲು ನಡೆಯುತ್ತಿರುವ ಯೋಜನೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ಹುಬ್ಬಳ್ಳಿ-ಬೆಂಗಳೂರು ನಡುವಿನ ಪ್ರಯಾಣದ ದೂರವನ್ನು 65 ಕಿ.ಮೀಗಳಷ್ಟು ಕಡಿಮೆ ಮಾಡುತ್ತದೆ. ಪ್ರಯಾಣದ ಸಮಯವು ಒಂದು ಗಂಟೆಗಿಂತ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

 ಧಾರವಾಡ-ಬೆಳಗಾವಿ ನೇರ ಮಾರ್ಗ

ಧಾರವಾಡ-ಬೆಳಗಾವಿ ನೇರ ಮಾರ್ಗ

ಧಾರವಾಡ-ಬೆಳಗಾವಿ ನೇರ ಮಾರ್ಗ ಯೋಜನೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದ್ದಾರೆ. 'ನಾವು ಹೊಸ ರಸ್ತೆ-ಮೇಲ್ಸೇತುವೆಗಳು, ಜನನಿಬಿಡ ಕಾರಿಡಾರ್‌ಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಮತ್ತು SWR ನಲ್ಲಿ ಹೆಚ್ಚುವರಿ ಲೂಪ್‌ಲೈನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು 2023-24 ಬಜೆಟ್‌ಗಾಗಿ ಪ್ರಸ್ತಾಪಿಸಿದ್ದೇವೆ. ಹೆಚ್ಚುವರಿ ನಿರ್ವಹಣಾ ಸೌಲಭ್ಯಗಳು ಸಹ ಬರಲಿವೆ' ಎಂದು ಸಂಜೀವ್ ಕಿಶೋರ್ ಹೇಳಿದ್ದಾರೆ.

 ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು?

ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು?

ಏತನ್ಮಧ್ಯೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲು ಕೇಂದ್ರ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸೇವೆಯನ್ನು ಶೀಘ್ರವಾಗಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಯೋಜನೆಯ ಭಾಗವಾಗಿ, 3.01 ಡಿಗ್ರಿ ಕರ್ವ್ ಹೊಂದಿದ್ದ ಸೌಂಶಿ ಮತ್ತು ಕುಂದಗೋಳ ನಡುವಿನ ಕರ್ವ್ ನಂ 24 ಅನ್ನು 1.6 ಡಿಗ್ರಿಗಳಿಗೆ ನೇರಗೊಳಿಸಲಾಗಿದೆ. ಇದು ಈ ಕರ್ವ್‌ನಲ್ಲಿ ರೈಲಿನ ವೇಗವನ್ನು 75 ಕಿ.ಮೀ ನಿಂದ 120 ಗೆ ಹೆಚ್ಚಿಸಲು ಅನುಕೂಲವಾಗುತ್ತದೆ' ಜೋಶಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+