ಮುಂಗಾರಿನ ಅಬ್ಬರ ಕಾಣುವ ಇಚ್ಛೆಯಿದರೆ ಪಶ್ಚಿಮ ಘಟ್ಟ, ಕರಾವಳಿ ಪ್ರದೇಶಕ್ಕೆ ಹೊರಡಿ
ಕೇರಳಕ್ಕೆ ನೈರುತ್ಯ ಮುಂಗಾರಿನ ಪ್ರವೇಶವಾಗಿದೆ. ಮುಂಗಾರು ಮಳೆಯನ್ನು ನೋಡಿ ಆನಂದಿಸಲು ಬಯಸುವವರಿಗಾಗಿ ಈ ಲೇಖನ. ಮಾನ್ಸೂನ್ ಫೋಟೋಗ್ರಫಿ ಎಂಬುದು ಕೂಡ ತುಂಬ ಜನಪ್ರಿಯವಾಗಿದೆ. ಇಂಥ ಸಂದರ್ಭದಲ್ಲಿ ಕರಾವಳಿಯಲ್ಲಿ ಮಳೆಯ ಅಬ್ಬರವನ್ನು ಹೇಗೆ ಬಣ್ಣಿಸುವುದು?
ಮಂಗಳೂರಿನಿಂದ ಗೋವಾಕ್ಕೆ ರಸ್ತೆ ಮೂಲಕ ತೆರಳುವುದು ತುಂಬ ಸೊಗಸಾದ ಅನುಭವ ಎಂದು ಹೇಳುವವರಿದ್ದಾರೆ. ಅದೇ ರೀತಿ ಆಗುಂಬೆಯಲ್ಲಿ ಬಿಡುವಿಲ್ಲದೆ ಬರುವ ಮಳೆಯಲ್ಲಿ ಮಲೆನಾಡಿನ ಖಾದ್ಯ ಸವಿಯುವುದರ ಮಜಾ ಬೇರೆ. ಇನ್ನು ಬೆಳಗಾವಿಗೆ ಹತ್ತಿರದ ಮಹಾರಾಷ್ಟ್ರಕ್ಕೆ ಸೇರಿದ ಅಂಬೋಲಿಗೆ ಹೋಗಿಬಂದರೆ ಅದು ಮತ್ತೊಂದು ಅನುಭೂತಿ.[ಜಲಕ್ರೀಡೆಯ ತಾಣವಾಗಲಿದೆ ಮಂಗಳೂರು ಸಸಿ ಹಿತ್ಲು ಬೀಚ್]

ಹ್ಞಾಂ, ಕುದುರೆಮುಖದ ಬಳಿ ಭಗವತಿ ನೇಚರ್ ಕ್ಯಾಂಪ್ ಎಂಬುದೊಂದಿದೆ. ಅಲ್ಲಿ ತುಂಬ ಕನಿಷ್ಠ ಸೌಲಭ್ಯಗಳಿದ್ದು, ಸರಕಾರಕ್ಕೆ ಸೇರಿದ್ದಾಗಿದೆ. ಆದರೆ ಇಲ್ಲಿನ ಹಸಿರು, ಚಿತ್ರ ಬರೆದಿಟ್ಟಂತೆ ಕಾಣುವ ಪರಿಸರ, ನದಿ...ವಾಹ್ ಎನ್ನುವ ಉದ್ಗಾರ ನೀವು ಮಾಡದಿದ್ದರೆ ಹೇಳಿ. ಇನ್ನು ಮರವಂತೆ ಮರೆಯಲಾದೀತೆ? ಸಮುದ್ರ-ನದಿ ಚುಂಬಿಸುವ ಈ ಸ್ಥಳದಲ್ಲಿ ಮಳೆಯ ಅಬ್ಬರ ನೋಡುವುದೇ ಚಂದ.[ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ]
ಕೇರಳದ ಕಡಲ ತೀರ ಪ್ರದೇಶದಲ್ಲಿ ಈಗ ಮಳೆಯ ಅಬ್ಬರ ಬಲು ಜೋರಾಗಿರುತ್ತದೆ. ವರ್ಕಳ, ಕೋವಲಂ ಸೇರಿದ ಹಾಗೆ ತೇಕ್ಕಡಿ, ಮುನ್ನಾರ್, ಅಲೆಪ್ಪಿ ವಿವಿಧೆಡೆ ಮಳೆಗಾಲದ ಅನುಭವ ಪಡೆಯಲು ಭೇಟಿ ನೀಡುತ್ತಾರೆ. ತಮಿಳುನಾಡಿನ ಕನ್ಯಾಕುಮಾರಿ, ರಾಮೇಶ್ವರಂ ಆಂಧ್ರದ ಅರಕ್ಕು ವ್ಯಾಲಿ, ವಿಶಾಖಪಟ್ಟಣಂ ಕೂಡ ಅಂಥವೇ ಸ್ಥಳಗಳು.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']
ಪಶ್ಚಿಮ ಘಟ್ಟ ಹಾಗೂ ಕೊಂಕಣದ ಸಾಲಿನಲ್ಲಿ ಬರುವ ಕರ್ನಾಟಕ, ಆಂಧ್ರ, ಕೇರಳ, ಗೋವಾ, ಮಹಾರಾಷ್ಟ್ರದ ಮಳೆ ಪ್ರದೇಶಗಳಲ್ಲಿ ತಿರುಗಾಡುವ ಉತ್ಸಾಹ ಹಾಗೂ ಚೈತನ್ಯ ಇದ್ದರೆ ಈ ಬಾರಿಯ ಮುಂಗಾರು ನೆನಪಿನಲ್ಲಿ ಉಳಿಯುವಂತೆ ಮಾಡಿಕೊಳ್ಳಬಹುದು. ನಿಮಗೆ ಗೊತ್ತಿರುವ ಮುಂಗಾರು ಮಳೆ ವೇಳೆ ತೆರಳಬಹುದಾದ ಸ್ಥಳಗಳಿದ್ದರೆ ಹಂಚಿಕೊಳ್ಳಿ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications