Get Updates
Get notified of breaking news, exclusive insights, and must-see stories!

ಹಾಸನ ಟಿಕೆಟ್‌ ಫೈಟ್:‌ ಹಾಸನ ಕುರಿತು ದೇವೇ​ಗೌ​ಡರ ತೀರ್ಮಾ​ನವೇ ಅಂತಿಮ : ನಿಖಿಲ್‌ ಕುಮಾ​ರ​ಸ್ವಾಮಿ

ರಾಮನಗರ,ಏಪ್ರಿಲ್‌ 5: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಚುನಾವಣಾ ಘೋಷಣೆ ಮೊದಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್‌ ನಾಯಕರಿಗೆ ಹಾಸನ ಕ್ಷೇತ್ರವೇ ಕಗ್ಗಂಟಾಗಿದೆ.

ಈ ಕುರಿತು ರಾಮನಗರದಲ್ಲಿ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಮಾತನಾಡಿ, ಹಾಸನ ವಿಧಾ​ನ​ಸಭಾ ಕ್ಷೇತ್ರ ಜೆಡಿ​ಎಸ್‌ ಟಿಕೆಟ್‌ ವಿಚಾ​ರ​ದಲ್ಲಿ ಪಕ್ಷದ ವರಿ​ಷ್ಠ​ರಾದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇ​ಗೌ​ಡರು ತೆಗೆ​ದು​ಕೊ​ಳ್ಳುವ ತೀರ್ಮಾ​ನವೇ ಅಂತಿಮ ಎಂದು ಹೇಳಿದ್ದಾರೆ.

HD Devegowda himself will decide on haasan says Nikhil Kumaraswamy

ಈಗಾಗಲೇ ಈ ಕುರಿತು ಚರ್ಚೆ ನಡೆಸಿದ್ದು, ಹಾಸನ ಕ್ಷೇತ್ರ ಜನರ ನಾಡಿ​ಮಿ​ಡಿತ ಹಾಗೂ ಪಕ್ಷದ ಮುಖಂಡರು, ಕಾರ್ಯ​ಕ​ರ್ತರ ಅಭಿ​ಪ್ರಾಯ ಸಂಗ್ರ​ಹಿಸಿ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾ​ರ​ಸ್ವಾಮಿ, ಪಕ್ಷದ ರಾಜ್ಯಾ​ಧ್ಯಕ್ಷ ಇಬ್ರಾಹಿಂ, ಮಾಜಿ ಸಚಿವ ಎಚ್‌.ಡಿ.​ರೇ​ವಣ್ಣ ಅವ​ರೊಂದಿಗೆ ಚರ್ಚಿಸಿ ಒಂದೆ​ರಡು ದಿನ​ಗ​ಳಲ್ಲಿ ದೇವೇ​ಗೌ​ಡ ಅವರೇ ಅಂತಿಮ ತೀರ್ಮಾನ ತೆಗೆ​ದು​ಕೊ​ಳ್ಳು​ತ್ತಾರೆ ಎಂದು ಸ್ಪಷ್ಟ ಪಡಿಸಿದರು.

ಜೆಡಿ​ಎಸ್‌ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ರುವ ಸ್ವರೂಪ್‌ ಪಕ್ಷ​ದಲ್ಲಿ ಸಕ್ರಿ​ಯ​ರಾ​ಗಿ​ದ್ದಾರೆ. ಅವರ ತಂದೆ ನಾಲ್ಕು ಬಾರಿ ಶಾಸ​ಕ​ರಾ​ಗಿ​ದ್ದವರು. ಇನ್ನು ನಮ್ಮ ಕುಟುಂಬವೂ ಹಾಸನದ ಅಭಿ​ವೃದ್ಧಿ ವಿಚಾ​ರ​ದಲ್ಲಿ ಪ್ರಮುಖ ಪಾತ್ರ ವಹಿ​ಸಿದೆ. ಸ್ವರೂಪ್‌ ಅಭಿ​ಮಾ​ನಿ​ಗಳು ಅವ​ರಿಗೆ ಟಿಕೆಟ್‌ ನೀಡ​ಬೇ​ಕೆಂದು ಕೇಳು​ತ್ತಿ​ದ್ದಾರೆ. ಏನೇ ಆಗಲಿ ಅಂತಿ​ಮ​ವಾಗಿ ದೇವೇ​ಗೌ​ಡರು ನಿರ್ಧಾರ ಮಾಡು​ತ್ತಾ​ರೆ ಎಂದು ಹೇಳಿ​ದ​ರು.

ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರಚಾರವನ್ನ ನಡೆಸುತ್ತಿದ್ದಾರೆ. ಹಾಸನ ಕ್ಷೇತ್ರ ಟಿಕೆಟ್‌ ವಿಚಾ​ರ​ವನ್ನು ದೊಡ್ಡ ಮಟ್ಟ​ದಲ್ಲಿ ಬಿಂಬಿ​ಸುವ ಅಗ​ತ್ಯ​ವಿಲ್ಲ. ನಾವೆಲ್ಲ ಪ್ರಜಾ​ಪ್ರ​ಭುತ್ವ ವ್ಯವ​ಸ್ಥೆ​ಯ​ಲ್ಲಿ​ದ್ದೇವೆ. ಪ್ರತಿ​ಯೊಬ್ಬ ರಾಜ​ಕಾ​ರ​ಣಿಗೂ ಜನ ಸೇವೆ ಮಾಡುವ ಆಸೆ ಇರು​ತ್ತದೆ. ಜನ ಸೇವೆ ಮಾಡಲು ರಾಜ​ಕಾ​ರಣ ವೇದಿಕೆ​ಯಾ​ಗಿದೆ ಎಂದು ಹೇಳಿದರು.

HD Devegowda himself will decide on haasan says Nikhil Kumaraswamy

ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಕುರಿತು ಮಾತನಾಡಿ, ಶಾಸಕಿ ಅನಿತಾ ಕುಮಾ​ರ​ಸ್ವಾಮಿಯವರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ ಮಧುಗಿರಿ ಹಾಗೂ ರಾಮನಗರ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ರಾಮನಗರದಿಂದ ಸ್ಪರ್ಧೆಗೆ ನನಗೂ ಒತ್ತಡ ಇತ್ತು. ಆಗ ನಾನು ಸಿನಿಮಾದಲ್ಲಿ ಬ್ಯುಸಿ ಆಗಿದ್ದೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ಅನಿ​ತಾ ಕುಮಾರಸ್ವಾಮಿ ಅ​ವರು ಸ್ಪರ್ಧೆ ಮಾಡಿ ಗೆಲುವು ಸಾಧಿ​ಸಿ​ದರು.

ರಾಮನಗರ ಕ್ಷೇತ್ರದಲ್ಲಿ ಶಾಸಕಿ ಅನಿ​ತಾ ಕುಮಾರಸ್ವಾಮಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅನಿತಾ ಅವರು ಟಿಕೆಟ್‌ ಆಕಾಂಕ್ಷಿಗಳಲ್ಲ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯೂ ಇಲ್ಲ. ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿವೆ. ಈ ಕುರಿತು ಅಂತಿಮ ತಿರ್ಮಾನವನ್ನ ವರಿಷ್ಠರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ನಮ್ಮ ಪಕ್ಷವನ್ನ ಉಳಿಸಿ, ಬೆಳೆಸಿಕೊಳ್ಳಬೇಕಾಗಿದೆ. ಜೆಡಿಎಸ್‌ ಪಕ್ಷವನ್ನ ದೇವೇಗೌಡರು ಕಟ್ಟಿ ಬೆಳೆಸಿದ್ದಾರೆ. ಮೊದಲಿನಿಂದಲೂ ಜೆಡಿಎಸ್‌ ಪಕ್ಷ ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಪಕ್ಷವಾಗಿದೆ.
ಆ ಪಕ್ಷ​ವನ್ನು ಉಳಿಸಿಕೊಳ್ಳಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿ​ದ್ದೇವೆ. ಪಕ್ಷ ಹೇಳಿದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದರು.

‌ ಏಪ್ರಿಲ್‌ 13ರಂದು ನಾಮ​ಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ​ವಾ​ಗು​ತ್ತದೆ. ನಾಳೆ ನಾಳಿದ್ದು ಅಧಿ​ಕೃತ ಪಟ್ಟಿಬಿಡು​ಗಡೆ ಆಗ​ಲಿದೆ. ಮೂರನೇ ಪಟ್ಟಿ ಇರುವ ಬಗ್ಗೆ ಗೊತ್ತಿಲ್ಲ. ಆಕಾಂಕ್ಷಿ​ಗಳು ಹೆಚ್ಚಾ​ಗಿ​ದ್ದಾಗ ಪ್ರತಿ​ಯೊ​ಬ್ಬ​ರನ್ನು ವಿಶ್ವಾ​ಸಕ್ಕೆ ಪಡೆದು ಪಟ್ಟಿ ಬಿಡು​ಗಡೆ ಮಾಡು​ವುದು ಅನಿ​ವಾರ್ಯ. ಮೂರನೇ ಪಟ್ಟಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ತಿಳಿ​ಸಿ​ದ​ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+