ಡಿಸಿಎಂ ಗೋವಿಂದ ಕಾರಜೋಳರ 'ಚಿನ್ನ'ದಂತಹ ತೀರ್ಮಾನ!

ಬೆಂಗಳೂರು, ನವೆಂಬರ್ 25: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ತೀರ್ಮಾನದಿಂದಾಗಿ ರಾಜ್ಯದ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ. ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಗೋವಿಂದ ಕಾರಜೋಳ ಅವರು ಈ ಕುರಿತು ಮಾತನಾಡಿದರು. ತವರು ಗ್ರಾಮದ ಜನರು ಪ್ರೀತಿಯಿಂದ ಸನ್ಮಾನಿಸಿ ನೀಡಿದ ಏಳು ತೊಲ ತೂಕದ ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುತ್ತೇನೆ ಎಂದರು.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳರಿಗೆ ಚಿನ್ನದ ಕಿರೀಟ ತೊಡಿಸಿ ಸನ್ಮಾನ ಮಾಡಲಾಗಿತ್ತು. "ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುವೆ. ಮುಖ್ಯಮಂತ್ರಿಗಳು ಅದನ್ನು ಸ್ವೀಕರಿಸಬೇಕು" ಎಂದು ಯಡಿಯೂರಪ್ಪ ಸಮ್ಮುಖದಲ್ಲಿಯೇ ಘೋಷಿಸಿದರು.

Govid Karajol To Hand Over Golden Crown To Government

"ಜನದಿಂದ ಬಂದ ಸನ್ಮಾನ ಜನರಿಗೆ ಬಳಕೆಯಾಗಬೇಕು ಎಂಬುದು ನನ್ನ ಇಚ್ಛೆ" ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಉಪ ಮುಖ್ಯಮಂತ್ರಿಗಳ ಘೋಷಣೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಗೋವಿಂದ ಕಾರಜೋಳ ಅವರ ಜೊತೆ ಮಾಜಿ ಸಚಿವ ಎಂ. ಬಿ. ಪಾಟೀಲ್, ಶಿವಾನಂದ ಪಾಟೀಲ್ ಅವರಿಗೆ ಸಹ ಚಿನ್ನದ ಕಿರೀಟ ತೊಡಿಸಿ ಗ್ರಾಮಸ್ಥರು ಸನ್ಮಾನ ಮಾಡಿದ್ದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ನೇಹಿತರು ಉಡುಗೊರೆ ನೀಡಿದ ವಜ್ರ ಖಚಿತ ಹ್ಯುಬ್ಲೋಟ್ ವಾಚ್‌ ಅನ್ನು ವಿಧಾನಸಭೆ ಅಧಿವೇಶದನದಲ್ಲಿಯೇ ಸರ್ಕಾರಕ್ಕೆ ನೀಡಿದ್ದನ್ನು ನೆನಪು ಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+