ಪ್ರವಾಹ ಪೀಡಿತ ಜಿಲ್ಲೆ ಜನರಿಗಾಗಿ ತುರ್ತು ಸಹಾಯವಾಣಿ
ಬೆಂಗಳೂರು, ಆಗಸ್ಟ್ 07: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾಯ ಮಟ್ಟ ಮೀರಿ ಮಳೆ ಆಗುತ್ತಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ, ಜನರು ಪರದಾಡುವಂತಾಗಿದೆ. ಸಂಕಷ್ಟದಲ್ಲಿರುವರಿಗಾಗಿ ಸರ್ಕಾರವು ತುರ್ತು ಸಹಾಯವಾಣಿಯನ್ನು ಆರಂಭಿಸಿದೆ.
ಮಳೆಯಿಂದಾಗಿ ಹಲವಾರು ಕುಟುಂಬಗಳು ಈಗಾಗಲೇ ನೆಲೆ ಕಳೆದುಕೊಂಡಿದ್ದು, ವಸತಿ ಕೇಂದ್ರಗಳಲ್ಲಿ ಆಶ್ರಯಪಡೆದಿದ್ದಾರೆ. ಮಳೆಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವವರ ಸಹಾಯಕ್ಕೆಂದು ಎಲ್ಲಾ ಮಳೆ ಪೀಡಿತ ಜಿಲ್ಲೆಗಳಲ್ಲಿ ಸರ್ಕಾರವು ತುರ್ತು ಸಹಾಯಕೇಂದ್ರಗಳನ್ನು ಸ್ಥಾಪಿಸಿದೆ.
ಅಪಾಯದಲ್ಲಿ ಸಿಲುಕಿದವರು, ಮಳೆಯ ಮಾಹಿತಿ ಪಡೆಯಲಿಚ್ಛಿಸುವವರು, ವಸತಿ ಕೇಂದ್ರಗಳ ಮಾಹಿತಿ, ರಸ್ತೆ ಸ್ಥಿತಿಯ ಮಾಹಿತಿ ಇನ್ನಿತರ ಯಾವುದೇ ಮಳೆ ಸಂಬಂಧಿ ಮಾಹಿತಿ ಪಡೆಯಲು ತುರ್ತು ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಬಹುದಾಗಿದ್ದು, ದೂರವಾಣಿ ಸಂಖ್ಯೆಗಳು ಇಂತಿವೆ.

ಬೆಳಗಾವಿ ಜಿಲ್ಲೆ ಸಹಾಯವಾಣಿ ಸಂಖ್ಯೆ 0831-2407290, ವಿಜಯಪುರ ಜಿಲ್ಲೆ ಸಹಾಯವಾಣಿ ಸಂಖ್ಯೆ 08352-221261, ರಾಯಚೂರು ಜಿಲ್ಲೆ ಸಹಾಯವಾಣಿ ಸಂಖ್ಯೆ 08532-226383, ಬಾಗಲಕೋಟೆ ಜಿಲ್ಲೆ ಸಹಾಯವಾಣಿ ಸಂಖ್ಯೆ 08354-236240, ಯಾದಗಿರಿ ಜಿಲ್ಲೆ ಸಹಾಯವಾಣಿ ಸಂಖ್ಯೆ 08473-253771, ಶಿವಮೊಗ್ಗ ಜಿಲ್ಲೆ ಸಹಾಯವಾಣಿ ಸಂಖ್ಯೆ 08182-271101, 08182-267226.
ದಕ್ಷಿಣ ಕನ್ನಡ ಜಿಲ್ಲೆ ಸಹಾಯವಾಣಿ ಸಂಖ್ಯೆ 0824-2442590, ಉಡುಪಿ ಜಿಲ್ಲೆ ಸಹಾಯವಾಣಿ ಸಂಖ್ಯೆ 0820-2574802, ಉತ್ತರ ಕನ್ನಡ ಜಿಲ್ಲೆ ಸಹಾಯವಾಣಿ ಸಂಖ್ಯೆ 08382-229857, ಕೊಡಗು ಜಿಲ್ಲೆ ಸಹಾಯವಾಣಿ ಸಂಖ್ಯೆ 08272-221077, ಹಾಸನ ಜಿಲ್ಲೆ ಸಹಾಯವಾಣಿ ಸಂಖ್ಯೆ 08172-261111, ಚಿಕ್ಕಮಗಳೂರು ಜಿಲ್ಲೆ ಸಹಾಯವಾಣಿ ಸಂಖ್ಯೆ 08262-238950.
ರಾಜ್ಯಮಟ್ಟದಲ್ಲಿ ಪ್ರತ್ಯೇಕ ತುರ್ತು ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದು ಅದರ ದೂರವಾಣಿ ಸಂಖ್ಯೆ 080-1070, 080-22340676 ಆಗಿದೆ. ವಾಟ್ಸ್ಆಫ್ ಸಂಖ್ಯೆ 9008405955 ಆಗಿದೆ.
ರಾಜ್ಯ ಪ್ರವಾಹ ಪರಿಸ್ಥಿತಿ ಸಹಾಯವಾಣಿ ಕೇಂದ್ರದ ದೂರವಾಣೀ ಸಂಖ್ಯೆ 080-25573333 ಆಗಿದೆ. ವಾಟ್ಸ್ಆಫ್ ಸಂಖ್ಯೆ 9513749080 ಆಗಿದೆ.












Click it and Unblock the Notifications