Tungabhadra Dam: ರಾಜ್ಯದ ಎಲ್ಲ ಜಲಾಶಯಗಳ ಸ್ಥಿತಿಗತಿ ಪರಿಶೀಲನೆಗೆ ತಜ್ಞರ ಸಮಿತಿ ರಚನೆ
ಬೆಂಗಳೂರು, ಆಗಸ್ಟ್ 13: ಕರ್ನಾಟಕದ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯವಾದ ತುಂಗಭದ್ರಾ ಡ್ಯಾಂ (Tungabhadra Dam) ಗೇಟೊಂದು ಕೊಚ್ಚಿ ಹೋದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಲಾಶಯಗಳ ಪರಿಶೀಲನೆಗೆ ಮುಂದಾಗಿದೆ. ಈ ಸಂಬಂಧ ತಜ್ಞರನ್ನು ಒಳಗೊಂಡ 'ಅಣೆಕಟ್ಟುಗಳ ಸುರಕ್ಷತಾ ಸಮಿತಿ' ರಚನೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅಧಿಕಾರಿಗಳು ತಜ್ಞರು ಈ ಸಮಿತಿಯಲ್ಲಿ ಇರಲಿದ್ದು, ಅವರೆರು ಶೀಘ್ರವೇ ವಿವಿಧ ಡ್ಯಾಂಗಳ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಸುರಕ್ಷತೆ ತಪಾಸಣೆ ಮಾಡಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

ನಿರಂತರ ಮಳೆಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಅದರ ಕ್ರಸ್ಟ್ ಕಿತ್ತು ಹೋಗಿದ್ದು, ಗೇಟ್ ತಯಾರಿ ಕಾರ್ಯ ಆರಂಭಿಸಲಾಗಿದೆ. ಸದ್ಯ ತುಂಗಭದ್ರಾ ಅಣೆಕಟ್ಟಿನ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಇದರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ಇತರ ಅಣೆಕಟ್ಟುಗಳನ್ನು ಪರಿಶೀಲಿಸುವ ಕಾರ್ಯ ಸಹ ಮಾಡಲಾಗುವುದು ಎಂದು ಹೇಳಿದರು.
52ಟಿಎಂಸಿ ನೀರು ಬಿಟ್ಟು ಗೇಟ್ ಫಿಟ್
ಇನ್ನೂ ತುಂಗಭದ್ರಾ ಡ್ಯಾಂ ಗೇಟ್ ತಯಾರಿಸಲಾಗುತ್ತಿದೆ. ಜಿಂದಾಲ್ ಕಂಪನಿಯಿಂದ ಅಗತ್ಯ ಕಬ್ಬಿಣ ಕೇಳಿದ್ದೇವೆ. 19ನೇ ತುಂಡಾಗಿರುವುದಿಂದ ಈ ದ್ವಾರದಿಂದ ನೀರಿನ ರಭಸ ಹೆಚ್ಚಾಗಿದೆ. ಮರಳಿ ಗೇಟ್ ಕೂರಿಸಲು ಡ್ಯಾಂನಲ್ಲಿ 52ಟಿಎಂಸಿ ನೀರು ಹೊರ ಬೀಡಬೇಕಿದೆ. ಈ ಸಂಬಂಧ ತಜ್ಞರು ಅನುಮತಿ ನೀಡಿದ್ದಾರೆ
ಡ್ಯಾಂಗೆ 05 ತಾತ್ಕಾಲಿಕ ಗೇಟ್ ತಯಾರಿ ಕೆಲಸ
ಅಲ್ಲದೇ ಟಿಬಿ ಡ್ಯಾಂ 48 ಟನ್ ತೂಕ್ ಹೊಂದಿದ್ದ ಗೇಟ್ ಆಗಿತ್ತು. ಸದ್ಯ ಅಷ್ಟು ದೊಡ್ಡ ಪ್ರಮಾಣದ ಗೇಟ್ ಕೂರಿಸಲು ಮಳೆಗಾಲದಲ್ಲಿ ಅಸಾಧ್ಯವಾಗಿದೆ. ಅಷ್ಟೇ ತೂಕದ ಗೇಟ್ ತಯಾರಿಸಿ ಕೂರಿಸಲು ಒಂದಷ್ಟು ತಾಂತ್ರಿಕ ಸವಾಲುಗಳು ಎದುರಾಗುತ್ತವೆ. ಒಂದು ವೇಳೆ ಕೂರಿಸಲು ಮುಂದಾದರೆ ಡ್ಯಾಂ ಇತರ ಗೇಟ್ಗಳಿಗೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.

ಹೀಗಾಗಿಯ ರಾಜ್ಯ ಸರ್ಕಾರ ಎಲ್ಲ ಅರಿತುಕೊಂಡು, ತಜ್ಞರ ಜೊತೆಗೆ ಚರ್ಚಿಸಿ 05 ಹೊಸ ತಾತ್ಕಾಲಿಕ ಗೇಟ್ ನಿರ್ಮಿಸುತ್ತಿದೆ. ಇವುಗಳನ್ನು ಈಗ ಅಳವಡಿಸಿ ನೀರು ಪೋಲಾಗದಂತೆ ತಡೆಯುತ್ತೇವೆ. ಬೇಸಿಗೆ ವೇಳೆ ನೀರಿಲ್ಲದ್ದನ್ನು ನೋಡಿಕೊಂಡು ಸೂಕ್ತ ಗಾತ್ರ, ತೂಕದ ಗೇಟ್ ಅಳವಡಿಸಲಾಗುವುದು ಎಂದು ಡಿಸಿಎಂ ವಿವರಿಸಿದರು.
ಅಪಾರ ಪ್ರಮಾಣದಲ್ಲಿ ಡ್ಯಾಂ ನೀರು ಹೊರಕ್ಕೆ
ಸದ್ಯ ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಕೊಪ್ಪಳ, ಹೊಸಪೇಟೆ, ವಿಜಯನಗರ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ವಿವಿಧೆಡೆ ಹಳೆಯ ನದಿ ಮೇಲ್ಸೇತುವೆಗಳ ಮೇಲೆ ವಾಹನ, ಜನ ಸಂಚಾರ ರದ್ದುಗೊಳಿಸಳಾಗಿದೆ. ಅಗತ್ಯ ಸುರಕ್ಷತೆ ಕೈಗೊಳ್ಳುವಂತೆ ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications