Get Updates
Get notified of breaking news, exclusive insights, and must-see stories!

ಮುಜರಾಯಿ ದೇವಾಲಯಗಳ ಅರ್ಚಕರಿಗೆ ಸಿಹಿಸುದ್ದಿ

ಬೆಂಗಳೂರು, ಆಗಸ್ಟ್ 06; ಮುಜರಾಯಿ ಇಲಾಖೆಯ 'ಸಿ' ವರ್ಗದ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು 'ಎ' ವರ್ಗದ ದೇವಾಲಯಗಳಲ್ಲಿ ವಿಶೇಷ ದರ್ಶನ, ವಸತಿ ವ್ಯವಸ್ಥೆ ಪಡೆಯಲು ಅನುಕೂಲವಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಕರ್ನಾಟಕ ಸರ್ಕಾರದ ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಈ ಕುರಿತು ಸುತ್ತೋಲೆ ಪ್ರಕಟಿಸಿದೆ. ಇದು ಕರ್ನಾಟಕ ರಾಜ್ಯದ 'ಸಿ' ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು 'ಎ' ವರ್ಗದ ದೇವಾಲಯಗಳಲ್ಲಿ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

siddaramaiah

ಈ ಸುತ್ತೋಲೆಗೆ ಶ್ರೀವತ್ಸ, ರಾಜ್ಯಾಧ್ಯಕರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ (ರಿ), ಬೆಂಗಳೂರು ಇವರ ಪತ್ರವನ್ನು ಉಲ್ಲೇಖ ಮಾಡಲಾಗಿದೆ.

ಸುತ್ತೋಲೆಯ ವಿವರಗಳು; ಪ್ರವರ್ಗ 'ಸಿ' ವರ್ಗಗಳ ಅರ್ಚಕರು, ಕುಟುಂಬದವರು ದೇವಾಲಯಗಳಿಗೆ ಭೇಟಿ ನೀಡಿದಾಗ ಶೀಘ್ರ ದರ್ಶನಕ್ಕೆ ಹಾಗೂ ವಸತಿ ಸೌಲಭ್ಯ ಇದ್ದರೆ 'ಸಿ' ವರ್ಗಗಳ ಅರ್ಚಕರಿಗೆ ಅನುಕೂಲ ಕಲ್ಪಿಸಲು ಎಲ್ಲಾ ಪವರ್ಗ 'ಎ' ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಆದೇಶ ಮಾಡಬೇಕೆಂದು ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಕೋರಿತ್ತು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಳಪಡುವ ಪವರ್ಗ 'ಸಿ' ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇವಾಲಯದ ಅರ್ಚಕರಿಗೆ ಏಕರೂಪದ ಗುರುತಿನ ಚೀಟಿಯನ್ನು ನೀಡುವ ಸಲುವಾಗಿ ಈ ಕೂಡಾ ಲಗತ್ತಿಸಿರುವ, ನಮೂನೆಯಂತೆ ಜಿಲ್ಲಾವಾರು, ತಾಲ್ಲೂಕುವಾರು ಕೋಡನ್ನು ನೀಡಲಾಗಿದೆ.

ಆಯಾ ಜಿಲ್ಲಾ ಮತ್ತು ತಾಲೂಕುಗಳಿಗೆ ನೀಡಲಾದ ಕೋಡನ್ನು ಬಳಸಿ, ಗುಲಾಬಿ ಬಣ್ಣದ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಅಪರ ಜಿಲ್ಲಾಧಿಕಾರಿಯ ಸಹಿಯೊಂದಿಗೆ ತಾಲ್ಲೂಕುವಾರು ಪ್ರತಿಯೊಬ್ಬ ಅರ್ಚಕರಿಗೆ ಕೂಡಲೇ ವಿತರಿಸಲು ಹಾಗೂ ವಿತರಿಸಿದ ಬಗೆ, ಕಛೇರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಮಾದರಿ ಗುರುತಿನ ಚೀಟಿ; ಸುತ್ತೋಲೆಯಲ್ಲಿ ಗುರುತಿನ ಚೀಟಿಯಲ್ಲಿ ಇರಬೇಕಾದ ಅಂಶಗಳ ಕುರಿತು ಸಹ ಮಾಹಿತಿ ನೀಡಲಾಗಿದೆ.

ಗುರುತಿನ ಚೀಟಿ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಗುರುತಿನ ಚೀಟಿ ಎಂಬ ತಲೆ ಬರಹ ಹೊಂದಿರುತ್ತದೆ.

ನಂ. BN/SO....01, ಅರ್ಚಕರ ಹೆಸರು ಶ್ರೀ.... ದೇವಾಸ್ಥಾನದ ಹೆಸರು....
ಗ್ರಾಮ....... ಹೋಬಳಿ..... ತಾಲೂಕು.... ಜಿಲ್ಲೆ.... ರಕ್ತದ ಗುಂಪು... ಎಂಬ ವಿವರವನ್ನು ಒಳಗೊಂಡಿದ್ದು, ಅಪರ ಜಿಲ್ಲಾಧಿಕಾರಿಗಳ ಸಹಿ ಇರುತ್ತದೆ.

ಮುಜರಾಯಿ ಇಲಾಖೆಯು ತನ್ನ ದೇವಾಲಯಗಳಲ್ಲಿ ವಾರ್ಷಿಕ ಆದಾಯದ ಆಧಾರದ ಮೇಲೆ ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿದೆ. 'ಸಿ' ವರ್ಗದ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು 'ಎ' ವರ್ಗದ ದೇವಾಲಯಗಳಲ್ಲಿ ವಿಶೇಷ ದರ್ಶನ, ವಸತಿ ವ್ಯವಸ್ಥೆ ಪಡೆಯಲು ಈ ಸುತ್ತೋಲೆ ಪ್ರಕಟಿಸಲಾಗಿದೆ.

ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ಕೆಲವು ದಿನಗಳ ಹಿಂದೆ ಇಲಾಖೆ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ದೇವಾಲಯಗಳಿಗೆ ಬರುವ ಭಕ್ತರು ದೇವಾಲಯದ ಆವರಣದ ಒಳಗೆ ಮೊಬೈಲ್ ಬಳಕೆ ಮಾಡುವುದು, ಅದರ ಶಬ್ದದಿಂದ ದೇಗುಲದ ಸಿಬ್ಬಂದಿ ಹಾಗೂ ಭಕ್ತರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+