ಸೋಂದಾ ವಾದಿರಾಜ ಗುರುಗಳಿಗೆ ಸಾಲಿಗ್ರಾಮ ಹಾರ ಸಮರ್ಪಣೆ
ಶಿರಸಿ, ಮಾ 7: ಉತ್ತರಕನ್ನಡ ಜಿಲ್ಲೆ ಶಿರಸಿ ಬಳಿಯ ಪುಣ್ಯಕ್ಷೇತ್ರ ಸೋಂದಾ (ಸೋದೆ) ದಲ್ಲಿರುವ ಶ್ರೀವಾದಿರಾಜ ಗುರುಗಳ ಮೂಲ ವೃಂದಾವನಕ್ಕೆ 108 ಸಾಲಿಗ್ರಾಮಗಳನ್ನು ಹೊಂದಿರುವ ಚಿನ್ನದ ಹಾರ ಸಮರ್ಪಣೆಯಾಗಲಿದೆ,
ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಈ ಹಾರವನ್ನು ಇದೇ ಭಾನುವಾರ (ಮಾ 8) ವಾದಿರಾಜ ಗುರುಗಳ ಆರಾಧನ ಮಹೋತ್ಸವದ ಸಂದರ್ಭದಲ್ಲಿ ಗುರುಗಳಿಗೆ ಸಮರ್ಪಿಸಲಾಗುತ್ತದೆ.

ಉಡುಪಿ ಪೇಜಾವರ ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು, ಪಲಿಮಾರು ಮತ್ತು ಅದಮಾರು ಕಿರಿಯ ಶ್ರೀಗಳ ಸಮ್ಮುಖದಲ್ಲಿ ಸೋದೆ ಮಠದ ಶ್ರೀಗಳಾದ ಶ್ರೀವಿಶ್ವವಲ್ಲಭತೀರ್ಥರು ಗುರುಗಳ ವೃಂದಾವನಕ್ಕೆ ಸಮರ್ಪಣೆ ಮಾಡಲಿದ್ದಾರೆ.
ನೆಲ್ಲಿಕಾಯಿಯಿಂದ ಲಿಂಬೆಹಣ್ಣಿನ ಗಾತ್ರದ ವರೆಗಿನ ಸಾಲಿಗ್ರಾಮಗಳ ಮೂಲಕ ಈ ಹಾರ ಸಿದ್ದಪಡಿಸಲಾಗಿದೆ. ಮಂಗಳೂರಿನ ಎಸ್ ಎಲ್ ಶೇಟ್ ಮತ್ತು ತಂಡದವರ ಮಾರ್ಗದರ್ಶನದಲ್ಲಿ, ಎರಡು ತಿಂಗಳ ಸತತ ಪರಿಶ್ರಮದಿಂದ ಈ ಹಾರ ಸಿದ್ದಗೊಂಡಿದೆ.
ಬೆಂಗಳೂರಿನ ಉದ್ಯಮಿ ಸೂರ್ಯನಾರಾಯಣ ಅಡಿಗ ಅವರು ಹಾರದ ಖರ್ಚನ್ನು ಭರಿಸಿದ್ದು, ಇದಕ್ಕೆ ಸುಮಾರು ಎರಡು ಕೆಜಿಯಷ್ಟು ಚಿನ್ನವನ್ನು ಬಳಸಲಾಗಿದೆ. ಸೋದೆ ವಿಶ್ವವಲ್ಲಭ ಶ್ರೀಗಳು ನೇಪಾಳದ ಗಂಡಕಿ ನದಿ ತಟದಿಂದ ಈ ಸಾಲಿಗ್ರಾಮಗಳನ್ನು ತಂದಿದ್ದಾರೆ.
ರಮಾ ತ್ರಿವಿಕ್ರಮ ದೇವರ ಉತ್ಸವ ಮತ್ತು ಗುರುಗಳ ಆರಾಧನೆಯ ಈ ಸಮಯದಲ್ಲಿ ಚೆನ್ನೈನ ಹೋಟೆಲ್ ಉದ್ಯಮಿ ಬಾಲೂ ಭಟ್ ಶ್ವೇತವರ್ಣದ ಕುದುರೆಯನ್ನು ಮಠಕ್ಕೆ ದಾನವಾಗಿ ನೀಡಿದ್ದಾರೆ.

ಬುಧವಾರದಂದು (ಮಾ 4) ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ದಿವಾನರಾದ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ, ಹೆರ್ಗ ವೇದವ್ಯಾಸ ಭಟ್ ಅವರಿಂದ, ಶ್ರೀ ವಾದಿರಾಜ ಗುರುಸಾರ್ವಭೌಮರಿಗೆ ಪ್ರಿಯರಾದ ಮತ್ತು ಕ್ಷೇತ್ರದ ಕ್ಷೇತ್ರಪಾಲ ಶ್ರೀ ಭೂತರಾಜರ ವಿಶೇಷ ಪೂಜೆ ಹಾಗು ದಂಡೆಬಲಿ ಉತ್ಸವ ವೈಭವದಿಂದ ಸಂಪನ್ನಗೊಂಡಿದೆ.
ಉತ್ಸವದ ಪರ್ವಕಾಲದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರು, ರಮಾತ್ರಿವಿಕ್ರಮ ದೇವರ, ವಾದಿರಾಜ ಗುರುಗಳ ಮತ್ತು ಭೂತರಾಜರ ದರ್ಶನವನ್ನು ಪಡೆದರು. (ಚಿತ್ರಕೃಪೆ: ಮಧ್ವೇಶ್ ತಂತ್ರಿ)
-
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications