ಕೈ ಮುಗೀತೀನಿ ಮಗನ ಬಗ್ಗೆ ಕೇಳ್ಬೇಡಿ: ಅಂಗಲಾಚಿದ ಪರಶುರಾಮ್ ತಂದೆ
ಬೆಂಗಳೂರು, ಜೂನ್ 16: ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ತಂದೆ ಅಶೋಕ ವಾಘ್ಮೋರೆ ಇಂದು ತಮ್ಮನ್ನು ಪ್ರಶ್ನಿಸಲು ಬಂಧ ಮಾಧ್ಯಮದವರನ್ನು ಧೈನ್ಯದಿಂದ ಬೇಡಿಕೊಂಡರು.
'ನಿಮ್ಮ ಕೈ ಮುಗಿಯುತ್ತೇನೆ ಮಗನ ಬಗ್ಗೆ ಏನೂ ಕೇಳಬೇಡಿ, ನಾನು ಈಗಾಗಲೇ ಬಹಳ ನೊಂದಿದ್ದೇನೆ, ನೀವು ಪ್ರಶ್ನೆ ಕೇಳಿ ಇನ್ನೂ ನೋಯಿಸಬೇಡಿ' ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದು ಬೇಡಿಕೊಂಡರು.
ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ಆರೋಪಿ ಪರಶುರಾಮ ವಾಘ್ಮೋರೆ ಪೋಷಕರು ಹಾಗೂ ವಿಜಯಪುರ ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ರಾಕೇಶ್ ಮಠ ಅವರನ್ನು ವಿಚಾರಣೆಗೆಂದು ಎಸ್ಐಟಿಯು ಬೆಂಗಳೂರಿಗೆ ಕರೆಸಿಕೊಂಡಿತು.
ಅದಾಗಲೇ ತೀವ್ರ ಆಘಾತದಲ್ಲಿದ್ದ ಹಾಗೂ ನೊಂದಿದ್ದ ಪರಶುರಾಮ್ ವಾಘ್ಮೋರೆಯ ಪೋಷಕರನ್ನು ಬೇಗನೆ ವಿಚಾರಣೆ ಮುಗಿಸಿ ಹೊರಗೆ ಬಿಟ್ಟ ಎಸ್ಐಟಿ ಸದಸ್ಯರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠ ಅವರನ್ನು ಮಾತ್ರ ಸತತವಾಗಿ 5 ಗಂಟೆ ವಿಚಾರಣೆ ನಡೆಸುತ್ತಲೇ ಇದ್ದಾರೆ.
ಎಸ್ಐಟಿ ಬಂಧಿಸಿರುವ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಏನು?
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠ ನಿನ್ನೆ ಫೇಸ್ಬುಕ್ನಲ್ಲಿ ಪರಶುರಾಮ್ ವಾಘ್ಮೋರೆಯ ಚಿತ್ರ ಹಾಕಿ ಹಣ ಸಹಾಯಕ್ಕೆ ಮನವಿ ಮಾಡಿದ್ದ ಹಾಗಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ತಮ್ಮ ಮಗನಿಗೆ ಆದ ಗತಿಯಿಂದ ತೀವ್ರವಾಗಿ ಕುಗ್ಗಿಹೋಗಿರುವ ಆರೋಪಿ ಪರಶುರಾಮ ಅವರ ಪೋಷಕರು ಇಂದು ಸಿಬಿಐ ಕೇಂದ್ರದ ಹೊರಗೆ ಕುಳಿತು ಅಳುತ್ತಿದ್ದರು. ಅವರ ಅವಸ್ಥೆ ನೋಡಿ ಪೊಲೀಸರು, ಮಾಧ್ಯಮದವರು ಮರುಗಿದರು. ಮಗ ಮಾಡಿದ ತಪ್ಪಿಗೆ ಪೋಷಕರು ಹಿಂಸೆ ಅನುಭವಿಸುತ್ತಿದ್ದ ದೃಶ್ಯ ಮನಕಲುಕುತ್ತಿತ್ತು.