ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಸಮಯ ಐವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 19: ಉಪಚುನಾವಣೆ ಮತದಾನ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಐವರು ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಈ ವರ್ಗಾವಣೆಯನ್ನು ಮಾಡಲಾಗಿರುವುದಾಗಿ ಅಧಿಕೃತ ಆದೇಶದಲ್ಲಿ ನಮೂದಿಸಲಾಗಿದೆ. ಕೆಎಎಸ್ ನ ಹಿರಿಯ ಮತ್ತು ಕಿರಿಯ ಶ್ರೇಣಿಯ ಅಧಿಕಾರಿಗಳು ವರ್ಗಾವಣೆ ಪಟ್ಟಿಯಲ್ಲಿದ್ದಾರೆ.

ಉಪಚುನಾವಣೆ ಬಹಿಷ್ಕರಿಸುವುದಾಗಿ ಪೊಲೀಸರಿಂದ ಸಿಎಂ ಗೆ ಪತ್ರಉಪಚುನಾವಣೆ ಬಹಿಷ್ಕರಿಸುವುದಾಗಿ ಪೊಲೀಸರಿಂದ ಸಿಎಂ ಗೆ ಪತ್ರ

ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ಅಶೋಕ್ ದುಡಗುಂಡಿ ಅವರ ಸ್ಥಾನಕ್ಕೆ ಕೆ.ಎ.ಎಸ್ ಅಧಿಕಾರಿ ಸತೀಶ್ ಅವರನ್ನು ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಬೈಲುಹೊಂಗಲ ಉಪವಿಭಾಗಾಧಿಕಾರಿ ಯಲ್ಲಪ್ಪ ಭಜಂತ್ರಿ ಸ್ಥಾನಕ್ಕೆ ಅಭಿಜಿನ್ ಅವರನ್ನು ವರ್ಗ ಮಾಡಲಾಗಿದೆ.

Five KAS Officers Transfer Ahed Of By Elections

ಎಚ್‌.ಜಿ.ಚಂದ್ರಶೇಖರಯ್ಯ ಅವರನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ರವೀಂದ್ರ ಕರಿಲಿಂಗಣ್ಣ್ ಅವರನ್ನು ಹಾವೇರಿ ಜಿಲ್ಲೆಯ ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಬಿ.ಮಲ್ಲಿಕಾರ್ಜುನ ಅವರನ್ನು ಗೋಕಾಕ್ ನಗರಸಭೆ ಪೌರಾಯುಕ್ತರನ್ನಾಗಿ ಮಾಡಲಾಗಿದೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆಗಳನ್ನು ಮಾಡಲಾಗಿದೆಯೆಂದು ಸರ್ಕಾರಿ ಆದೇಶದಲ್ಲಿ ಹೇಳಲಾಗಿದೆ. ಆದೇಶವು ತತಕ್ಷಣದಿಂದ ಜಾರಿಗೆ ಬರಲಿದೆ.

English summary
State government transfers five KAS officers ahed of by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X