ಟಿ.ಜಿ.ಶಿವಶಂಕರೇಗೌಡ ಸೇರಿ ಐವರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದನ್ನೋತಿ
ಬೆಂಗಳೂರು,ಆ.13. ಹೈಕೋರ್ಟ್ನ ಹಾಲಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಸೇರಿ ಐವರು ನ್ಯಾಯಾಂಗ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಪದನ್ನೋತಿ ನೀಡಲಾಗಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸ್ಸಿನಂತೆ ಐವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದಿರುವ ಜಿಲ್ಲಾನ್ಯಾಯಾಧೀಶರೆಂದರೆ, ಅನಿಲ್ ಭೀಮಸೇನ್ ಕಟ್ಟಿ, ಗುರುಸಿದ್ಧಯ್ಯ ಬಸವರಾಜ, ಚಂದ್ರಶೇಖರ್ ಮೃತ್ಯುಂಜಯ ಜೋಷಿ, ಉಮೇಶ್ ಮಂಜುನಾಥ್ ಭಟ್ ಅಡಿಗ ಹಾಗೂ ತಲಕಾಡು ಗಿರಿಗೌಡ ಶಿವಶಂಕರೇಗೌಡ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗುರುಸಿದ್ದಯ್ಯ ಬಸವರಾಜ ಮತ್ತು ರಾಜ್ಯ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿ ಹಾಗೂ ಹಿಂದಿನ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಉಮೇಶ್ ಮಂಜುನಾಥ್ ಭಟ್ ಅಡಿಗ ಅವರನ್ನೂ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.
ನ್ಯಾ. ಅನಿಲ್ ಕಟ್ಟಿ ಅವರು ತಾವು ಅಧಿಕಾರ ವಹಿಸಿಕೊಳ್ಳುವ ದಿನದಿಂದ 2024ರ ಏಪ್ರಿಲ್ 16ರವರೆಗೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ.
ಕರ್ನಾಟಕ ಹೈಕೋರ್ಟ್ ಸದ್ಯ 44 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದು, ಈ ಐವರ ಸೇರ್ಪಡೆಯೊಂದಿಗೆ 49ಕ್ಕೆ ಏರಿಕೆಯಾಗಲಿದೆ. ಹೈಕೋರ್ಟ್ ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ.
ಹಂಗಾಮಿ ಸಿಜೆ ದಿಢೀರ್ ಭೇಟಿ:
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ಹಿರಿಯ ನ್ಯಾಯಮೂರ್ತಿಗಳ ತಂಡ ಶುಕ್ರವಾರ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದ ವಿವಿಧ ವಿಭಾಗ ಮತ್ತು ಶಾಖೆಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು.
ಈ
ವೇಳೆ
ಆಯಾ
ವಿಭಾಗ-ಶಾಖೆಗಳ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳೊಂದಿಗೆ
ಸಮಾಲೋಚನೆ
ನಡೆಸಿದ
ನ್ಯಾಯಮೂರ್ತಿಗಳು
ಅಗತ್ಯ
ಸಲಹೆ
ಹಾಗೂ
ಮಾರ್ಗದರ್ಶನವನ್ನು
ನೀಡಿದರು.
ಈ
ಸಂದರ್ಭದಲ್ಲಿಹೈಕೋರ್ಟ್ನ
ರಿಜಿಸ್ಟ್ರಾರ್
ಜನರಲ್
ಹಾಗೂ
ಇತರ
ಹಿರಿಯ
ಅಧಿಕಾರಿಗಳು
ಹಾಜರಿದ್ದರು.
ಅನಿರೀಕ್ಷಿತ
ಭೇಟಿ
ವೇಳೆ
ಹಂಗಾಮಿ
ಮುಖ್ಯ
ನ್ಯಾಯಮೂರ್ತಿ
ಅಲೋಕ್
ಆರಾಧೆ
ಅವರ
ಜೊತೆಗೆ
ನ್ಯಾ.
ಬಿ.
ವೀರಪ್ಪ,
ನ್ಯಾ.
ಜಿ.
ನರೇಂದರ್,
ನ್ಯಾ.
ಪಿ.ಎಸ್.
ದಿನೇಶ್
ಕುಮಾರ್
ಇದ್ದರು
ಎನ್ನಲಾಗಿದೆ.
Recommended Video