ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಕುತೂಹಲ ಅಂಕಿ ಅಂಶ
Recommended Video

ಬೆಂಗಳೂರು, ಏಪ್ರಿಲ್ 16: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಸಿಸಿ ಭಾನುವಾರ ರಾತ್ರಿಯಂದು ಪ್ರಕಟಿಸಿದ ಪಟ್ಟಿಯಲ್ಲಿ ಏನೇನಿದೆ? ಅಂಕಿ ಅಂಶ ಇಲ್ಲಿದೆ.
ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ ಈಗ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಬಿಜೆಪಿ 72 ಕ್ಷೇತ್ರಗಳಿಗೆ ತನ್ನ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಎರಡನೇ ಪ್ರಕಟಿಸಲು ಮುಂದಾಗಿದೆ. ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೆರಡು ದಿನಗಳಲ್ಲಿ ಮಿಕ್ಕ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
ಕಾಂಗ್ರೆಸ್ ಪಟ್ಟಿಯಲ್ಲಿನ ಅಂಕಿ-ಅಂಶ:
15- ಏಪ್ರಿಲ್ -ಮೊದಲ ಅಧಿಕೃತ ಪಟ್ಟಿ ಪ್ರಕಟವಾದ ದಿನಾಂಕ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಈ ಪ್ರಮಾಣದಲ್ಲಿ ಪಟ್ಟಿ ಪ್ರಕಟಿಸಿದೆ
218- ಒಟ್ಟು ಪ್ರಕಟಿತ ಅಭ್ಯರ್ಥಿಗಳು
06-ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ, ಮೇಲುಕೋಟೆ ಇನ್ನೂ ಅಭ್ಯರ್ಥಿಯನ್ನು ಹೆಸರಿಸಿಲ್ಲ.

07- ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರೆಲ್ಲರಿಗೂ ಟಿಕೆಟ್ ಭಾಗ್ಯ.
15- ಮಹಿಳೆಯರಿಗೆ ಟಿಕೆಟ್
- ಬೆಳಗಾವಿ ಗ್ರಾಮೀಣ- ಶ್ರೀಮತಿ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
- ಖಾನಾಪುರ- ಶ್ರೀಮತಿ ಅಂಜಲಿ ನಿಂಬಾಳ್ಕರ್
- ತೇರದಾಳ- ಉಮಾಶ್ರೀ
- ಕುಮಟಾ- ಶ್ರೀಮತಿ ಶಾರದಾ ಮೋಹನ್ ಶೆಟ್ಟಿ
- ಜಗಳೂರು (ಎಸ್ಟಿ)- ಶ್ರೀಮತಿ ಎ.ಎಲ್.ಪುಷ್ಪಾ
- ರಾಜಾಜಿನಗರ- ಶ್ರೀಮತಿ ಜಿ. ಪದ್ಮಾವತಿ
- ಜಯನಗರ- ಶ್ರೀಮತಿ ಸೌಮ್ಯ.ಆರ್
- ಬೊಮ್ಮನಹಳ್ಳಿ- ಶ್ರೀಮತಿ ಸುಷ್ಮಾ ರಾಜ್ ಗೋಪಾಲ್ ರೆಡ್ಡಿ
- ಬೇಲೂರು- ಶ್ರೀಮತಿ ಕೀರ್ತನಾ ರುದ್ರೇಶ್ ಗೌಡ
- ಪುತ್ತೂರು ಶ್ರೀಮತಿ ಶುಕುಂತಲಾ ಟಿ.ಶೆಟ್ಟಿ
- ಗುಲ್ಬರ್ಗಾ- ಫಾತಿಮಾ ಖಮರುಲ್ ಇಸ್ಲಾಂ
- ಗುಂಡ್ಲುಪೇಟೆ- ಗೀತಾ ಮಹದೇವಪ್ರಸಾದ್
- ಕೋಲಾರ(ಕೆಜಿಎಫ್) - ರೂಪಾ ಶಶಿಧರ್
- ಮೂಡಿಗೆರೆ - ಶ್ರೀಮತಿ ಮೋಟಮ್ಮ
- ಚಿಂತಾಮಣಿ - ವಾಣಿ ಕೃಷ್ಣಾರೆಡ್ಡಿ
ಜಾತಿವಾರು ಹಂಚಿಕೆ:
50+- ಹಿಂದುಳಿದ ವರ್ಗದವರು
50-ಎಸ್ ಸಿ- ಎಸ್ಟಿ
40- ಲಿಂಗಾಯತ
21-23- ಒಕ್ಕಲಿಗ
9-ಮುಸ್ಲಿಂ
5-ಬ್ರಾಹ್ಮಣ
2- ಕ್ರೈಸ್ತ
18- ಭಾರಿ ಕುತೂಹಲ, ಜಿದ್ದಾಜಿದ್ದಿನ ಕ್ಷೇತ್ರಗಳು
- ಚಾಮುಂಡೇಶ್ವರಿ - ಸಿಎಂ ಸಿದ್ದರಾಮಯ್ಯ V/S ಜಿ.ಟಿ.ದೇವೇಗೌಡ
- ಶಿಕಾರಿಪುರ - ಬಿ.ಎಸ್.ಯಡಿಯೂರಪ್ಪ V/S ಜಿ.ಬಿ. ಮಲತೇಶ್
- ಚನ್ನಪಟ್ಟಣ - ಎಚ್.ಡಿ.ಕುಮಾರಸ್ವಾಮಿ V/S ಎಚ್.ಎಂ ರೇವಣ್ಣ V/S ಸಿ.ಪಿ. ಯೋಗೀಶ್ವರ್
- ವಿಜಯನಗರ - ಆನಂದ್ ಸಿಂಗ್ V/S ಗವಿಯಪ್ಪ
- ಟಿ. ನರಸೀಪುರ - ಎಚ್.ಸಿ ಮಹದೇವಪ್ಪ V/S ಅಶ್ವಿನ್ ಕುಮಾರ್
- ವರುಣಾ - ಡಾ.ಯತೀಂದ್ರ V/S ಬಿ.ವೈ.ವಿಜಯೇಂದ್ರ(ಟಿಕೆಟ್ ಅಂತಿಮಗೊಂಡಿಲ್ಲ)
- ಹುಬ್ಬಳ್ಳಿ-ಧಾರವಾಡ ಕೇಂದ್ರ - ಜಗದೀಶ್ ಶೆಟ್ಟರ್ V/S ಡಾ. ಮಹೇಶ್ ಸಿ.ನಲ್ವಾಡ್
- ಶಿವಮೊಗ್ಗ - ಕೆ.ಎಸ್. ಈಶ್ವರಪ್ಪ V/S ಕೆ.ಬಿ. ಪ್ರಸನ್ನಕುಮಾರ್
- ಮೊಳಕಾಲ್ಮೂರು - ಶ್ರೀರಾಮುಲು V/S ಡಾ. ಬಿ. ಯೋಗೇಶ್ ಬಾಬು
- ಅಥಣಿ - ಲಕ್ಷ್ಮಣ್ ಸವದಿ V/S ಮಹೇಶ್ ಈರನಗೌಡ ಕುಮಟಳ್ಳಿ
- ಬಬಲೇಶ್ವರ - ಎಂ.ಬಿ. ಪಾಟೀಲ್ V/S ವಿ.ಜೂ ಗೌಡ ಪಾಟೀಲ್
- ಶಿಗ್ಗಾಂವ್ - ಬಸವರಾಜ್ ಬೊಮ್ಮಾಯಿ V/S ಸೈಯದ್ ಅಜೀಮ್ ಪೀರ್ ಖಾದ್ರಿ
- ಹೆಬ್ಬಾಳ - ಬೈರತಿ ಸುರೇಶ್ V/S ವೈ.ಎ. ನಾರಾಯಣಸ್ವಾಮಿ
- ಗೋವಿಂದರಾಜನಗರ - ಪ್ರಿಯಾಕೃಷ್ಣ V/S ವಿ. ಸೋಮಣ್ಣ
- ಚಿಕ್ಕಮಗಳೂರು - ಸಿ.ಟಿ.ರವಿ V/S ಬಿ.ಎಲ್. ಶಂಕರ್
- ರಾಜರಾಜೇಶ್ವರಿ ನಗರ - ಮುನಿರತ್ನ V/S ತುಳಸಿ ಮುನಿರಾಜುಗೌಡ
- ಜಯನಗರ- ವಿಜಯ್ ಕುಮಾರ್ v/s ಸೌಮ್ಯ ರಾಮಲಿಂಗಾರೆಡ್ಡಿ
- ಚಾಮರಾಜಪೇಟೆ - ಜಮೀರ್ ಅಹ್ಮದ್ V/S ಅಲ್ತಫ್ ಪಾಷಾ












Click it and Unblock the Notifications