ಜಲಸಮಾಧಿಯಾಗಬೇಕಿದ್ದ ಭೂಪರು ಬಚಾವಾದರು!
ಬೆಂಗಳೂರು, ಅ.16: ಮೊನ್ನೆಯಷ್ಟೇ ವಿಜಯದಶಮಿಯಂದು ಮಾಗಡಿ ವ್ಯಾಪ್ತಿಯ ಮಂಚನಬೆಲೆ ಅಣೆಕಟ್ಟೆಯ ಹಿನ್ನೀರಿನಲ್ಲಿ ದುಸ್ಸಾಹಸ ಮಾಡಲು ಹೊರಟ ನಾಲ್ವರು ಯುವಕರು ಜಲಸಮಾಧಿಯಾಗಿದ್ದನ್ನು ಕೇಳಿದ್ದೀರಿ.
ಅದೇ ಸಮಯದಲ್ಲೇ ದೂರದ ಗೋವಾ ಉತ್ತರ ಕರಾವಳಿಯಲ್ಲಿ ಬೆಂಗಳೂರಿನದೇ 8 ಯುವಕರು ಇಂತಹುದೇ ದುಸ್ಸಾಹಸ ಮಾಡಲು ಹೋಗಿ, ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. no swimming zone ಎಂದು ಬೋರ್ಡ್ ಇದ್ದರೂ, ಸ್ಥಳದಲ್ಲೇ ಹಾಜರಿದ್ದ ತಟ ರಕ್ಷಕ ತಂಡದವರು ನೀರಿಗಿಳಿಯಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಭಂಡ ಧೈರ್ಯದ ಯುವ ಪ್ರವಾಸಿಗರು ನೀರೊಳಕ್ಕೆ ಇಳಿದೇ ಬಿಟ್ಟಿದ್ದಾರೆ.

ಸ್ವಲ್ಪ ದೂರ ಸಾಗುತ್ತಿದ್ದಂತೆ ಅಪಾಯದ ಅರಿವಾಗಿದೆ. ಆಗ ಸಹಾಯಕ್ಕಾಗಿ ಬಾಯಿಬಡಿದುಕೊಂಡಿದ್ದಾರೆ. ತಕ್ಷಣವೇ ದಡದಲ್ಲಿದ್ದ ಅದೇ ರಕ್ಷಕ ಪಡೆ Drishti Special Response Services (DSRS) ನೀರೊಳಕ್ಕೆ ಧುಮುಕಿ ಅಷ್ಟೂ ಯುವಕರನ್ನು ಸುರಕ್ಷಿತವಾಗಿ ದಡಕ್ಕೆ ತಂದು ಬಿಸಾಕಿ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿ ವಿಷಯ ಇದಲ್ಲ.
ಸಣ್ಣಪುಟ್ಟ ಕಾನೂನು ಉಲ್ಲಂಘನೆಗೂ ದಂಡ ತೆರಬೇಕಾಗಿರುವ ಇಂದಿನ ದಿನಗಳಲ್ಲಿ ಹೀಗೆ no swimming zone ಎಂದು ಬೋರ್ಡ್ ನೆಟ್ಟಿ, ನೀರಿಗಿಳೀ ಬೇಡ್ರಪ್ಪಾ ಎಂದು ಉಪದೇಶ ಕೊಟ್ಟರೂ ಯೌವನದ ಮಸ್ತಿಯಲ್ಲಿ ಸಾವಿನ ಸುಳಿಯತ್ತ ಸಾಗುತ್ತಾರಲ್ಲಾ ಅವರಿಗೇನು ಹೇಳೋಣ? ಅವರ ವಿರುದ್ಧ ಯಾಕೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ.
ಅವರಿಗೆ ಸರಿಯಾದ ದಂಡ ವಿಧಿಸಿ, ಬೇರೆಯವರೂ ಅಂತಹ ದುಸ್ಸಾಹಸ ಮಾಡದಂತೆ ಮಾದರಿ ದಂಡ ವಿಧಿಸಬಹುದಲ್ವೇ? ಅಷ್ಟಕ್ಕೂ ಭಾರತೀಯ ದಂಡ ಸಂಹಿತೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದು ದಂಡನಾರ್ಹ ಅಪರಾಧವಾಗಿದೆ. ಆ ಕಾನೂನನ್ನೂ ಇಂತಹ ವೀರರ ವಿರುದ್ಧ ಅನ್ವಯಗೊಳಿಸಬಹುದಲ್ವೇ?
ಕಳೆದ ವಾರ, ಅತ್ಯಂತ ಅಪಾಯಕಾರಿ ವಯನಾಡಿನ ಮೀನ್ಮುಟ್ಟಿ ಜಲಪಾತ ಬಳಿ ಕಲ್ಲರ ಹೊಳೆಯಲ್ಲಿ ಟೆಕ್ಕಿಗಳಿಬ್ಬರು ಹೀಗೇ ದುಸ್ಸಾಹಸಕ್ಕಿಳಿದು ನೀರು ಪಾಲಾಗಿದ್ದರು. ಮೊನ್ನೆ ಪಕ್ಕದ ಮಂಚನಬೆಲೆ ಅಣೆಕಟ್ಟೆಯಲ್ಲೂ ಇದೇ ದುರಂತ ಸಂಭವಿಸಿದೆ.
ಹಾಗಾಗಿ, ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಇಂತಹವರಿಗೆ ಸರಿಯಾದ ದಂಡ ವಿಧಿಸುವುದು ಜತೆಗೆ ಅದಕ್ಕೆ ವ್ಯಾಪಕ ಪ್ರಚಾರ ನೀಡಿದರೆ ಆಗಲಾದರೂ ಈ ಹಾವಳಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂದು ಆಶಿಸೋಣ.
ಇಷ್ಟಕ್ಕೂ ಮೊನ್ನೆ ಸೋಮವಾರ Calangute beachನಲ್ಲಿ ಅಪಾಯಕ್ಕೆ ಸಿಲುಕಿದರೂ ತಟ ರಕ್ಷಕರ ಸಕಾಲಿಕ ನೆರವಿನಿಂದ ಪಾರಾಗಿಬಂದ ಭೂಪರು ಯಾರೆಂದರೆ Kiran S (26), Sunil Kumar (26), Satish BR (22), Raghu Gauda (25), Ravi Shah (28), Yatish S (28), Tamanna GR (30) ಮತ್ತು Pradeep Kumar (26).
ಪೆಣಂಬೂರು ಬೀಚಿನಲ್ಲೂ ಸೋಮವಾರ ಇಂತಹುದೇ ಅವಘಡ ಸಂಭವಿಸಿದೆ. ಪಡುಕೋಣಾಜೆಯ ಸಂಜೀವ ನಾಯಕ್ ಅವರ ಮೂವರು ಪುತ್ರಿಯರು ರೇವತಿ (25), ಸುಗಂದಾ (22) ಮತ್ತು ಪ್ರತಿಮಾ (18) ನೀರಿನಲ್ಲಿ ಚೆಲ್ಲಾಟವಾಡಲು ಹೋದಾಗ ಅಪಾಯಕ್ಕೆ ಸಿಲುಕಿದ್ದಾರೆ. ಆದರೆ ಸ್ಥಳದಲ್ಲೇ ಇದ್ದ ಜೀವರಕ್ಷಕರು ಮೂವರನ್ನು ಜೀವಂತವಾಗಿ ಎತ್ತಿ ದಡಕ್ಕೆ ಹಾಕಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications