ಮಳೆ.. ಮಳೆ.. ಮಳೆ ಬರುವಾಗ ಈ ತಪ್ಪು ಮಾಡಬೇಡಿ!
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮಳೆ ಬರ್ತಿದೆ, ನಮ್ಮ ಬೆಂಗಳೂರಿನಲ್ಲಿ ಇಂದು ಕೂಡ ಭರ್ಜರಿ ಮಳೆ ಬಂದಿದೆ. ಹೀಗಾಗಿ ಬೆಂಗಳೂರಿನ ಜನರು ಕೂಡ ಫುಲ್ ಖುಷಿಯಾಗಿದ್ದು, ಈ ಸಮಯದಲ್ಲೇ ಅಪಾಯ ಕೂಡ ಎದುರಾಗಿದೆ. ಏನಂದ್ರೆ, ದಿಢೀರ್ ಭಾರಿ ಪ್ರಮಾಣದ ಮಳೆ ಬಿದ್ದ ಹಿನ್ನೆಲೆ ಮರಗಳು ಬಿದ್ದು ಹೋಗಿದ್ದು, ಮೋರಿಗಳು ಬಾಯಿ ತೆರೆದು ಜೀವ ತೆಗೆಯೋದಕ್ಕೆ ಕಾಯುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ನೀವು ಮಾತ್ರ ಮಳೆ ಬರುವಾಗ ಈ ತಪ್ಪು ಮಾಡಲೇಬೇಡಿ!
ಎಲ್ಲೆಲ್ಲೂ ಭರ್ಜರಿ ಮಳೆ ಅಬ್ಬರ ಶುರುವಾಗಿದ್ದು ಜನ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದಾರೆ. ಅದ್ರಲ್ಲೂ ಬೇಸಿಗೆ ಸಮಯದಲ್ಲಿ ತೀವ್ರ ಸೆಕೆ & ಬಿಸಿ ಗಾಳಿಯ ಪರಿಣಾಮ ಜನ ತತ್ತರಿಸಿದ್ದರು. ಆದರೆ ಇದೀಗ ಭರ್ಜರಿ ಮಳೆ ಸುರಿದ ಕಾರಣಕ್ಕೆ, ಜನರು ನಿಟ್ಟುಸಿರು ಬಿಟ್ಟಿದ್ದಾರೆ & ರೈತರು ಖುಷಿಯಾಗಿ ಕುಣಿದಾಡಿದ್ದಾರೆ. ಇದರ ಜೊತೆಗೆ ಭರ್ಜರಿ ಮಳೆ ಕಾರಣಕ್ಕೆ ಅವಘಡಗಳು ಕೂಡ ಈಗ ಸಂಭವಿಸಿವೆ. ಹಾಗಾದ್ರೆ ಮಳೆ ಬಂದಾಗ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಹೇಗೆ? ದಿಢೀರ್ ಮಳೆ ಸುರಿದಾಗ ನೀವು ಏನು ಮಾಡಬೇಕು? ಸಿಡಿಲಿನಿಂದ ರಕ್ಷಣೆ ಪಡೆಯಲು ಯಾವ ಪ್ಲಾನ್ ಮಾಡಬೇಕು? ಮರಗಳ ಕೆಳಗಡೆ ನಿಲ್ಲುವುದು ಸೇಫ್ ಆಗಿರುತ್ತಾ? ಈ ಕುರಿತು ಇಂಚಿಂಚಾಗಿ ಮಾಹಿತಿ ತಿಳಿಯಲು ಮುಂದೆ ಓದಿ.

ಮರಗಳ ಕೆಳಗೆ ನಿಂತರೆ ಹುಷಾರ್!
ಮಳೆ ಜೋರಾಗಿ ಬರುವಾಗ ಮರಗಳೇ ನಿಮಗೆ ಮೊದಲ ಶತ್ರು ಆಗಿರುತ್ತವೆ. ಯಾಕಂದ್ರೆ ಈ ರೀತಿ ಭಾರಿ ಜೋರಾಗಿ ಮಳೆ ಬಂದು ಗಾಳಿ ಬೀಸುವಾಗ ಯಾವ ಸಮಯದಲ್ಲಿ ಬೇಕಾದರೂ ಮರ ಬೀಳಬಹುದು. ಹೀಗಾಗಿ ಮಳೆ ಬರುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗಡೆ, ನಿಲ್ಲುವುದಕ್ಕೆ ಹೋಗಬೇಡಿ. ಸಾಧ್ಯವಾದಷ್ಟೂ ಮರಗಳಿಂದ ದೂರವೇ ಇರಿ. ಹತ್ತಿರ ಇರುವ ಬಸ್ ನಿಲ್ದಾಣದಲ್ಲಿ ಅಥವಾ ಕಟ್ಟಡಗಳಲ್ಲಿ ಆಶ್ರಯ ಪಡೆದರೆ ಉತ್ತಮ.
ಸಿಡಿಲು ಬಡಿಯುವುದು ಎಚ್ಚರ.. ಎಚ್ಚರ..!
ಮಳೆ ಬರುವಾಗ ನೀವು ಗಾಡಿ ಓಡಿಸುತ್ತಿದ್ದರೆ, ತಕ್ಷಣ ಗಾಡಿ ನಿಲ್ಲಿಸಿ. ಸೂಕ್ತ ಪ್ರದೇಶದಲ್ಲಿ ಆ ತಕ್ಷಣವೇ ಆಶ್ರಯ ಪಡೆಯಿರಿ. ಅಲ್ಲದೆ ಯಾವುದೇ ಕಾರಣಕ್ಕೂ ಖಾಲಿ ಜಾಗ ಹಾಗೂ ಎತ್ತರ ಇರುವ ಪ್ರದೇಶದಲ್ಲಿ ನಿಲ್ಲಬೇಡಿ. ಇಂತಹ ಜಾಗದಲ್ಲಿ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚು ಅಂತಾ ಹೇಳಲಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಟ್ಟಡಗಳು ಇರುವ ಕಡೆ ನಿಂತುಕೊಳ್ಳಿ ಆಗ ನೀವು ಸುರಕ್ಷಿತವಾಗಿ ಇರಬಹುದು.
ಕಾಂಪೌಂಡ್ ಸಹವಾಸವೇ ಬೇಡ!
ಮಳೆ ಬರುವ ಸಮಯದಲ್ಲಿ ಮರಗಳಿಗಿಂತ ಹೆಚ್ಚು ಡೇಂಜರ್ ಅಂದ್ರೆ ಅದು ಕಾಂಪೌಂಡ್, ಯಾಕಂದ್ರೆ ಕಾಂಪೌಂಡ್ ನಿರ್ಮಾಣ ಮಾಡುವಾಗ ಅಷ್ಟು ಮುಂಜಾಗ್ರತೆ ವಹಿಸಿರುವುದಿಲ್ಲ. ಹಾಗೇ ಬಹುತೇಕ ಕಾಂಪೌಂಡ್ಗಳು ಹಳೆಯದಾಗಿರುತ್ತವೆ. ಹೀಗಾಗಿ ನೀರು ಬೀಳುವಾಗಲೇ, ಕಾಂಪೌಂಡ್ ಗೋಡೆ ಕುಸಿದು ಬೀಳುವ ಆತಂಕ ಇದ್ದೇ ಇರುತ್ತದೆ. ಹೀಗಾಗಿ ನೀವು ಹುಷಾರ್, ಮಳೆ ಜೋರಾಗಿ ಬರುವಾಗ ಕಾಂಪೌಂಡ್ಗಳಿಂದ ಕನಿಷ್ಠ 50 ಮೀಟರ್ ದೂರ ಇರಿ.
ವಿದ್ಯುತ್ ಕಂಬ & ಮೊಬೈಲ್ ಟವರ್
ಮಳೆ ಬಂದಾಗ ನೀವು ಯಾವುದೇ ರೀತಿ ಮೆಟಲ್ ಅಂದ್ರೆ ಕಬ್ಬಿಣ ಮತ್ತಿತರ ಲೋಹಗಳಿಂದ ತಯಾರಿಸಿದ ವಸ್ತುಗಳಿಂದ ದೂರ ಇರಿ. ಯಾಕಂದ್ರೆ ಇದು ತುಂಬಾನೆ ಡೇಂಜರ್. ಯಾವುದೇ ಕ್ಷಣದಲ್ಲಿ ಈ ವಸ್ತುಗಳಿಂದ ಕರೆಂಟ್ ಅಂದ್ರೆ ವಿದ್ಯುತ್ ಹರಿಯಬಹುದು, ಹಾಗೇ ನಿಮಗೆ ಆ ಕ್ಷಣ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಹೆಚ್ಚು. ಇದರ ಜೊತೆಯಲ್ಲಿ ತಂತಿ ಬೇಲಿ, ರೈಲು ಹಳಿ, ಕಬ್ಬಿಣ ಪೈಪ್ ಮುಟ್ಟುವ ಸಾಹಸ ಮಾಡಬೇಡಿ.
ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...
ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.












Click it and Unblock the Notifications