ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಿಎಸ್ಐ ಜಗದೀಶ್ ಕೊಲೆ: ಆರೋಪಿಗಳ ಸಂಬಂಧಿಕರ ಬಂಧನ
ಬೆಂಗಳೂರು, ಅಕ್ಟೋಬರ್, 17: ಪಿಎಸ್ ಐ ಜಗದೀಶ್ ಹತ್ಯೆಗೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ತೀವ್ರ ಮಾಡಿದ್ದು ಪ್ರಮುಖ ಆರೋಪಿ ಮಧುನ ತಾಯಿ ಮತ್ತು ಅಣ್ಣನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಧುನ ಅಣ್ಣ ರಘುವನ್ನು ಪೊಲೀಸರು ಬಂಧಿಸಿದ್ದು ನೆಲಮಂಗಲ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಧುನ ತಾಯಿ ತಿಮ್ಮಕ್ಕನನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ.[ಕಳ್ಳರಿಂದ ಹತ್ಯೆಯಾದ ಎಸ್ ಐ ಜಗದೀಶ್ ಪರಿಚಯ]
ಆರೋಪಿಗಳ ಕುಟುಂಬ ಕಿಸೆಗಳ್ಳತನದಲ್ಲಿ ಪಳಗಿತ್ತು. ಭದ್ರಾವತಿ ಮೂಲದವರಾದ ಕುಟುಂಬ ಬೆಂಗಳೂರಿನ ಅಂಚೆಪಾಳ್ಯದಲ್ಲಿಯೂ ಕೆಲ ಕಾಲ ವಾಸವಿತ್ತು. ಕುಟುಂಬದ ಸದಸ್ಯರ ಮೇಲೆ 100 ಕ್ಕೂ ಅಧಿಕ ಅಪರಾಧ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.[ಜಗದೀಶ್ ಅಂತಿಮ ಸಂಸ್ಕಾರ: ಯಾರು ಏನು ಹೇಳಿದರು?]
ಆರೋಪಿಗಳ ಜಾಡನ್ನು ಬಿಡಿಸಲು ಪೊಲೀಸರು ತಂಡ ರಚನೆ ಮಾಡಿದ್ದು ಮೊಬೈಲ್ ಕರೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಇವರ ತಂಡದ ಮೇಲೆ ಇರುವ ಎಲ್ಲ ಪ್ರಕರಣದ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ.
Comments
doddaballapur bengaluru karnataka police murder district news shivamogga ದೊಡ್ಡಬಳ್ಳಾಪುರ ಬೆಂಗಳೂರು ಕರ್ನಾಟಕ ಪೊಲೀಸ್ ಕೊಲೆ ಜಿಲ್ಲಾಸುದ್ದಿ
English summary
Police arrest total 3 people who are the relationship with the Doddaballapur police station sub inspector Jagadeesh (33) Murder.
Story first published: Saturday, October 17, 2015, 18:31 [IST]