ಕನ್ನಡ ಒಲಿಸಿಕೊಂಡ ಮಲಯಾಳದ ಸುಷ್ಮಾಗೆ ಡಾಕ್ಟರೇಟ್
ಕೇರಳ ಮೂಲದ ಸುಷ್ಮಾ ಶಂಕರ್ ಅವರಿಗೆ ಕನ್ನಡ ಭಾಷೆಯು ಒಲಿದು ಬಂದ ಪರಿ ಹೇಗಿದೆಯೆಂದರೆ, ಅವರೀಗ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಡಾಕ್ಟರೇಟ್ಗಾಗಿ ಸುಷ್ಮಾ ಶಂಕರ್ ಆಯ್ಕೆ ಮಾಡಿಕೊಂಡ ವಿಷಯವೂ ಗಂಭೀರವಾದದ್ದೇ..! "ದ್ರಾವಿಡ ಭಾಷಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು: ಒಂದು ಅಧ್ಯಯನ". (ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಜ್ಞಾನಪೀಠ ಪಡೆದ 19 ಸಾಹಿತಿಗಳ ಪ್ರಶಸ್ತಿ ಪುರಸ್ಕೃತ ಕೃತಿಗಳು)
ಈ ಬಗ್ಗೆ ಸುದೀರ್ಘ ಸಂಶೋಧನೆಯಲ್ಲಿ ತೊಡಗಿದ್ದ ಸುಷ್ಮಾ ಶಂಕರ್ 963 ಪುಟಗಳ ಮಹಾಪ್ರಬಂಧವನ್ನು ದ್ರಾವಿಡ ವಿವಿಗೆ ಸಲ್ಲಿಸಿದ್ದರು. ಈ ಪ್ರಬಂಧಕ್ಕೆ ದ್ರಾವಿಡ ವಿವಿ ಡಾಕ್ಟರೇಟ್ ನೀಡಿದೆ. ಈ ಹಿಂದೆ ಇವರು ಕನ್ನಡದವರೇ ಆದ ಡಾ. ಲಕ್ಷ್ಮೀದೇವಿಯವರ ಮಾರ್ಗದರ್ಶನದಲ್ಲಿ "ಗೋಪಾಲಕೃಷ್ಣ ಅಡಿಗರ ಮತ್ತು ಒ.ಎನ್.ವಿ ಕುರುಪ್ ಅವರ ಬದುಕು- ಬರಹ" ಹಿರಿ ಪ್ರಬಂಧ ರಚಿಸಿ ಎಂ.ಫಿಲ್ ಪದವಿ ಪಡೆದಿದ್ದನ್ನು ಸ್ಮರಿಸಬಹುದು.

ಗುರಿ ಮುಟ್ಟಲು ಗುರು ಬೇಕೆಂಬ ಮಾತಿಗೆ ಅನ್ವರ್ಥವಾಗಿ ಲಕ್ಷ್ಮೀದೇವಿಯವರೊಂದಿಗಿನ ಒಡನಾಟ ಸುಷ್ಮಾರಿಗೆ ಮತ್ತಷ್ಟು ಸಾಧಿಸಲು ಪ್ರೇರಣೆಯಾಗಿದ್ದಿರಬಹುದು. ಬಹಳ ಆತುರವಾಗಿ ಕಾಲನ ಕರೆಗೆ ಓಗೊಟ್ಟು ಎದ್ದು ಹೋದ ಲಕ್ಷ್ಮೀದೇವಿಯವರು, ಇಂದು ಸುಷ್ಮಾರಿಗೆ ಸಂದ ಡಾಕ್ಟರೇಟ್ ಪದವಿಯನ್ನು ಎಲ್ಲರಿಗಿಂತ ತುಸು ಹೆಚ್ಚೇ ಸಂಭ್ರಮಿಸುತ್ತಿದ್ದರೇನೋ..!
ಸುಷ್ಮಾ ಅವರ ಹಿನ್ನೆಲೆ:
ಕೇರಳದ ಕೊಲ್ಲಂ ಜಿಲ್ಲೆ ಕಣ್ಣನ್ನಲ್ಲೂರ್ ನಿವಾಸಿ ತೋಟ್ಟಂಒಟ್ ಜನಪದ ಕಲೆಯ ಗುರುಗಳಾದ ಚೆಲ್ಲಪನ್ ನಾಯರ್ ಮತ್ತು ಸುಭಾಷಿಣಿಯಮ್ಮ ದಂಪತಿಗಳ ಮಗಳಾಗಿ 1971ರ ಮೇ 1ರಂದು ಜನಿಸಿದರು. ಇವರು ಮದುವೆಯಾದದ್ದು ಮಂಡ್ಯ ಮೂಲದ ಮೆಕ್ಯಾನಿಕಲ್ ಇಂಜಿಯರ್ ಬಿ. ಶಂಕರ್ ಅವರನ್ನು. ಅಲ್ಲಿಂದಲೇ ಸುಷ್ಮಾರಿಗೆ ಕನ್ನಡ ಕಲಿವ ಆಸೆ ಮೊಳೆತು ಒಂದು ಡಾಕ್ಟರೇಟ್ ಪಡಕೊಳ್ಳುವಷ್ಟು ಕಲಿತಿದ್ದಾರೆ.
ಸುಷ್ಮಾ ಅವರ ಅನುವಾದಿತ ಕೃತಿಗಳು
* ಡಾ. ದೊಡ್ಡರಂಗೇಗೌಡರ "ಯುಗಶಬ್ದ" ಕವನ ಸಂಕಲನ "ಯುಗಶಬ್ದಂ" ಆಗಿ ಮಲಯಾಳಂಗೆ
* ಒ.ಎನ್.ವಿ. ಕುರುಪ್ ಅವರ "ಭೂಮಿಕ್ಕು ಒರು ಚರಮಗೀತಂ" ಕವನ ಸಂಕಲನವನ್ನು "ಭೂಮಿಗೊಂದು ಚರಮಗೀತೆ" ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
Recommended Video
ಕವನ ಸಂಕಲನಗಳು
* ಮೊದ ಮೊದಲ ಗೆರೆಗಳು, ಅನ್ನ ಕೊಟ್ಟ ಕನ್ನಡ ಮಣ್ಣು- ಕನ್ನಡ
-
Keralam Assembly Elections 2026: ಎಲ್ಡಿಎಫ್ vs ಯುಡಿಎಫ್ ಪೈಪೋಟಿ, ಶಬರಿಮಲೆ ಚಿನ್ನಾಭರಣ ಕಳ್ಳತನ ವಿಷಯವೇ ಪ್ರಮುಖ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications