ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ಭಿನ್ನಮತ ಸ್ಪೋಟ
ಬೆಂಗಳೂರು, ಏಪ್ರಿಲ್ 15: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಭಿನ್ನಮತ ಸ್ಪೋಟಿಸಿತ್ತು. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಮುನ್ನವೇ ಬಂಡಾಯದ ಹೊಗೆಯಾಡುತ್ತಿದೆ. ಹಲವೆಡೆ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಬಹಿರಂಗವಾಗಿ ಪ್ರತಿಭಟನೆಗೆ ಇಳಿದಿದ್ದು ಟಿಕೆಟ್ ಘೋಷಣೆ ಬೆನ್ನಲ್ಲೇ ಭಾರೀ ಅಸಮಧಾನ ಭುಗಿಲೇಳುವ ಸಾಧ್ಯತೆಗಳು ಕಾಣಿಸುತ್ತಿವೆ.
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸಿನ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಹಿಂದೆ ಮುಂದೆ ನೋಡುತ್ತಿದ್ದು, ಇನ್ನೂ ಪಟ್ಟಿ ಬಿಡುಗಡೆಯಾಗಿಲ್ಲ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಶಾಸಕರಿಗೆ ಟಿಕೆಟ್ ತಪ್ಪಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು ಪಟ್ಟಿ ಬಿಡುಗಡೆಗೂ ಮುನ್ನ ಭಿನ್ನಮತ ಭುಗಿಲೆದ್ದಿದೆ.
ಹಾನಗಲ್ ಶಾಸಕ ಹಾಗೂ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು ಅವರ ಬೆಂಬಲಿಗರು ಇಲ್ಲಿನ ಹಾನಗಲ್ ಕನಕ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಜಗಳೂರು ಶಾಸಕ ಎಚ್.ಪಿ. ರಾಜೇಶ್ ಗೂ ಟಿಕೆಟ್ ತಪ್ಪುವ ಭೀತಿ ಅವರ ಅಭಿಮಾನಿಗಳಿಗೆ ಎದುರಾಗಿದ್ದು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ. "ಈ ಕುರಿತು ನಾಳೆ (ಸೋಮವಾರ) ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸುತ್ತೇನೆ," ಎಂದು ಅವರು ಹೇಳಿದ್ದಾರೆ.
ಇನ್ನು ಜಯನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ. ಸಿ. ವೇಣುಗೋಪಾಲ್ ಗೂ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು ಅವರೂ ಬಂಡಾಯವೇಳುವ ಲಕ್ಷಣಗಳಿವೆ.
ತರೀಕೆರೆ
ಕಾಂಗ್ರೆಸ್
ಶಾಸಕ
ಜಿ.
ಹೆಚ್.
ಶ್ರೀನಿವಾಸ್
ಅವರಿಗೂ
ಟಿಕೆಟ್
ಕೈತಪ್ಪುವ
ಸಾಧ್ಯತೆ
ಇದ್ದು,
ಟಿಕೆಟ್
ಬಿಡುಗಡೆಗೂ
ಮುನ್ನವೇ
ಶ್ರೀನಿವಾಸ್
ಬಂಡಾಯದ
ಬಾವುಟ
ಹಾರಿಸಲು
ಸಿದ್ಧವಾಗಿದ್ದಾರೆ.
ಈಗಾಗಲೇ
ಬೆಂಬಲಿಗರ
ಜೊತೆ
ಶ್ರೀನಿವಾಸ್
ಸಭೆ
ನಡೆಸಿದ್ದಾರೆ.
ಈ
ವೇಳೆ
ಶ್ರೀನಿವಾಸ್
ಪತ್ನಿ
ಬೆಂಬಲಿಗರ
ಮುಂದೆ
ಕಣ್ಣೀರಿಟ್ಟಿದ್ದಾರೆ.
ಕಾಂಗ್ರೆಸ್
ಪಕ್ಷ,
ಸಿದ್ದರಾಮಯ್ಯ
ನಮಗೆ
ಮೋಸ
ಮಾಡಿದ್ದಾರೆ
ಎಂದು
ಅವರು
ದೂರಿದ್ದಾರೆ.
ಇನ್ನು
ಮುಖ್ಯಮಂತ್ರಿ
ಸ್ಪರ್ಧಿಸದಿದ್ದರೆ
ನನಗೇ
ಟಿಕೆಟ್
ನೀಡಿ
ಎಂದು
ಬಾದಾಮಿ
ಶಾಸಕ
ಬಿ.ಬಿ
ಚಿಮ್ಮನಕಟ್ಟಿ
ಕೆಪಿಸಿಸಿ
ಕಾರ್ಯಾಧ್ಯಕ್ಷ
ಎಸ್.ಆರ್.
ಪಾಟೀಲ್
ಭೇಟಿಯಾಗಿ
ಮನವಿ
ಸಲ್ಲಿಸಿದ್ದಾರೆ.