Darshan: ಅರ್ಜುನ್ ಜನ್ಯಾ ಹೃದಯಾಘಾತಕ್ಕೆ ಆರಡಿ ಮೃಗ ದರ್ಶನ್ ಕಾರಣ: ಅಚ್ಚರಿ ಘಟನೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ
ಬೆಂಗಳೂರು, ಜೂನ್ 19: ʼಬಿಗ್ ಬಾಸ್ ಕನ್ನಡ' ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರ ಹೃದಯಾಘಾತಕ್ಕೂ ನಟ ದರ್ಶನ್ ಅವರ ಬೆದರಿಕೆ ಕರೆಗೂ ಸಂಬಂಧಿಸಿ ವಿವಾದವನ್ನು ಹುಟ್ಟುಹಾಕಿದ್ದಾರೆ.
ಆರೋಪಗಳನ್ನು ಮಾಡುವ ಮೂಲಕ ಹೆಸರುವಾಸಿಯಾದ ಪ್ರಶಾಂತ್ ಸಂಬರ್ಗಿ ಅವರು ತಮ್ಮ ಫೇಸ್ ಬುಕ್ ಫೋಸ್ಟ್ ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಟಿವಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದ ನನ್ನ ಸ್ನೇಹಿತನಿಗೆ ಹೃದಯಾಘಾತವಾಗಿತ್ತು. ಇದಕ್ಕೆ ಕಾರಣವೆಂದರೆ, ರೌಡಿ ಬಾಸ್ (ಡಿ ಬಾಸ್ ಈಗ ಆರ್ ಬಾಸ್ ರೌಡಿ ಬಾಸ್) ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆ ಕರೆ ಮತ್ತು ಮಾನಸಿಕ ಹಿಂಸೆಯೇ ಕಾರಣ ಎಂದು ಹೇಳಿದ್ದಾರೆ.

#dboss ಮತ್ತು #dbossfans ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಿ, ಪ್ರಶಾಂತ್ ಸಂಬರ್ಗಿ ಅವರು ತಮ್ಮ ಅಭಿಮಾನಿಗಳಲ್ಲಿ ಡಿ ಬಾಸ್ ಎಂದೇ ಖ್ಯಾತರಾಗಿರುವ ದರ್ಶನ್ ಅವರ ಸುಳಿವು ನೀಡಿದರು. ಸಂಬಂಧಿತ ಘಟನೆಯಲ್ಲಿ, ಅರ್ಜುನ್ ಜನ್ಯ ಅವರು 2020 ರಲ್ಲಿ ಸಣ್ಣ ಹೃದಯಾಘಾತದಿಂದ ಬಳಲುತ್ತಿದ್ದರು. ಆ ದಿನಗಳಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡದ ಬಗ್ಗೆ ಮಾತನಾಡಿತ್ತಾರೆ. ಫೆಬ್ರವರಿ ಅಂತ್ಯದ ವೇಳೆಗೆ ನನಗೆ ಹೃದಯಾಘಾತವಾಗಿತ್ತು, ಆರೋಗ್ಯದ ಭಯದ ಮುಂಚೆಯೇ, ಮುಂದಿನ ಕೆಲವು ತಿಂಗಳುಗಳ ಬಗ್ಗೆ ನಾನು ಒತ್ತಡಕ್ಕೊಳಗಾಗಿದ್ದೇನೆ.
6 ಅಡಿ ದೈತ್ಯಾಕಾರನ ಮತ್ತೊಂದು ಕರ್ಮ ಕಾಂಡ Part 2.
6 ಅಡಿ ದೈತ್ಯಾಕಾರನ ಮತ್ತೊಂದು ಕರ್ಮ ಕಾಂಡ Part 2 ಎಂದು ಫೇಸ್ ಬುಕ್ ಪೋಸ್ಟ್ ಹಾಕಿಕೊಂಡಿರುವ ಪ್ರಶಾಂತ್ ಸಂಬರ್ಗಿ ಅವರು, ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಈ ಅಮಾಯಕ ರೇಣುಕಾ ಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೊಗರಿದರು ಕೇಳದೆ ಬಲವಂತವಾಗಿ ಚಿಕನ್ ಪೀಸ್ ಬಾಯಿಗೆ ತುರಿಕಿದನು ಈ ರೌಡಿ ಬಾಸ್ ಎಂದು ದರ್ಶನ್ ಕುರಿತು ಕಿಡಿಕಾರಿದ್ದಾರೆ.
ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ ,ಈ ದೈತ್ಯಾಕಾನ ಸೂಚನೇಯಂತೆ ಮಧ್ಯಾಹ್ನದ ಊಟದಲ್ಲಿ ನಾನ್ವೆಜ್ ಮಾಂಸವನ್ನು ಬೆರೆಸಿ ನೀಡಲಾಯಿತು. ಇವಳು ಅದನ್ನು ತಿನ್ನುವಾಗ ಈ ದುರತ್ಮ ದುರ್ಯೋದನಂತೆ ಗಹಗಹಿಸಿ ನಕ್ಕನಂತೆ. ತು ಇವನೊಬ್ಬ ಹೆರನೋವುಗ ಮೃಗ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.












Click it and Unblock the Notifications