ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾ ಸೀತಾರಾಮನ್ ವಿರುದ್ಧ ಪರಮೇಶ್ವರ್ ಟ್ವೀಟ್ ಟೀಕೆ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 25: ನಿನ್ನೆ ಕೊಡಗಿಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಮೇಲೆ ಹರಿಹಾಯ್ದಿದ್ದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟೆ ಕುರಿತು ಹಾಗೂ ನಿರ್ಮಲಾ ಸೀತಾರಾಮನ್ ಅವರ ದರ್ಪ ತುಂಬಿದ ವರ್ತನೆ ಬಗ್ಗೆ ಟ್ವಿಟ್ಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಿಮ್ಮನ್ನು ಎಷ್ಟು ಗೌರವಪೂರ್ವಕವಾಗಿ ನಮ್ಮ ಸಂಪುಟ ಸಹೋದ್ಯೋಗಿ ನೆರವು ಬೇಡಿದರೋ, ನೀವು ಸಹ ಅಷ್ಟೆ ಗೌರಯುತವಾಗಿ ಅವರಿಗೆ ಉತ್ತರಿಸಬೇಕಿತ್ತು ಎಂದಿದ್ದಾರೆ.

ಕೊಡಗು ಸಂತ್ರಸ್ತರಿಗೆ ಕೇಂದ್ರ ನಯಾ ಪೈಸೆ ಕೊಟ್ಟಿಲ್ಲ: ಪರಂ ವಾಗ್ದಾಳಿಕೊಡಗು ಸಂತ್ರಸ್ತರಿಗೆ ಕೇಂದ್ರ ನಯಾ ಪೈಸೆ ಕೊಟ್ಟಿಲ್ಲ: ಪರಂ ವಾಗ್ದಾಳಿ

ನಮ್ಮ ಸಚಿವರು ವಾರಗಳಿಂದಲೂ ಕೊಡಗಿನಲ್ಲೇ ಉಳಿದು ಅಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ನೀವು ಅವರ ವಿರುದ್ಧವೇ ದರ್ಪ ತೋರಿದ್ದೀರಿ ಇದು ಸಹಿಸುವಂತದ್ದಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿರ್ಮಲಾ ಸೀತಾರಮನ್‌ಗೆ ಟ್ವೀಟ್ ಮಾಡಿದ ಡಿಸಿಎಂ

ನಿರ್ಮಲಾ ಸೀತಾರಾಮನ್ ಅವರಿಗೆ ಎರಡು ಟ್ವೀಟ್ ಮಾಡಿರುವ ಪರಮೇಶ್ವರ್ ಅವರು, ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಹೇಳಿದ್ದ, 'ಕೇಂದ್ರ ಸಚಿವೆ, ಉಸ್ತುವಾರಿ ಸಚಿವರನ್ನು ಹಿಂಬಾಲಿಸಬೇಕಾ?' ಎಂಬ ಮಾತಿಗೂ ತಕ್ಕ ಉತ್ತರ ನೀಡಿದ್ದಾರೆ.

ರಾಜ್ಯಗಳು ಸಂವಿಧಾನದಿಂದ ಹಕ್ಕು ಪಡೆದಿವೆ

ರಾಜ್ಯಗಳು ಸಂವಿಧಾನದಿಂದ ಹಕ್ಕು ಪಡೆದಿವೆ

'ರಾಜ್ಯಗಳು ನಮ್ಮ ಹಕ್ಕನ್ನು ಸಂವಿಧಾನದಿಂದ ಪಡೆದುಕೊಳ್ಳುತ್ತೇವೆ, ಕೇಂದ್ರದಿಂದಲ್ಲ. ಸಂವಿಧಾನವು ಕೇಂದ್ರ ಮತ್ತು ರಾಜ್ಯಕ್ಕೆ ಸಮನಾದ ಆಡಳಿತದ ಶಕ್ತಿಯನ್ನು ನೀಡಿದೆ. ನಾವು ಕೇಂದ್ರಕ್ಕಿಂತ ಕೀಳಲ್ಲ ನಾವು ಅಭಿವೃದ್ಧಿಯಲ್ಲಿ ಪಾಲುದಾರರು ಎಂದು ಸಂವಿಧಾನದ ಪಾಠ ಮಾಡಿದ್ದಾರೆ ಪರಮೇಶ್ವರ್.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆಗಿದ್ದೇಕೆ? ಇಲ್ಲಿದೆ ಕಾರಣಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆಗಿದ್ದೇಕೆ? ಇಲ್ಲಿದೆ ಕಾರಣ

ಕೇಂದ್ರ ಸಚಿವೆ ಎಂಬ ದರ್ಪದಲ್ಲಿ ಮಾತಾಡಿದ್ದ ನಿರ್ಮಲಾ

ಕೇಂದ್ರ ಸಚಿವೆ ಎಂಬ ದರ್ಪದಲ್ಲಿ ಮಾತಾಡಿದ್ದ ನಿರ್ಮಲಾ

ಕೇಂದ್ರ ಸಚಿವೆಯಾದ ನಾನು ಉಸ್ತುವಾರಿ ಸಚಿವರನ್ನು ಹಿಂಬಾಲಿಸಬೇಕಾ? ಇದು ನಂಬಲಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಕೇಂದ್ರ ಸಚಿವೆಯಾದ ನಾನು ಉನ್ನತ ಸ್ಥಾನದಲ್ಲಿದ್ದೀನಿ, ರಾಜ್ಯವೊಂದರ ಜಿಲ್ಲೆಯ ಉಸ್ತುವಾರಿ ಸಚಿವ ನನಗಿಂತಲೂ ಕಡಿಮೆಯವ ಎಂಬ ಭಾವ ಅವರ ಮಾತಿನಲ್ಲಿ ಇಣುಕುತ್ತಿತ್ತು.

ನಿರ್ಮಲಾ ವರ್ತನೆಗೆ ಭಾರಿ ವಿರೋಧ

ನಿನ್ನೆ ನಿರ್ಮಲಾ ಸೀತಾರಾಮನ್ ಅವರು ತೋರಿದ್ದ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ, ಸಾರ್ವಜನಿಕವಾಗಿಯೂ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸಚಿವೆ ರಾಜ್ಯದ ಸ್ವಾಭಿಮಾನ ಕೆಣಕಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ನಿರ್ಮಲಾ ಸೀತಾರಾಮನ್ ಸಿಟ್ಟು, ಪ್ರತಾಪ್ ಸಿಂಹ ಸಮಜಾಯಿಶಿನಿರ್ಮಲಾ ಸೀತಾರಾಮನ್ ಸಿಟ್ಟು, ಪ್ರತಾಪ್ ಸಿಂಹ ಸಮಜಾಯಿಶಿ

English summary
DCM G Parameshwar tweets to central minister Nirmala Sitharaman about her behavior with minister SR Mahesh. He writes in tweet that We are not inferior to the Center. We are partners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X