ಕೊರೊನಾ ಭೀತಿ ಬೇಡ; ನಿರಾತಂಕವಾಗಿ ಐಸ್ ಕ್ರೀಂ ಸವಿಯಿರಿ
ಬೆಂಗಳೂರು, ಮಾರ್ಚ್ 19 : ಐಸ್ ಕ್ರೀಂ ತಿಂದರೆ ಕೊರೊನಾ ಹರಡುತ್ತದೆ ಎಂದು ಹರಿದಾಡುತ್ತಿದ್ದ ಸಂದೇಶವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಬೇಸಿಗೆಯ ಬಿಸಿಯಲ್ಲಿ ಐಸ್ ಕ್ರೀಂ ತಿನ್ನುವವರು, ವ್ಯಾಪಾರಿಗಳು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಈ ತಿಂಗಳ ಮೊದಲ ವಾರದಲ್ಲಿ ಮೇಲಷ್ಯಾದಲ್ಲಿ ವಾಟ್ಸಪ್ ಮೂಲಕ ಹರಿದಾಡುತ್ತಿದ್ದ ಐಸ್ ಕ್ರೀಂ ಸಂದೇಶ ಬೆಂಗಳೂರಿಗೆ ಬಂದು ತಲುಪಿತ್ತು. ಐಸ್ ಕ್ರೀಂ ಪ್ರಿಯರ ಆತಂಕಕ್ಕೆ ಇದು ಕಾರಣವಾಗಿತ್ತು. ಈಗ ಯೂನಿಸೆಫ್ ವೈರಲ್ ಆಗಿರುವ ಸಂದೇಶ ಸುಳ್ಳು ಎಂದು ಹೇಳಿದೆ.
ಐಸ್ ಕ್ರೀಂ ತಿಂದರೆ ಕೊರೊನಾ ಹರಡಲಿದೆ ಎಂಬ ಸಂದೇಶ ಬೆಂಗಳೂರಿಗೂ ಬಂದಿತ್ತು. ಪಿಐಬಿ ಕೊರೊನಾ ಹರಡದಂತೆ ತಡೆಯಲು ಐಸ್ ಕ್ರೀಂನಿಂದ ದೂರವಿರಿ ಎಂಬ ಸಂದೇಶ ಸುಳ್ಳು ಎಂದು ಹೇಳಿತ್ತು. ಈಗ ಯೂನಿಸೆಫ್ ಸಹ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ.

ಭಾರತದಲ್ಲಿನ ಐಸ್ ಕ್ರೀಂ ತಯಾರಕರ ಸಂಘ ತನ್ನ ವೆಬ್ ಸೈಟ್ನಲ್ಲಿ ಯೂನಿಸೆಫ್ ಹೇಳಿಕೆಯನ್ನು ಅಪ್ ಲೋಡ್ ಮಾಡಿದ್ದು, ಜನರ ಆತಂಕವನ್ನು ದೂರಮಾಡಿದೆ. ಈ ಸುಳ್ಳು ವಾಟ್ಸಪ್ ಸುದ್ದಿಯ ಕಾರಣದಿಂದಾಗಿ ಸ್ಥಳೀಯವಾಗಿ ಐಸ್ ಕ್ರೀಂ ಮಾರಾಟದಲ್ಲಿ ಕುಸಿತ ಉಂಟಾಗಿತ್ತು.
8 ಅಪ್ಸರಾ ಐಸ್ ಕ್ರೀಂ ಔಟ್ ಲೆಟ್ ಹೊಂದಿರುವ ಪ್ರದೀಪ್ ಬಾಲಿ ಅವರು, "ಕಳೆದ ಐದು ದಿನಗಳಿಂದ ಐಸ್ ಕ್ರೀಂ ವ್ಯಾಪಾರದಲ್ಲಿ ಶೇ 20ರಷ್ಟು ಕುಸಿತವಾಗಿದೆ. ಯೂನಿಸೆಫ್ ನೀಡಿದ ಹೇಳಿಕೆ ಪ್ರತಿಯನ್ನು ಔಟ್ ಲೆಟ್ಗಳಲ್ಲಿ ಹಾಕಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸಂದೇಶವನ್ನು ಇತರರಿಗೆ ಕಳಿಸುವ ಮುನ್ನ ಅವುಗಳ ಸತ್ಯಾಸತ್ಯತೆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳಿ. ಕೊರೊನಾ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹಬ್ಬುತ್ತಿವೆ ವಾಟ್ಸಪ್ ಮೂಲಕ ಎಲ್ಲರನ್ನೂ ತಲುಪುತ್ತಿವೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications