ಎಸ್.ಎಂ.ಕೃಷ್ಣ ಕೈ ತಪ್ಪಿದ ರಾಜ್ಯಸಭೆ ಟಿಕೆಟ್
ಬೆಂಗಳೂರು, ಜೂ.9 : ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗಿದ್ದು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ. ಬಿ.ಕೆ.ಹರಿಪ್ರಸಾದ್ ಮತ್ತು ಪ್ರೊ.ರಾಜೀವ್ ಗೌಡ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭೆ
ಚುನಾವಣೆಗೆ
ನಾಮಪ್ರ
ಸಲ್ಲಿಸಲು
ಕೊನೆಯ
ದಿನವಾದ
ಸೋಮವಾರ
ಬಿ.ಕೆ.ಹರಿಪ್ರಸಾದ್
ಮತ್ತು
ಐಐಎಂ
ಪ್ರೊ.ರಾಜೀವ್
ಗೌಡ
ತಮ್ಮ
ನಾಮಪತ್ರ
ಸಲ್ಲಿಸಿದರು.
ಇದರಿಂದಾಗಿ
ಹಾಲಿ
ರಾಜ್ಯಸಭಾ
ಸದಸ್ಯರಾದ
ಎಸ್.ಎಂ.ಕೃಷ್ಣ
ಅವರಿಗೆ
ಟಿಕೆಟ್
ಕೈತಪ್ಪಿದಂತಾಗಿದೆ.
[ರಾಜ್ಯಸಭೆಗೆ
ಎಸ್ಸೆಂ
ಕೃಷ್ಣ
ಮರು
ಆಯ್ಕೆ
ಕಷ್ಟ?]
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎಸ್.ಎಂ.ಕೃಷ್ಣ ಅವರ ಕರೆ ಮಾಡಿ, ನಿಮ್ಮ ಬದಲಾಗಿ ರಾಜೀವ್ ಗೌಡ ಅವರಿಗೆ ಟಿಕೆಟ್ ನೀಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಲು ಯಾವುದೇ ರಾಜ್ಯದ ನಾಯಕರು ಕಾರಣರಲ್ಲ, ಅವರಿಗೆ ಟಿಕೆಟ್ ನೀಡದಿರುವುದು ನಮಗೂ ಬೇಸರತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. [ಜೂನ್ 19ರಂದು ಚುನಾವಣೆ]
ಎಸ್.ಎಂ.ಕೃಷ್ಣ
ಅವರ
ಬಗ್ಗೆ
ರಾಜ್ಯದ
ಎಲ್ಲಾ
ಕಾಂಗ್ರೆಸ್
ನಾಯಕರಿಗೂ
ಅಪಾರ
ಗೌರವವಿದೆ.
ಕರ್ನಾಟಕ
ಮುಖ್ಯಮಂತ್ರಿಯಾಗಿದ್ದ
ವೇಳೆ
ಅವರು
ರಾಜ್ಯದ
ಅಭಿವೃದ್ಧಿಗಾಗಿ
ಹಲವು
ಯೋಜನೆಗಳನ್ನು
ಜಾರಿಗೆ
ತಂದವರು,
ಐಟಿ
ಕ್ಷೇತ್ರವನ್ನು
ಅಂತರಾಷ್ಟ್ರೀಯ
ಮಟ್ಟದಲ್ಲಿ
ಗುರುತಿಸುವಂತೆ
ಮಾಡಿದವರು,
ಅಂತಹ
ಅನುಭವಿ,
ಹಿರಿಯ
ರಾಜಕಾರಣಿಯವರಿಗೆ
ರಾಜ್ಯಸಭೆಗೆ
ಟಿಕೆಟ್
ಕೈತಪ್ಪಿರುವುದು
ಬೇಸರ
ತಂದಿದೆ
ಎಂದು
ತಿಳಿಸಿದ್ದಾರೆ.
[ರಾಜ್ಯಸಭೆ,
ಪರಿಷತ್
ಕಣದಲ್ಲಿ
ಕರೋಡ್
ಪತಿಗಳು]
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬರು ಅಭ್ಯರ್ಥಿ ಜಯಗಳಿಸಲು 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ 121 (ಪ್ರಕಾಶ್ ಹುಕ್ಕೇರಿ ರಾಜೀನಾಮೆ ನೀಡಿದ್ದಾರೆ) ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದಾಗಿದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಮತ್ತು ಪ್ರೊ.ರಾಜೀವ್ ಗೌಡ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
ಪರಮೇಶ್ವರ್ ನಾಮಪತ್ರ : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗಾಗಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸದಸ್ಯೆ ಜಯಮ್ಮ ಬಾಲಕೃಷ್ಣ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಟಿ.ಎ.ಶರವಣ ನಾಮಪತ್ರ : ವಿಧಾನಪರಿಷತ್ ಚುನಾವಣೆಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ಇಂದು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಶನಿವಾರ ತಮ್ಮ ನಾಪತ್ರ ಸಲ್ಲಿಸಿದ್ದಾರೆ.