ಸಿದ್ದರಾಮಯ್ಯನವರೇ, ಕಾಂಗ್ರೆಸ್ ಕಟ್ಟಿದ್ದು ನೀವಲ್ಲ, ಕೊಲ್ಲಬೇಡಿ: ಪೂಜಾರಿ
ಬೆಂಗಳೂರು, ಜೂನ್ 17: ಸಿದ್ದರಾಮಯ್ಯ ದುರಹಂಕಾರಿ, ಅವರಿಗೆ ಅಧಿಕಾರದ ಮದವೇರಿದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತಮ್ಮ ಹಲವು ದಿನಗಳ ಅಸಮಾಧಾನವನ್ನು ಪೂಜಾರಿ ಹೊರಹಾಕಿದರು.

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಯೋಚಿಸುತ್ತಿರುವ ನೀವೇನು ಸರ್ವಾಧಿಕಾರಿಯೇ? ನಿಮಗೆ ಆರೋಗ್ಯ ಸಮಸ್ಯೆಯಾದರೆ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದಿಲ್ಲವೇ? ಕಾಂಗ್ರೆಸ್ ಕಟ್ಟಿದ್ದು ನೀವಲ್ಲ ಎಂಬುದು ನೆನಪಿರಲಿ, ಕಾಂಗ್ರೆಸ್ ಕೊಲ್ಲುವ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯ ಅವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದರು.












Click it and Unblock the Notifications