ಉತ್ತರ ಕರ್ನಾಟಕದಲ್ಲಿ ಮೈಕೊರೆಯುವ ಚಳಿ: ಶೀತ ಅಲೆ ಎಚ್ಚರಿಕೆ- ಐಎಂಡಿ
ಬೆಂಗಳೂರು ಜನವರಿ 10: ಉತ್ತರ ಕರ್ನಾಟಕದಲ್ಲಿ ದಿಢೀರ್ ಆಗಿ ತಾಪಮಾನ ಕುಸಿದಿದ್ದು, ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಅನುಭವ ಉಂಟಾಗುತ್ತಿದೆ.
ಉತ್ತರ ಭಾರತದ ಪ್ರದೇಶಗಳಲ್ಲಿ ಬೀಸುತ್ತಿರುವ ತೀವ್ರವಾದ ಚಳಿಗಾಳಿಯು ಪರ್ಯಾಯ ದ್ವೀಪ ಭಾರತದ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಇದರಿಂದ ಪಾದರಸ 5.5 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು ಭಾರತದ ಹವಾಮಾನ ಇಲಾಖೆ (IMD) ಉತ್ತರ-ಆಂತರಿಕ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಶೀತ ಅಲೆಯ ಎಚ್ಚರಿಕೆ ನೀಡಲಾಗುತ್ತದೆ ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ಪ್ರಸಾದ್ ಎ ಹೇಳಿದ್ದಾರೆ. ಈ ಪ್ರದೇಶದಲ್ಲಿ ಕನಿಷ್ಠ ತಾಪಮಾನ 4.5 ಡಿಗ್ರಿಯಿಂದ 6.5 ಡಿಗ್ರಿ ಸೆಲ್ಸಿಯಸ್ವರೆಗಿದೆ.
ಬೀದರ್ನಲ್ಲಿ ತಾಪಮಾನ 5.5 ಡಿಗ್ರಿ ಸೆಲ್ಸಿಯಸ್ ಮತ್ತು ಬಾಗಲಕೋಟೆ ಹಾಗೂ ವಿಜಯಪುರದಲ್ಲಿ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿಗಿಂತ ಕಡಿಮೆಯಾಗಿದೆ. ಆದ್ದರಿಂದ ಕರ್ನಾಟಕದಾದ್ಯಂತ ಶೀತ ಅಲೆಯ ಎಚ್ಚರಿಕೆಯನ್ನು ನೀಡಲಾಗಿದೆ" ಎಂದು ಪ್ರಸಾದ್ ಎ ಅವರು ವಿವರಿಸಿದರು. ತಾಪಮಾನದ ಕುಸಿತವನ್ನು ಅವಲಂಬಿಸಿ, ಅಧಿಕಾರಿಗಳು ಪ್ರದೇಶದಾದ್ಯಂತ ತೀವ್ರ ಶೀತ ಅಲೆಯ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

'3-4 ಪದರಗಳ ಉಡುಪುಗಳನ್ನು ಧರಿಸಿ'
ಅಧಿಕ ಚಳಿಯ ಬಗ್ಗೆ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಅಧಿಕಾರಿಗಳು ಶೀತ ಪರಿಸ್ಥಿತಿಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರ ವಿರುದ್ಧ ಜನರನ್ನು ಎಚ್ಚರಿಸಿದ್ದಾರೆ. ಕೇವಲ ಒಂದು ಅಥವಾ ಎರಡು ಪದರಗಳ ಬದಲಿಗೆ ಕನಿಷ್ಠ 3-4 ಪದರಗಳ ಉಡುಪುಗಳನ್ನು ಧರಿಸಲು ಸಲಹೆ ನೀಡಿದ್ದಾರೆ. "ಶೀತ ಅಲೆಗಳಿಂದಾಗಿ ಜನರು ಮೂಗಿನ ರಕ್ತಸ್ರಾವ, ಕೆಮ್ಮು, ಶೀತ, ಆಸ್ತಮಾದ ಹದಗೆಡುವಿಕೆ, ಜ್ವರ ಲಕ್ಷಣಗಳು ಮತ್ತು ಚರ್ಮದ ತುರಿಕೆ ಪರಿಸ್ಥಿತಿಗಳನ್ನು ಅನುಭವಿಸಬಹುದು" ಎಂದು IMD ತಿಳಿಸಿದೆ.
ಜೊತೆಗೆ ನಾಗರಿಕರು ತಮ್ಮ ತಲೆಯನ್ನು ಉಣ್ಣೆಯ ಟೋಪಿಗಳಿಂದ ಮುಚ್ಚಬೇಕು. ಮನೆಯೊಳಗೆ ಇರಬೇಕು ಮತ್ತು ಒಳಗೆ ಇರುವಾಗ ಚಪ್ಪಲಿಗಳನ್ನು ಧರಿಸಬೇಕು. ಚಹಾ, ಕಾಫಿ ಅಥವಾ ಸೂಪ್ನಂತಹ ಹಬೆಯಾಡುವ ಪಾನೀಯಗಳನ್ನು ಕುಡಿಯಲು ಸಹ ಶಿಫಾರಸು ಮಾಡಲಾಗಿದೆ.












Click it and Unblock the Notifications