ಸಮ್ಮಿಶ್ರ ಸರ್ಕಾರಕ್ಕೆ ತಿಂಗಳು ಆರು: ಸಾಧನೆ-ಗುರಿಗಳು ಹತ್ತಾರು!
Recommended Video
ಬೆಂಗಳೂರು, ನವೆಂಬರ್ 23: ಈಗ ಪತನವಾಗುತ್ತೆ, ಆಗ ಬೀಳುತ್ತೆ ಎಂಬ ಆತಂಕದ ನಡುವೆಯೂ ಆರು ತಿಂಗಳು ಪೂರೈಸಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಈ ಅವಧಿಯಲ್ಲಿ ಸಾಧನೆಯನ್ನು ಮಾಡಿದ್ದಕ್ಕಿಂತ ಗುರಿಗಳನ್ನು ಇಟ್ಟುಕೊಂಡಿದ್ದೇ ಹೆಚ್ಚು.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಸರಿ ಸುಮಾರು 22 ಲಕ್ಷ ರೈತರ ಬೆಳೆ ಸಾಲವನ್ನು ಮನ್ನಾ ಮಾಡಲು ಆರು ತಿಂಗಳಲ್ಲಿ ತನ್ನ ಎಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದನ್ನು ಬಿಟ್ಟರೆ ಮತ್ತೇನೂ ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ.
ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರಕ್ಕೆ 100 ದಿನ: ಸಾಧನೆಗೆ ಎಷ್ಟು ಅಂಕ?
ಆದರೆ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಬ್ಯಾಂಕ್್ಗಳ ಸರಿ ಸುಮಾರು 10 ಸಾವಿರ ಕೋಟಿ ರೂ ಸಾಲವನ್ನು ಮನ್ನಾ ಮಾಡಲು ಈಗಾಗಲೇ ಚಾಲನೆ ನೀಡಲಾಗಿದ್ದು, ಇನ್ನೂ ರಾಷ್ಟ್ರೀಕೃತ ಬ್ಯಾಂಕ್ಗಳ 36 ಸಾವಿರ ಕೋಟಿ ರೂಪಾಯಿಗಳ ಮನ್ನಾ ಮಾಡಲು ಪ್ರಯತ್ನ ನಡೆಸಿದೆ.
ಈ ಮಧ್ಯೆ ರಾಜ್ಯ ಸರ್ಕಾರ ತನ್ನ ಹಲವು ಸಾಧನೆಗಳನ್ನು ಹೇಳಿಕೊಂಡಿದ್ದು ಹತ್ತಾರು ಗುರಿಗಳನ್ನು ಸಾರ್ವಜನಿಕರ ಮುಂದಿಟ್ಟಿದೆ. ಹಾಗಾದರೆ ಕಳೆದ ಆರು ತಿಂಗಳಲ್ಲಿ ಸರ್ಕಾರ ತಾನು ಸಾಧಿಸಿದೆ ಎಂದು ಹೇಳಿಕೊಂಡಿರುವ ಅಂಶಗಳು ಇಲ್ಲಿವೆ ನೋಡಿ..
ಮೈತ್ರಿ ಸರ್ಕಾರ ಮಾಡಿದ ಸಾಧನೆಗಳು
1.
ಮೈತ್ರಿ
ಸರ್ಕಾರ
ಅಧಿಕಾರಕ್ಕೆ
ಬಂದು
5
ತಿಂಗಳಾಗಿದೆ.
ಐದು
ತಿಂಗಳ
ಅವಧಿಯಲ್ಲಿ
ಮೈತ್ರಿ
ಸರ್ಕಾರದ
ಆಶಯಗಳನ್ನು
ಈಡೇರಿಸುವ
ನಿಟ್ಟಿನಲ್ಲಿ
ಹಲವು
ಮಹತ್ತರ
ಕ್ರಮಗಳನ್ನು
ಕೈಗೊಂಡಿದ್ದೇವೆ
2.
ಸಿದ್ದರಾಮಯ್ಯನವರು
ಮುಖ್ಯಮಂತ್ರಿಯಾಗಿದ್ದಾಗ
2018ರ
ಫೆಬ್ರುವರಿಯಲ್ಲಿ
ಮಂಡಿಸಿದ
ಆಯವ್ಯಯ
ಹಾಗೂ
ಜುಲೈನಲ್ಲಿ
ಮಂಡಿಸಿದ
ನಮ್ಮ
ಮೈತ್ರಿ
ಸರ್ಕಾರದ
ಆಯವ್ಯಯದ
ಎಲ್ಲ
ಜನಪರ
ಯೋಜನೆಗಳನ್ನು
ಕಾಲಮಿತಿಯಲ್ಲಿ
ಜಾರಿಗೊಳಿಸಲು
ಕ್ರಮ
ವಹಿಸಲಾಗುತ್ತಿದೆ.
3.
ಈ
ಆಯವ್ಯಯ
ಭಾಷಣಗಳಲ್ಲಿ
ಮಾಡಿರುವ
ಒಟ್ಟು
460
ಘೋಷಣೆಗಳಲ್ಲಿ
ಬಹಳಷ್ಟು
ಘೋಷಣೆಗಳಿಗೆ
ಸಂಬಂಧಿಸಿದಂತೆ
ಸರ್ಕಾರಿ
ಆದೇಶ
ಹೊರಡಿಸಲಾಗಿದೆ.
ಅಂದರೆ
ಈ
ಕಾರ್ಯಕ್ರಮಗಳು
ಅನುಷ್ಠಾನದ
ವಿವಿಧ
ಹಂತಗಳಲ್ಲಿವೆ.
ರಾಜ್ಯದ
ಹಣಕಾಸು
ಸ್ಥಿತಿ:
ನಿಗದಿತ
ಗುರಿಗಿಂತ
ಶೇ.
11
ರಷ್ಟು
ಹೆಚ್ಚು
ತೆರಿಗೆ
ಸಂಗ್ರಹ
4.
ರಾಜ್ಯದ
ಹಣಕಾಸು
ಸ್ಥಿತಿ
ಉತ್ತಮವಾಗಿದ್ದು,
ನಿಗದಿತ
ಗುರಿಗಿಂತ
ಹೆಚ್ಚಿನ
ತೆರಿಗೆ
ಸಂಗ್ರಹವಾಗಿದೆ.
5.
ಸೆಪ್ಟೆಂಬರ್
ಅಂತ್ಯದ
ವರೆಗೆ
75,634
ಕೋಟಿ
ರೂ.
ಗಳಷ್ಟು
ವಿವಿಧ
ತೆರಿಗೆಗಳ
ಸಂಗ್ರಹವಾಗಿದ್ದು,
ಶೇ.
11.4
ರಷ್ಟು
ಹೆಚ್ಚಳವಾಗಿದೆ.
6.
ಚುನಾವಣೆಯ
ಹಿನ್ನೆಲೆಯಲ್ಲಿ
ಆಯವ್ಯಯ
ವೆಚ್ಚ
ಸೆಪ್ಟೆಂಬರ್
ಅಂತ್ಯದ
ವೇಳೆಗೆ
ಶೇ.
38
ರಷ್ಟಾಗಿದ್ದು,
2013-14
ರಲ್ಲಿ
ಈ
ಅವಧಿಯಲ್ಲಿ
ಶೇ.
37
ರಷ್ಟು
ವೆಚ್ಚವಾಗಿತ್ತು.
ಮಾರ್ಚ್
ವೇಳೆಗೆ
ನಿರೀಕ್ಷಿತ
ಗುರಿ
ತಲುಪುವ
ಆಶಾಭಾವನೆ
ಇದೆ.
ವಿಶೇಷ ಘಟಕ ಯೋಜನೆಯಡಿ ದಾಖಲೆಯ 29 ಸಾವಿರ ಕೋಟಿ ಅನುದಾನ ನಿಗದಿ
-ಎಸ್ಸಿಪಿ
/
ಟಿಎಸ್ಪಿ
ಯೋಜನೆಯಡಿ
ದಾಖಲೆಯ
29
ಸಾವಿರ
ಕೋಟಿ
ರೂ.
ಅನುದಾನ
ನಿಗದಿಪಡಿಸಲಾಗಿದೆ.
ಅನುದಾನದ
ಸದ್ಬಳಕೆಗೆ
ಮೊದಲ
ಬಾರಿ
ಸ್ಪಷ್ಟ
ಮಾರ್ಗಸೂಚಿ
ರಚನೆ
ಮಾಡಲಾಗಿದ್ದು,
ಅನುದಾನ
ವೆಚ್ಚ
ಮಾಡದ
ಅಧಿಕಾರಿಗಳ
ವಿರುದ್ಧ
ಕ್ರಿಮಿನಲ್
ಪ್ರಕರಣ
ದಾಖಲು
ಮಾಡುವ
ನಿಯಮವನ್ನು
ಈ
ಬಾರಿ
ಕಟ್ಟುನಿಟ್ಟಾಗಿ
ಜಾರಿಗೊಳಿಸಲಾಗುತ್ತಿದೆ.
-ಪರಿಶಿಷ್ಟ
ಜಾತಿ,
ಪರಿಶಿಷ್ಟ
ಪಂಗಡ,
ಹಿಂದುಳಿದ
ವರ್ಗಗಳು
ಹಾಗೂ
ಅಲ್ಪಸಂಖ್ಯಾತ
ಸಮುದಾಯದ
ವಿದ್ಯಾರ್ಥಿಗಳಿಗೆ
ಆನ್ಲೈನ್ನಲ್ಲಿ
ವಿದ್ಯಾರ್ಥಿ
ವೇತನ
ಪಾವತಿಗೆ
ಕ್ರಮ
ವಹಿಸಲಾಗಿದ್ದು,
ಇದರಿಂದ
56.69
ಲಕ್ಷ
ವಿದ್ಯಾರ್ಥಿಗಳಿಗೆ
ಅನುಕೂಲ.
ಜನತಾ
ದರ್ಶನ-
17
ಸಾವಿರಕ್ಕೂ
ಹೆಚ್ಚು
ಅರ್ಜಿ
ಸ್ವೀಕಾರ,
ಶೇ.
50ರಷ್ಟು
ಇತ್ಯರ್ಥ.
-ಸಾರ್ವಜನಿಕರ
ಸಮಸ್ಯೆಗೆ
ನೇರವಾಗಿ
ಸ್ಪಂದಿಸುವ
ವೇದಿಕೆ
ಜನತಾದರ್ಶನ.
ಸೆಪ್ಟೆಂಬರ್
1
ರಿಂದ
ಅಧಿಕೃತ
ಚಾಲನೆ
ನೀಡಲಾಗಿದೆ.
ನಿರುದ್ಯೋಗ,
ಸಾಲದ
ಸಮಸ್ಯೆ,
ಓದಿಗೆ
ನೆರವು,
ಹೀಗೆ
ಜನರು
ಸಂಕಷ್ಟಗಳಿಗೆ
ನೇರ
ಪರಿಹಾರ
ಒದಗಿಸಲು
ತಿಂಗಳಿಗೊಮ್ಮೆ
ಜನತಾ
ದರ್ಶನ
ನಡೆಸಲಾಗುವುದು.
-
ಜೂನ್
1
ರಿಂದ
ಈ
ವರೆಗೆ
ಬೆಂಗಳೂರು,
ಬೆಳಗಾವಿ
ಮತ್ತು
ವಿವಿಧ
ಜಿಲ್ಲೆಗಳಲ್ಲಿ
ಪ್ರವಾಸ
ಕೈಗೊಂಡ
ಸಂದರ್ಭದಲ್ಲಿ
ಸಾರ್ವಜನಿಕರಿಂದ
17,723
ಮನವಿಗಳನ್ನು
ಸ್ವೀಕರಿಸಲಾಗಿದೆ.
ಜಿಲ್ಲಾ
ಮಟ್ಟದಲ್ಲಿ
ಜನತಾ
ದರ್ಶನ
ನಡೆಸುವ
ಬಗ್ಗೆ
ಜಿಲ್ಲಾಧಿಕಾರಿಗಳಿಗೆ
ಸುತ್ತೋಲೆ
ಹೊರಡಿಸಲಾಗಿದ್ದು,
ಹಲವು
ಜಿಲ್ಲಾಧಿಕಾರಿಗಳು
ಕ್ರಮ
ವಹಿಸಿದ್ದಾರೆ.
ಸ್ವೀಕರಿಸಿದ
ಮನವಿಗಳಲ್ಲಿ
ಶೇ.
50
ರಷ್ಟು
ಇತ್ಯರ್ಥಪಡಿಸಲಾಗಿದೆ.
ರೈತರ ಕೃಷಿ ಸಾಲಮನ್ನಾ ಯೋಜನೆ
ಸಾಲ
ಮನ್ನಾ
ಯೋಜನೆ:
ಬ್ಯಾಂಕುಗಳಿಂದ
ಮಾಹಿತಿ
ಸಂಗ್ರಹ-
15
ಬ್ಯಾಂಕುಗಳಿಂದ
10
ಲಕ್ಷ
ರೈತರ
ಬೆಳೆ
ಸಾಲ
ಮಾಹಿತಿ
ಲಭ್ಯ
-
ಸಾಲ
ಮನ್ನಾ
ಯೋಜನೆಯಡಿ
ವಾಣಿಜ್ಯ
ಮತ್ತು
ಗ್ರಾಮೀಣ
ಬ್ಯಾಂಕುಗಳ
23.71
ಲಕ್ಷ
ರೈತರಿಗೆ
ಹಾಗೂ
ಸಹಕಾರ
ಸಂಘಗಳ
20.38
ಲಕ್ಷ
ರೈತರಿಗೆ
ಅನುಕೂಲವಾಗಲಿದ್ದು,
ವಿವಿಧ
ಬ್ಯಾಂಕುಗಳಿಂದ
ಮಾಹಿತಿ
ಸಂಗ್ರಹಿಸುವ
ಪ್ರಕ್ರಿಯೆ
ಚಾಲನೆಯಲ್ಲಿದೆ.
-ಸಾಲಮನ್ನಾ
ಯೋಜನೆಯನ್ನು
ಆಯವ್ಯಯದಲ್ಲಿ
ಘೋಷಿಸಿದಂತೆ
ಅನುಷ್ಠಾನಗೊಳಿಸಲಾಗುತ್ತಿದೆ.
-
ಇದಕ್ಕಾಗಿ
ಭೂದಾಖಲೆ
ಮತ್ತು
ಸರ್ವೇಕ್ಷಣಾ
ಇಲಾಖೆಯ
ಆಯುಕ್ತ
ಮುನೀಶ್
ಮೌದ್ಗಿಲ್
ನೇತೃತ್ವದ
ತಂಡವು
ವಿಶೇಷ
ಸಾಫ್ಟ್ವೇರನ್ನು
ಅಭಿವೃದ್ಧಿ
ಪಡಿಸಿದ್ದು,
ಮಾಹಿತಿ
ಸಂಗ್ರಹ,
ಖಾತರಿ
ಪಡಿಸುವ
ಪ್ರಕ್ರಿಯೆ
ನಡೆಯುತ್ತಿದೆ.
-ವಾಣಿಜ್ಯ
ಬ್ಯಾಂಕುಗಳಲ್ಲಿ
ಸಾಲ
ಪಡೆದ
ರೈತರ
ಮಾಹಿತಿಯನ್ನು
ಸಿಬಿಎಸ್
(ಕೋರ್
ಬ್ಯಾಂಕಿಂಗ್
ಸಿಸ್ಟಮ್)
ತಂತ್ರಾಂಶದಿಂದ
ಈಗಾಗಲೇ
ಪಡೆಯಲಾಗಿದ್ದು,
ಇದನ್ನು
ರಾಜ್ಯದಲ್ಲಿರುವ
ಏಳು
ಸಾವಿರಕ್ಕೂ
ಹೆಚ್ಚು
ಶಾಖೆಗಳಿಗೆ
ಈ
ಮಾಹಿತಿಯನ್ನು
ಕಳುಹಿಸಿ
ಖಾತರಿಪಡಿಸಿಕೊಳ್ಳಲಾಗುತ್ತಿದೆ.
ಈ
ಬ್ಯಾಂಕುಗಳಿಂದ
ಮಾಹಿತಿ
ಬಂದ
ತಕ್ಷಣ
ಸಾಲ
ಮನ್ನಾ
ಪ್ರಕ್ರಿಯೆ
ಪ್ರಾರಂಭಿಸಲಾಗುವುದು.
-
ಈಗಾಗಲೇ
ಸೇಡಂ
ಹಾಗೂ
ದೊಡ್ಡಬಳ್ಳಾಪುರ
ತಾಲ್ಲೂಕುಗಳಲ್ಲಿ
ಪ್ರಾಯೋಗಿಕವಾಗಿ
ಯೋಜನೆ
ಜಾರಿಗೊಳಿಸಲಾಗಿದೆ.
ಈ
ಎರಡು
ತಾಲ್ಲೂಕುಗಳ
50
ಶಾಖೆಗಳಲ್ಲಿ
21
ಸಾವಿರಕ್ಕೂ
ಹೆಚ್ಚು
ಸಾಲದ
ಖಾತೆಗಳಿದ್ದು,
ನವೆಂಬರ್
12
ರಿಂದ
ರೈತರು
ಬ್ಯಾಂಕುಗಳಿಗೆ
ಭೇಟಿ
ನೀಡಿ
ತಮ್ಮ
ಆಧಾರ್
ಕಾರ್ಡ್
ಮತ್ತು
ಪಡಿತರ
ಚೀಟಿಯನ್ನು
ಸಲ್ಲಿಸುವ
ಪ್ರಕ್ರಿಯೆ
ಆರಂಭವಾಗಿದೆ.
ಎರಡು
ದಿನದಲ್ಲಿ
500
ರೈತರು
ಭೇಟಿ
ನೀಡಿ
ದಾಖಲೆ
ಒದಗಿಸಿದ್ದಾರೆ.
-
ಈ
ವರ್ಷ
ಆಯವ್ಯಯದಲ್ಲಿ
ಸಾಲಮನ್ನಾ
ಯೋಜನೆಗೆ
6500
ಕೋಟಿ
ರೂಪಾಯಿಗಳನ್ನು
ಒದಗಿಸಲಾಗಿದೆ.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ಕೊಡಗು ಪುನರ್ನಿರ್ಮಾಣ ಪ್ರಾಧಿಕಾರ ರಚನೆ
-
ಈ
ವರ್ಷ
ಆಗಸ್ಟ್
ತಿಂಗಳಿನಲ್ಲಿ
ಮಲೆನಾಡು
ಹಾಗೂ
ಕರಾವಳಿ
ಭಾಗದ
ಜಿಲ್ಲೆಗಳಲ್ಲಿ
ಭಾರಿ
ಮಳೆಯಿಂದ
ಅಪಾರ
ಆಸ್ತಿ
ನಷ್ಟ
ಸಂಭವಿಸಿದೆ.
ಕೇಂದ್ರ
ಸರ್ಕಾರದ
ನೆರವಿನೊಂದಿಗೆ
ಪರಿಸ್ಥಿತಿಯನ್ನು
ರಾಜ್ಯ
ಸರ್ಕಾರ
ಯಶಸ್ವಿಯಾಗಿ
ನಿಭಾಯಿಸಿದ್ದು,
ಜನರ
ಸಂಕಷ್ಟಕ್ಕೆ
ಸ್ಪಂದಿಸಿದೆ.
ಉಪಮುಖ್ಯಮಂತ್ರಿಗಳು
ಹಾಗೂ
ಸಚಿವ
ಸಂಪುಟದ
ಸಹೋದ್ಯೋಗಿಗಳು
ಜಿಲ್ಲೆಗೆ
ಭೇಟಿ
ನೀಡಿ,
ತಮ್ಮ
ಇಲಾಖೆಗೆ
ಸಂಬಂಧಿಸಿದ
ಕಾರ್ಯಗಳ
ಮೇಲ್ವಿಚಾರಣೆ
ನಡೆಸಿದ್ದಾರೆ.
-ಇತ್ತೀಚೆಗೆ
ಕೊಡಗು
ಜಿಲ್ಲೆಯಲ್ಲಿ
ಸಂತ್ರಸ್ತರೊಂದಿಗೆ
ಸಂವಾದ
ನಡೆಸಿದ್ದು,
ಅವರ
ಇಚ್ಛೆಗೆ
ಅನುಗುಣವಾಗಿ
ಮನೆ
ನಿರ್ಮಿಸಿ
ಕೊಡಲಾಗುವುದು.
-
ಈ
ವರೆಗೆ
ಕೊಡಗು
ಜಿಲ್ಲೆಗೆ
ರಾಜ್ಯ
ಸರ್ಕಾರ
127
ಕೋಟಿ
ರೂಪಾಯಿಗಳ
ಅನುದಾನ
ಬಿಡುಗಡೆ
ಮಾಡಿದೆ.
-ಪ್ರಕೃತಿಯ
ಕೋಪಕ್ಕೆ
ಜರ್ಝರಿತವಾಗಿರುವ
ಕೊಡಗು
ಜಿಲ್ಲೆಯನ್ನು
ಪುನರ್
ನಿರ್ಮಿಸುವುದು
ಸರ್ಕಾರದ
ಆದ್ಯತೆ.
ಇದನ್ನು
ತ್ವರಿತ
ಗತಿಯಲ್ಲಿ
ಅನುಷ್ಠಾನಗೊಳಿಸಲು
ಮುಖ್ಯಮಂತ್ರಿಗಳ
ಅಧ್ಯಕ್ಷತೆಯಲ್ಲಿ
ಕೊಡಗು
ಪುನರ್
ನಿರ್ಮಾಣ
ಪ್ರಾಧಿಕಾರವನ್ನು
ರಚನೆಯ
ಪ್ರಕ್ರಿಯೆಗೆ
ಚಾಲನೆ
ನೀಡಲಾಗಿದೆ.
-ಕೊಡಗು
ಜಿಲ್ಲೆಯ
ಸಂಕಷ್ಟಕ್ಕೆ
ಸಾರ್ವಜನಿಕರು
ಅಭೂತಪೂರ್ವ
ಬೆಂಬಲ
ನೀಡಿದ್ದು,
ಈ
ವರೆಗೆ
187.16
ಕೋಟಿ
ರೂ.
ಗಳ
ದೇಣಿಗೆ
ಹರಿದುಬಂದಿದೆ.
ಇದಲ್ಲದೆ
ಪರಿಹಾರ
ಕಾರ್ಯಕ್ಕೆ
ಸ್ವಯಂ
ಪ್ರೇರಿತರಾಗಿ
ಸಾರ್ವಜನಿಕರು
ಕೈಜೋಡಿಸಿದ್ದಾರೆ;
ವಿವಿಧ
ವಸ್ತುಗಳು,
ಆಹಾರ
ವಸ್ತುಗಳನ್ನು
ಒದಗಿಸಿ
ನೆರವಿಗೆ
ಧಾವಿಸಿದ್ದಾರೆ.
ಇನ್ಫೋಸಿಸ್
ಪ್ರತಿಷ್ಠಾನವು
25
ಕೋಟಿ
ರೂ.
ಗಳ
ನೆರವು
ನೀಡುವುದಾಗಿ
ಪ್ರತಿಷ್ಠಾನದ
ಅಧ್ಯಕ್ಷೆ
ಶ್ರೀಮತಿ
ಸುಧಾ
ಮೂರ್ತಿ
ಅವರು
ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಪ್ರವಾಹದಿಂದ ನಷ್ಟ : 546 ಕೋಟಿ ಕೊಟ್ಟ ಕೇಂದ್ರ
ಯಶಸ್ವಿ ದಸರಾ ಆಚರಣೆ
-ಮೈಸೂರು
ದಸರಾ
ಉತ್ಸವವನ್ನು
ಅತ್ಯಂತ
ಅರ್ಥಪೂರ್ಣವಾಗಿ,
ಯಶಸ್ವಿಯಾಗಿ
ನೆರವೇರಿಸಲಾಯಿತು.
ಇನ್ಫೋಸಿಸ್
ಪ್ರತಿಷ್ಠಾನದ
ಅಧ್ಯಕ್ಷೆ
ಸುಧಾ
ಮೂರ್ತಿ
ಅವರು
ದಸರಾ
ಉದ್ಘಾಟಿಸಿ,
ಈ
ಉತ್ಸವಕ್ಕೆ
ವಿಶೇಷ
ಮೆರುಗು
ತಂದರು.
-ದಸರಾ
ಉತ್ಸವದ
10
ದಿನಗಳಲ್ಲೂ
ವಿವಿಧ
ಕಾರ್ಯಕ್ರಮಗಳಲ್ಲಿ
ಅವರು
ಉತ್ಸಾಹದಿಂದ
ಭಾಗವಹಿಸಿದ್ದು
ಈ
ಬಾರಿಯ
ವಿಶೇಷ.
-ಈ
10
ದಿನಗಳಲ್ಲಿ
ಸುಮಾರು
50
ಲಕ್ಷಕ್ಕೂ
ಹೆಚ್ಚು
ಪ್ರವಾಸಿಗರು
ಭೇಟಿ
ನೀಡಿರುವುದಾಗಿ
ಅಂದಾಜಿಸಲಾಗಿದೆ.
ದಸರಾ
ಮೆರವಣಿಗೆಯನ್ನು
ವೀಕ್ಷಿಸಲು
10-12
ಲಕ್ಷ
ಪ್ರವಾಸಿಗರು
ಆಗಮಿಸಿದ್ದರು.
ಋಣಭಾರ ಪತ್ರ ನೀಡಿಕೆ
-
ಸ್ಥಿರಾಸ್ತಿಗಳ
ಋಣಭಾರ
ಪ್ರಮಾಣ
ಪತ್ರ
/
ನೋಂದಾಯಿತ
ದಸ್ತಾವೇಜುಗಳ
ದೃಢೀಕೃತ
ನಕಲು
ಪ್ರತಿ
ಪೂರೈಸುವಿಕೆ,
ನೋಂದಣಿಗೆ
Appointment
Booki
ng
ಸೇರಿದಂತೆ
ಇನ್ನಿತರ
ಸೇವೆಗಳನ್ನು
ಆನ್ಲೈನ್
ಮೂಲಕ
ಲಭ್ಯವಾಗಲಿವೆ.
-
ಸಾರ್ವಜನಿಕರು
ಯಾವುದೇ
ಸ್ಥಿರಾಸ್ತಿಯ
ಮಾರ್ಗಸೂಚಿ
ಮೌಲ್ಯ
ತಿಳಿಯಲು
ಅನುಕೂಲವಾಗುವಂತೆ,
ಮೌಲ್ಯ
ಎಂಬ
ಹೆಸರಿನ
ಮೊಬೈಲ್
ಆಪ್
ಅನ್ನು
ಅಭಿವೃದ್ಧಿಪಡಿಸಲಾಗಿದೆ.
-
ಸಾರ್ವಜನಿಕರು
ತಾವು
ಮಾಡಿಕೊಳ್ಳುವ
ಕರಾರು
ಪತ್ರ
ಮತ್ತು
ಪ್ರಮಾಣ
ಪತ್ರಗಳಿಗೆ
ಮುದ್ರಾಂಕ
ಶುಲ್ಕವನ್ನು
ಆನ್ಲೈನ್
for
ಮೂಲಕ
ಪಾವತಿಸಿ,
ಇ-ಸ್ಟಾಂಪ್
ಕಾಗದವನ್ನು
ತಮ್ಮ
ಮನೆಯಲ್ಲಿ
ಕುಳಿತೇ
ಪಡೆಯಬಹುದಾಗಿದೆ.
ಆನ್ಲೈನ್ ಆಸ್ತಿ ನೋಂದಣಿಗಾಗಿ 'ಕಾವೇರಿ': ಏನೇನು ಲಾಭ?
‘ಶಾಲಾ ಸಂಪರ್ಕ ಸೇತು’ ಹೊಸ ಯೋಜನೆ
-ರಾಜ್ಯದ
ಮಲೆನಾಡು
ಹಾಗೂ
ಕರಾವಳಿ
ಭಾಗದ
ಜಿಲ್ಲೆಗಳಲ್ಲಿ
ಗ್ರಾಮೀಣ
ಪ್ರದೇಶದಲ್ಲಿ
ತೋಡು,
ಹಳ್ಳ-ಕೊಳ್ಳಗಳನ್ನು
ದಾಟಲು
ಬಳಸುವ
ಅಪಾಯಕಾರಿ
ಸ್ಥಿತಿಯಲ್ಲಿರುವ
ಸಣ್ಣ
ತೂಗುಸೇತುವೆ,
ಕಾಲು
ಸಂಕಗಳ
ಬದಲಿಗೆ
ಶಾಶ್ವತ
ಸೇತುವೆಗಳನ್ನು
ನಿರ್ಮಿಸಲು
ಶಾಲಾ
ಸಂಪರ್ಕ
ಸೇತು
ಯೋಜನೆಯನ್ನು
ಹೊಸದಾಗಿ
ರೂಪಿಸಲಾಗಿದೆ.
-ಮೊದಲ
ಹಂತದಲ್ಲಿ
ಕರಾವಳಿ
ಭಾಗದ
3
ಜಿಲ್ಲೆಗಳು
ಹಾಗೂ
ಮಲೆನಾಡು
ಭಾಗದ
4
ಜಿಲ್ಲೆಗಳ
ಒಟ್ಟು
444
ತೂಗುಸೇತುವೆಗಳನ್ನು
ಗುರುತಿಸಲಾಗಿದ್ದು,
ಅಲ್ಲಿ
ಶಾಶ್ವತ
ಸಂಪರ್ಕ
ಸೇತುವೆ
ನಿರ್ಮಿಸಲಾಗುವುದು.
-ಇದಕ್ಕಾಗಿ
ಪ್ರಸಕ್ತ
ವರ್ಷ
100
ಕೋಟಿ
ರೂ.
ಅನುದಾನ
ಒದಗಿಸಲಾಗಿದೆ.
-ರಾಷ್ಟ್ರೀಯ
ಹೆದ್ದಾರಿ
ಅಭಿವೃದ್ಧಿಗೆ
ಚುರುಕು:
ರಾಜ್ಯದಲ್ಲಿ
ಪ್ರಗತಿಯಲ್ಲಿರುವ
ರಾಷ್ಟ್ರೀಯ
ಹೆದ್ದಾರಿ
ಕಾಮಗಾರಿಗಳನ್ನು
ತ್ವರಿತವಾಗಿ
ಕೈಗೊಳ್ಳಲು
ಇರುವ
ಅಡೆತಡೆಗಳನ್ನು
ನಿವಾರಿಸಲು
ಮುಖ್ಯ
ಕಾರ್ಯದರ್ಶಿಗಳ
ಅಧ್ಯಕ್ಷತೆಯಲ್ಲಿ
ಸಮನ್ವಯ
ಸಭೆಗಳನ್ನು
ಕಾಲ
ಕಾಲಕ್ಕೆ
ನಡೆಸಲಾಗುತ್ತಿದೆ.
ಭೂಸ್ವಾಧೀನ
ಪ್ರಕ್ರಿಯೆ,
ವಿದ್ಯುತ್
ಕಂಬಗಳ
ಸ್ಥಳಾಂತರ
ಮತ್ತಿತರ
ಸಮಸ್ಯೆಗಳನ್ನು
ಸಮನ್ವಯ
ವಹಿಸಿ
ಶೀಘ್ರವಾಗಿ
ಪರಿಹರಿಸಿ
ಕ್ರಮ
ಕೈಗೊಳ್ಳಲು
ಇದರಿಂದ
ಅನುಕೂಲವಾಗಿದೆ.
1200
ಕೋಟಿ
ರೂ.
ವೆಚ್ಚದಲ್ಲಿ
ಸರ್ಕಾರಿ
ಶಾಲೆ-ಕಾಲೇಜುಗಳ
ಮೂಲಸೌಕರ್ಯ
ಅಭಿವೃದ್ಧಿಗೆ
ಕ್ರಮ
ವಹಿಸಲಾಗುತ್ತಿದೆ.
ಸರ್ಕಾರಿ
ಪ್ರಾಥಮಿಕ,
ಪ್ರೌಢಶಾಲೆ
ಮತ್ತು
ಪದವಿ
ಪೂರ್ವ
ಕಾಲೇಜುಗಳ
ಮೂಲಸೌಲಭ್ಯಕ್ಕೆ
450
ಕೋಟಿ
ರೂ.
ಗಳ
ಕ್ರಿಯಾಯೋಜನೆಗೆ
ಮಂಜೂರಾತಿ
ನೀಡಲಾಗಿದೆ.
1521
ಶಾಲೆ/
ಪದವಿಪೂರ್ವ
ಕಾಲೇಜುಗಳಲ್ಲಿ
2711
ಕೊಠಡಿಗಳು,
86
ಪ್ರಯೋಗಾಲಯಗಳು
ಹಾಗೂ
154
ಶೌಚಾಲಯ
ನಿರ್ಮಿಸಲು
ಉದ್ದೇಶಿಸಲಾಗಿದೆ.
-.
66
ಸರ್ಕಾರಿ
ಕಾಲೇಜುಗಳು
ಮತ್ತು
ಪಾಲಿಟೆಕ್ನಿಕ್ಗಳು,
8
ಸರ್ಕಾರಿ
ಇಂಜಿನಿಯರಿಂಗ್
ಕಾಲೇಜುಗಳ
ಮೂಲಸೌಕರ್ಯಕ್ಕೆ
470.37
ಕೋಟಿ
ರೂ.
ಗಳ
ಕ್ರಿಯಾಯೋಜನೆಗೆ
ಅನುಮೋದನೆ
ನೀಡಲಾಗಿದೆ.
-ಸರ್ಕಾರಿ
ಶಾಲೆ-ಕಾಲೇಜುಗಳಲ್ಲಿ
ಬೋಧನಾ
ಕೊಠಡಿ,
ಪ್ರಯೋಗಾಲಯ,
ಶೌಚಾಲಯ,
ಕುಡಿಯುವ
ನೀರು
ಮತ್ತಿತರ
ಸೌಲಭ್ಯ
ಕಲ್ಪಿಸಲು,
ಉನ್ನತೀಕರಿಸಲು
ಈಗಾಗಲೇ
ಶಾಲಾ
ಕಾಲೇಜುಗಳನ್ನು
ಗುರುತಿಸಲಾಗಿದ್ದು,
ಮೂಲಸೌಕರ್ಯ
ಕಲ್ಪಿಸಲು
ಕ್ರಮ
ರಾಜ್ಯದ ರಸ್ತೆಗಳ ಅಭಿವೃದ್ಧಿ
-ಪೆರಿಫೆರಲ್
ರಿಂಗ್
ರಸ್ತೆ:
ಸುಮಾರು
6500
ಕೋಟಿ
ರೂ.
ವೆಚ್ಚದಲ್ಲಿ
ಪೆರಿಫೆರಲ್
ರಿಂಗ್
ರಸ್ತೆ
ನಿರ್ಮಿಸಲು
ಉದ್ದೇಶಿಸಲಾಗಿದೆ.
ಮುಂದಿನ
ಮೂರು
ವರ್ಷಗಳಲ್ಲಿ
ಈ
ಯೋಜನೆ
ಅನುಷ್ಠಾನಗೊಳಿಸಲು
ಉದ್ದೇಶಿಸಿದೆ.
ಈ
ಯೋಜನೆಗೆ
ಹೈಬ್ರಿಡ್
ಆನ್ಯುಟಿ
ಮಾದರಿಯಲ್ಲಿ
ಸಂಪನ್ಮೂಲ
ಕ್ರೋಢೀಕರಣ
ಮಾಡಲಾಗುವುದು.
-ಭೂಸ್ವಾಧೀನ
ಪ್ರಕ್ರಿಯೆಗೆ
ಇಂದು
ಅತಿ
ಹೆಚ್ಚು
ಅನುದಾನ
ಅಗತ್ಯವಿದೆ.
ಇದನ್ನು
ಕಡಿಮೆಗೊಳಿಸಲು
ಇರುವ
ವಿವಿಧ
ಸಾಧ್ಯತೆಗಳನ್ನು
ಪರಿಶೀಲಿಸಲಾಗುತ್ತಿದೆ.
ಮುಂದಿನ
ಮೂರು
ತಿಂಗಳಲ್ಲಿ
ಟೆಂಡರ್
ಪ್ರಕ್ರಿಯೆಗೆ
ಚಾಲನೆ
ನೀಡಲಾಗುವುದು.
-ಘನತ್ಯಾಜ್ಯ
ವಿಲೇವಾರಿ,
ಬೆಂಗಳೂರು
ನಗರದ
ಅತಿ
ದೊಡ್ಡ
ಸವಾಲುಗಳಲ್ಲಿ
ಒಂದು.
ಇದನ್ನು
ಸಮರ್ಥವಾಗಿ
ಪಾರದರ್ಶಕವಾಗಿ
ನಿಭಾಯಿಸುವುದು
ಸರ್ಕಾರದ
ಆದ್ಯತೆ.
ಒಂದೂಕಾಲು
ಕೋಟಿ
ಜನಸಂಖ್ಯೆ
ಇರುವ
ನಗರದಲ್ಲಿ
ಪ್ರತಿ
ದಿನ
ಸರಾಸರಿ
4000-4200
ಟನ್
ತ್ಯಾಜ್ಯ
ಉತ್ಪಾದನೆಯಾಗುತ್ತಿದೆ.
ಇದರ
ವೈಜ್ಞಾನಿಕ
ವಿಲೇವಾರಿಗೆ
ಹಲವು
ಅಡೆತಡೆಗಳಿವೆ.
ಅಸಮರ್ಪಕ
ತ್ಯಾಜ್ಯ
ವಿಂಗಡಣೆ,
ತ್ಯಾಜ್ಯ
ಸಂಸ್ಕøಣಾ
ಸಾಮಥ್ರ್ಯದ
ಅಸಮರ್ಪಕ
ಬಳಕೆ,
ಗುತ್ತಿಗೆದಾರರ
ಅಸಮರ್ಪಕ
ಕಾರ್ಯನಿರ್ವಹಣೆ,
ಸ್ಥಳೀಯರ
ಪ್ರತಿರೋಧದಂತಹ
ಸಮಸ್ಯೆಗಳಿವೆ.
ಅವುಗಳನ್ನು
ನಿವಾರಿಸಲು
ಅಧಿಕಾರಿಗಳ
ಸಭೆ
ಕರೆದು
ಚರ್ಚಿಸಿ
ಕ್ರಮ
ಕೈಗೊಳ್ಳಲಾಗುವುದು.
ಸುಸ್ಥಿರ ಕೃಷಿಗೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ: ಸಮಿತಿ ವರದಿ ಸಲ್ಲಿಕೆ
-ಸುಸ್ಥಿರ
ಮತ್ತು
ಲಾಭದಾಯಕ
ಕೃಷಿ
ಪದ್ಧತಿ
ಅಳವಡಿಸುವ
ಮೂಲಕ
ರೈತರ
ಬದುಕು
ಹಸನುಗೊಳಿಸುವ
ಆಶಯ
ಸರ್ಕಾರದ್ದು.
ಇದಕ್ಕಾಗಿ
ಈ
ವರ್ಷ
ಎರಡು
ಮಹತ್ವಾಕಾಂಕ್ಷಿ
ಯೋಜನೆಗಳನ್ನು
ರೂಪಿಸಿದೆ.
-ಇಸ್ರೇಲ್
ಮಾದರಿ
ಕೃಷಿ
ಪದ್ಧತಿ:
ಕೃಷಿ
ಪದ್ಧತಿಯಲ್ಲಿ
ನಿಖರತೆ,
ಆಧುನಿಕ
ತಂತ್ರಜ್ಞಾನ
ಬಳಕೆಯ
ಮೂಲಕ
ಕೃಷಿಯನ್ನು
ಲಾಭದಾಯಕವಾಗಿಸುವ
ನಿಟ್ಟಿನಲ್ಲಿ
ಹಾಗೂ
ನೀರಿನ
ಸಮರ್ಪಕ
ಬಳಕೆಯನ್ನು
ಉತ್ತೇಜಿಸುವ
ನಿಟ್ಟಿನಲ್ಲಿ
ಕೃಷಿ
ಮತ್ತು
ತೋಟಗಾರಿಕೆ
ಇಲಾಖೆಗಳ
ಮೂಲಕ
ಒಟ್ಟು
8
ಜಿಲ್ಲೆಗಳಲ್ಲಿ
ಪ್ರಾಯೋಗಿಕವಾಗಿ
ಇಸ್ರೇಲ್
ಮಾದರಿ
ಕೃಷಿ
ಪದ್ಧತಿ
ಅನುಷ್ಠಾನಕ್ಕೆ
ಸಿದ್ಧತೆ
ನಡೆದಿದೆ.
ಪ್ರತಿ
ಜಿಲ್ಲೆಯಲ್ಲಿ
5
ಸಾವಿರ
ಹೆಕ್ಟೇರ್
ಜಮೀನಿಗೆ
ಈ
ಪದ್ಧತಿ
ಅಳವಡಿಸಲು
ಒಟ್ಟು
300
ಕೋಟಿ
ರೂ.
ಅನುದಾನ
ನಿಗದಿ
ಪಡಿಸಲಾಗಿದೆ.
-
ಈ
ಯೋಜನೆಯನ್ನು
ರಾಜ್ಯದಲ್ಲಿ
ಅನುಷ್ಠಾನಗೊಳಿಸುವ
ಬಗ್ಗೆ
ಅಧ್ಯಯನ
ನಡೆಸಿ,
ಅನುಷ್ಠಾನದ
ವಿಧಾನದ
ಕುರಿತು
ವರದಿ
ನೀಡಲು
ಸಹಕಾರ
ಇಲಾಖೆಯ
ಹೆಚ್ಚುವರಿ
ಕಾರ್ಯದರ್ಶಿಗಳ
ಅಧ್ಯಕ್ಷತೆಯಲ್ಲಿ
ಸಮಿತಿಯನ್ನು
ರಚಿಸಿದ್ದು,
ಈ
ಸಮಿತಿಯು
ಸರ್ಕಾರಕ್ಕೆ
ವರದಿ
ಸಲ್ಲಿಸಿದೆ.
ಇಸ್ರೇಲ್ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಸಿಎಂ ಎಚ್ಡಿಕೆರಿಂದ ಪಾಠ, ಸಂವಾದ