ದೇವಸ್ಥಾನದ ಅರ್ಚಕರಿಗೆ ವರ ಕರುಣಿಸಿದ ಮೈತ್ರಿ ಸರ್ಕಾರ
ಬೆಂಗಳೂರು, ಜೂನ್ 15: ಮುಜರಾಯಿ ದೇವಾಲಯಗಳ ಅರ್ಚಕರಿಗೆ ಮೈತ್ರಿ ಸರ್ಕಾರ ವರ ಕರುಣಿಸಿದೆ. ಅರ್ಚಕರಿಗೆ ಸಂಬಳ= ಏರಿಸುವ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.
ಅರ್ಚಕರಿಗೆ ಸರ್ಕಾರಿ ಸಿಬ್ಬಂದಿ ಮಾದರಿಯಲ್ಲಿ ಸಂಬಳ ನೀಡುವ ಪ್ರಸ್ತಾವಕ್ಕೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಮುಜರಾಯಿ ಇಲಾಖೆ ಅಧೀನದಲ್ಲಿ ಸಾವಿರಾರು ದೇವಸ್ಥಾನಗಳಿವೆ ಅದರಲ್ಲಿ ವಿವಿಧ ದರ್ಜೆಗಳಾಗಿ ವಿಂಗಡನೆ ಮಾಡಿ ಅರ್ಚಕರನ್ನು ನೇಮಿಸಲಾಗಿದೆ.
ಸರ್ಕಾರಿ ಕೆಲಸಕ್ಕೆ ಸಮನಾದ ವೇತನವನ್ನು ಮುಜರಾಯಿ ಇಲಾಖೆಯ ಅರ್ಚಕರಿಗೆ ನೀಡಬೇಕು ಎಂದು ಸರ್ಕಾರ ನಿನ್ನೆಯಷ್ಟೆ ನಿರ್ಣಯ ತೆಗೆದುಕೊಂಡಿದ್ದು, ಎ ದರ್ಜೆ ದೇವಸ್ಥಾನದ ಅರ್ಚಕರಿಗೆ 11600 ರಿಂದ 24600 ರವರೆಗೆ ಮತ್ತು ಬಿ-ದರ್ಜೆ ದೇವಸ್ಥಾನದ ಅರ್ಚಕರಿಗೆ 7275 ರಿಂದ 17250 ರ ವರೆಗೆ ವೇತನ ನೀಡಲು ಸಂಪುಟವು ಒಪ್ಪಿಗೆ ನೀಡಿದೆ.

3500 ಅರ್ಚಕರಿಗೆ ಈ ನಿರ್ಣಯದಿಂದ ಲಾಭವಾಗಲಿದೆ. ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿ 34558 ದೇವಸ್ಥಾನಗಳು ಒಳಪಟ್ಟಿವೆ.












Click it and Unblock the Notifications