ಸಿಎಂ ಯಡಿಯೂರಪ್ಪ ಹೇಳಿದ 'ಕೊರೊನಾ ಕಂಟ್ರೋಲ್ ತಪ್ಪಿರುವ ಜಿಲ್ಲೆಗಳು'ಇವೇನಾ?
ಕೊರೊನಾ ಪಾಸಿಟೀವ್ ಕೇಸ್ ಗಳು ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಏರುತ್ತಿದೆ. ಕರ್ನಾಟಕದಲ್ಲೂ ಲಾಕ್ ಡೌನ್ ಮಾಡಬಹುದು ಎನ್ನುವ ಮಾತಿಗೆ ಸರಕಾರ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾಗಿದೆ.
Recommended Video
ರಾಜ್ಯದ ಹಲವು ಪ್ರದೇಶಗಳಲ್ಲಿ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಪ್ರಮುಖವಾಗಿ, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ವಾರದ ಎರಡು ದಿನ (ಶನಿವಾರ, ಭಾನುವಾರ) ಕರ್ಪ್ಯೂ ವಿಧಿಸಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಈ ಬಗ್ಗೆ ಸರಕಾರದಿಂದ ಅಧಿಕೃತ ಸ್ಪಷ್ಟನೆ ಬರಬೇಕಷ್ಟೇ.
ವಿಧಾನಸೌಧದಲ್ಲಿ ಗುರುವಾರ (ಜುಲೈ 9) ಸಿಎಂ ಯಡಿಯೂರಪ್ಪ ಸಂಪುಟ ಸಭೆಯನ್ನು ನಡೆಸಿದ್ದಾರೆ. "ಕೇಂದ್ರ ತಂಡ ಕೆಲ ಸಲಹೆಗಳನ್ನು ನೀಡಿದೆ. ಹೆಚ್ಚುವರಿಯಾಗಿ ಆ್ಯಂಬುಲೆನ್ಸ್ ಖರೀದಿ ಮಾಡಲು ನಿರ್ಧರಿಸಲಾಗಿದೆ"ಎಂದು ಯಡಿಯೂರಪ್ಪ ಹೇಳಿದರು.
"ಕೆಲವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಸ್ವಲ್ಪ ಕಂಟ್ರೋಲ್ ತಪ್ಪಿದೆ" ಎಂದು ಹೇಳಿದ ಮುಖ್ಯಮಂತ್ರಿಗಳು, "ಅಲ್ಲಿ ಏನೇನು ತುರ್ತಾಗಿ ಮಾಡಬೇಕೋ ಅದಕ್ಕೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದು ಕೊಳ್ಳುತ್ತಾರೆ"ಎಂದು ಹೇಳಿದ್ದಾರೆ. ಸಕ್ರಿಯ ಪ್ರಕರಣ ಆಧರಿಸಿ, ಸಿಎಂ ಹೇಳಿರಬಹುದಾದ ಕಂಟ್ರೋಲ್ ತಪ್ಪಿರುವ ಜಿಲ್ಲೆಗಳ ಪಟ್ಟಿ?

ಬೆಂಗಳೂರು ನಗರ
ಒಟ್ಟು ಸೋಂಕಿತರು: 12,509
ಒಟ್ಟು ಬಿಡುಗಡೆಯಾದವರು: 2,228
ಒಟ್ಟು ಸಕ್ರಿಯ ಪ್ರಕರಣಗಳು: 10,103
ಮರಣ: 177

ದಕ್ಷಿಣ ಕನ್ನಡ
ಒಟ್ಟು ಸೋಂಕಿತರು: 1,534
ಒಟ್ಟು ಬಿಡುಗಡೆಯಾದವರು: 650
ಒಟ್ಟು ಸಕ್ರಿಯ ಪ್ರಕರಣಗಳು: 859
ಮರಣ: 23

ಬಳ್ಳಾರಿ
ಒಟ್ಟು ಸೋಂಕಿತರು: 1,447
ಒಟ್ಟು ಬಿಡುಗಡೆಯಾದವರು: 627
ಒಟ್ಟು ಸಕ್ರಿಯ ಪ್ರಕರಣಗಳು: 780
ಮರಣ: 40

ಧಾರವಾಡ
ಒಟ್ಟು ಸೋಂಕಿತರು: 757
ಒಟ್ಟು ಬಿಡುಗಡೆಯಾದವರು: 276
ಒಟ್ಟು ಸಕ್ರಿಯ ಪ್ರಕರಣಗಳು: 461
ಮರಣ: 20

ಕಲಬುರಗಿ
ಒಟ್ಟು ಸೋಂಕಿತರು: 1,816
ಒಟ್ಟು ಬಿಡುಗಡೆಯಾದವರು: 1,351
ಒಟ್ಟು ಸಕ್ರಿಯ ಪ್ರಕರಣಗಳು: 435
ಮರಣ: 30












Click it and Unblock the Notifications