ಹೇಳಿಕೆ ತಪ್ಪಾಗಿ ವರದಿ, ಚಾನೆಲ್ ವಿರುದ್ಧ ಕುಮಾರಸ್ವಾಮಿ ಬೇಸರ
ಬೆಂಗಳೂರು, ಫೆಬ್ರವರಿ 19: ಪುಲ್ವಾಮಾದಲ್ಲಿ ಭಯೋತ್ಪಾದಕ ಕೃತ್ಯದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಾಸಗಿ ಸುದ್ದಿ ವಾಹಿನಿಯೊಂದು ತಿದ್ದಿದೆ ಎಂದು ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಆರೋಪ ಮಾಡಿದ್ದಾರೆ.
ಟೈಮ್ಸ್ ನೌ ವಾಹಿನಿಯು, ತಾವು ನೀಡಿದ್ದ ಹೇಳಿಕೆಯನ್ನು ತಿದ್ದಿದೆ ಅಲ್ಲದೆ, ತಪ್ಪಾಗಿ ಅರ್ಥ ಮಾಡಿಕೊಂಡು ಋಣಾತ್ಮಕ ಅರ್ಥ ಹೊಮ್ಮುವಂತೆ ವರದಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸಿದ್ದ ಸಿಎಂ ಕುಮಾರಸ್ವಾಮಿ, ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಜೊತೆಗೆ, ದೇಶದ ಒಳಗಿನ ಉಗ್ರರನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದ್ದರು. ಆದರೆ ಇದನ್ನು ತಪ್ಪಾಗಿ ವರದಿ ಮಾಡಿದ ಚಾನೆಲ್, ಭಯೋತ್ಪಾದನೆಗೆ ಭಾರತವೇ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ವರದಿ ಪ್ರಕಟಿಸಿತ್ತು.

ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದು ಸರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಸಹ ಟೈಮ್ಸ್ ನೌ ವರದಿಯಲ್ಲಿ ಹೇಳಿತ್ತು. ವರದಿಯು ತಪ್ಪಿನಿಂದ ಕೂಡಿದೆ ಎಂದು ಸಿಎಂ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
Dear @timesnow, it is highly condemnable to misquote me on a such serious issue. You have not only misquoted, but also misunderstood what I said. I did not blame India; I said that along with destroying the enemies we also need to make our country stronger. https://t.co/7ocCHgw9An
— H D Kumaraswamy (@hd_kumaraswamy) February 19, 2019
ಈ ತಪ್ಪು ವರದಿಯನ್ನು ಖಂಡಿಸುತ್ತೇನೆ, ನೀವು ತಪ್ಪು ವರದಿ ಮಾಡಿದ್ದು ಮಾತ್ರವಲ್ಲ ನಾನು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ, ಇಂತಹಾ ಗಂಭೀರ ವಿಷಯದಲ್ಲಿ ಹೀಗೆ ಮಾಡಿರುವುದು ಸರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.











Click it and Unblock the Notifications